Get Updates
Get notified of breaking news, exclusive insights, and must-see stories!

ಕೊಡಗಿನ ಜನರ ಪುನರ್ವಸತಿಗೆ 10 ಲಕ್ಷ ನೀಡಿದ ರಾಜೀವ್ ಚಂದ್ರಶೇಖರ್

Recommended Video

      Kodagu floods: Bangalore drone start-up helps locate stranded people

      ಬೆಂಗಳೂರು, ಆಗಸ್ಟ್ 21: ಪ್ರವಾಹ ಪೀಡಿತ ಕೊಡಗಿಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು 10 ಲಕ್ಷ ರೂಪಾಯಿ ಧನ ಸಹಾಯ ನೀಡಿದ್ದಾರೆ.

      ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ತಮ್ಮ, ಹಲವು ಉದ್ಯಮಪತಿ ಗೆಳೆಯರನ್ನು ಸಂಪರ್ಕಿಸಿ ಕೊಡಗು ಕಟ್ಟಲು ಸಹಾಯ ನೀಡುವಂತೆ ಅವರು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

      'ಈಗಾಗಲೇ ನಾನು ಹಲವು ಎನ್‌ಜಿಓ ಮತ್ತು ಸಾರ್ವಜನಿಕ ಸಂಘಗಳ ಜೊತೆಯಾಗಿ ಕೊಡಗಿನ ಜನತೆಯ ಸಹಾಯಕ್ಕಾಗಿ ದುಡಿಯುತಿದ್ದೇನೆ' ಎಂದು ಮಾಹಿತಿ ನೀಡಿದ್ದಾರೆ.

      Rajeev Chandrashekhar donate 10 lakh rupees to Kodagu flood victims

      ಕೊಡಗಿನ ಜನರಿಗೆ ಪುನರ್ವಸತಿ ಕಲ್ಪಿಸಬೇಕಿರುವುದು ಮೊದಲ ಆದ್ಯತೆ ಆಗಬೇಕು ಎಂದು ಹೇಳಿರುವ ಅವರು, ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ತಮ್ಮ ಸಂಸದರ ನಿಧಿಯನ್ನು ಕೊಡಗಿನ ಪುನರ್ವಸತಿಗೆ ಬಳಸುವುದಾಗಿಯೂ ಅವರು ಹೇಳಿದ್ದಾರೆ.

      ಕೊಡಗಿಗೆ ಹರಿದು ಬರುತ್ತಿರುವ ಸಹಾಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ರಾಜೀವ್ ಚಂದ್ರಶೇಖರ್ ಅವರು, ಕೊಡಗಿನ ನೋವಿಗೆ ಕರ್ನಾಟಕದ ಜನ ಸ್ಪಂದಿಸಿರುವ ರೀತಿ ಭಾವುಕನನ್ನಾಗಿಸಿದೆ ಎಂದಿದ್ದಾರೆ. ಅಲ್ಲದೆ ತಮ್ಮ ಒಡೆತನದ ಸುದ್ದಿ ಪತ್ರಕೆ ಮತ್ತು ಮಾಧ್ಯಮ ಸಂಸ್ಥೆ ಈಗಾಗಲೇ 32 ಲಾರಿ ಲೋಡಿನ ಪರಿಹಾರ ಸಾಮಗ್ರಿಗಳನ್ನು ಕೊಡಗಿಗೆ ತಲುಪಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+