ದೆಹಲಿಗೆ ಹೋದ ರಮೇಶ್ ಜಾರಕಿಹೊಳಿ ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ
ಬೆಂಗಳೂರು, ಮಾ.18: ರಮೇಶ್ ಜಾರಕಿಹೊಳಿ ಮನವೊಲಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಎಷ್ಟೇ ಪ್ರಯತ್ನ ಪಟ್ಟರೂ ಫಲನೀಡುವಂತೆ ಕಾಣುತ್ತಿಲ್ಲ.
ಒಂದು ವಾರದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ಅವರು ನಡೆಸಿದ ಸಭೆಯಿಂದಾಗಿ ಕಾಂಗ್ರೆಸ್ಗೆ ತಲೆ ನೋವು ಉಂಟಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಖುದ್ದು ರಮೇಶ್ ಜಾರಕಿಹೊಳಿ ಮನೆಗೆ ತೆರಳಿ ಪಕ್ಷ ಬಿಡದಂತೆ ಮನವಿ ಮಾಡಿದ್ದರು.
ಅದಾದ ಬಳಿಕ ಸ್ವಲ್ಪ ದಿನಗಳ ಕಾಲ ಅವರು ಎಲ್ಲಿದ್ದಾರೇ ಎನ್ನವುದೇ ಯಾರಿಗೂ ತಿಳಿದಿರಲಿಲ್ಲಿ, ಇದೀಗ ಭಾನುವಾರ ರಾತ್ರಿ ಏಕಾ ಏಕಿ ದೆಹಲಿಗೆ ತೆರಳಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡಿರುವ ಅವರು ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಇಲ್ಲಿ ಅಥವಾ ರಾಜ್ಯದ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಮಾನಸಿಕವಾಗಿ ಪಕ್ಷ ಬಿಟ್ಟಿರುವ ಅವರು ಬಿಜೆಪಿ ಸೇರುತ್ತಾರೆ ಎನ್ನುವ ಬಲವಾದ ಮಾತು ಕೇಳಿಬರುತ್ತಿದೆ.
ಅದಾಗಲೇ ಅವರು ಒಂದೆರಡು ಸುತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಉಮೇಶ್ ಜಾಧವ್, ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾದರಿಯಲ್ಲೇ ಲೋಕಸಭೆ ಚುನಾವಣೆಗೆ ಮುನ್ನವೇ ಇವರು ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಇದೆ.
ಇತ್ತೀಚೆಗೆ
ಕೆಪಿಸಿಸಿ
ಕಚೇರಿಯಲ್ಲಿ
ನಡೆದ
ಬೆಳಗಾವಿ
ಲೋಕಸಭೆ
ಕ್ಷೇತ್ರದ
ಅಭ್ಯರ್ಥಿ
ಆಯ್ಕೆ
ಸಂಬಂಧ
ಚರ್ಚೆಯಲ್ಲೂ
ಅವರು
ಭಾಗಿಯಾಗಿರಲಿಲ್ಲ.
ಇದೀಗ
ದಿಢೀರ್
ದಿಲ್ಲಿಗೆ
ತೆರಳಿದ್ದು
ಕುತೂಹಲ
ಕೆರಳಿಸಿದೆ.
ನಾಗೇಂದ್ರ
ಇದ್ದಾರೆ:
ದಿಲ್ಲಿಯಲ್ಲಿ
ಕಾಂಗ್ರೆಸ್ನ
ಮತ್ತೊಬ್ಬ
ಶಾಸಕ
ಬಿ.
ನಾಗೇಂದ್ರ
ಕೂಡ
ಇದ್ದಾರೆ
ಎನ್ನಲಾಗುತ್ತಿದ್ದು,
ಅವರು
ಕೂಡ
ತಮ್ಮ
ಸಹೋದರ
ವೆಂಕಟೇಶ್
ಪ್ರಸಾದ್?ರನ್ನು
ಬಿಜೆಪಿಗೆ
ಸೇರಿಸಿ,
ಬಳ್ಳಾರಿಯಿಂದ
ಅವರನ್ನೇ
ಕಣಕ್ಕಿಳಿಸುವ
ಸಿದ್ಧತೆ
ನಡೆಸಿದ್ದಾರೆ
ಎನ್ನಲಾಗಿದೆ.