ರಾಜರಾಜೇಶ್ವರಿ ನಗರ ಫಲಿತಾಂಶ : ಪಕ್ಷೇತರರಲ್ಲಿ ವೆಂಕಟ್ ಅವರೇ ಬೆಸ್ಟ್
ಬೆಂಗಳೂರು, ಮೇ 31 : "ನಾನು ಯಾರಿಗೂ ಯಾವುದೇ ರೀತಿಯ ಆಮಿಷವೊಡ್ಡಿಲ್ಲ. ಪ್ರಾಮಾಣಿಕವಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಅದಕ್ಕೆಂದೇ ನಾನು ಸೋತಿದ್ದೇನೆ. ತಪ್ಪು ನನ್ನದೋ ಜನರದ್ದೋ?"
ಹೀಗೆಂದು ನೋವಿನಿಂದ ಕೇಳಿದವರು ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, 'ಫೈರಿಂಗ್ ಸ್ಟಾರ್' ವೆಂಕಟರಾಮ್ ಅಲಿಯಾಸ್ ಹುಚ್ಚ ವೆಂಕಟ್ ಅವರು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು ಪಡೆದಿರುವ ಮತಗಳು 620.
ಚುನಾವಣಾ ಅಕ್ರಮ ನಡೆದಿದೆ ಎಂದು ಮುಂದೂಡಲಾಗಿದ್ದ ಈ ಕ್ಷೇತ್ರದಲ್ಲಿ ಇತರ ಸ್ಪರ್ಧಿಗಳು ಪಡೆದಿರುವ ಮತಗಳು ಇಂತಿವೆ. ಕಾಂಗ್ರೆಸ್ಸಿನ ಮುನಿರತ್ನ 1,08,064, ಬಿಜೆಪಿಯ ಮುನಿರಾಜು ಗೌಡ 82,572 ಮತ್ತು ಜೆಡಿಎಸ್ ನ ಜಿಎಚ್ ರಾಮಚಂದ್ರ 60,360 ಮತಗಳನ್ನು ಗಳಿಸಿದ್ದಾರೆ.
ಇಂಥ ಘಟಾನುಘಟಿ ಸ್ಪರ್ಧಿಗಳ ನಡುವೆ ಯಾವುದೇ ಅಬ್ಬರವಿಲ್ಲ, ಅಕ್ಷರಶಃ ಪ್ರಚಾರವೂ ಇಲ್ಲದೆ, ಮತದಾರರಿಗೆ ಯಾವುದೇ ಆಮಿಷ ಒಡ್ಡದೆ, ಯಾವುದೇ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ, ಆದರೆ, ಅಪಾರ ಜನಾನುರಾಗಿ ಆಗಿರುವ ವೆಂಕಟ್ ಅವರು ಪಡೆದಿರುವ ಮತಗಳು ನೋಟಾಗಿಂತಲೂ ಕಡಿಮೆ.
ಅವರು ಚುನಾವಣೆಯಲ್ಲಿ ಡೆಪಾಸಿಟ್ ಕಳೆದುಕೊಂಡಿರಬಹುದು. ಆದರೆ, ರಾಜಕೀಯದಲ್ಲಿ ಅವರಿಲ್ಲದಿದ್ದರೂ, ರಾಜಕಾರಣ ಅವರಿಗೆ ಗೊತ್ತಿಲ್ಲದಿದ್ದರೂ ಜನರ ಪ್ರೀತಿಯನ್ನು ಕಳೆದುಕೊಂಡಿಲ್ಲ ಎಂಬುದಕ್ಕೆ ಅವರು ಪಡೆದಿರುವ ಅಷ್ಟು ಮತಗಳೇ ಸಾಕ್ಷಿ. ಅಲ್ಲದೆ, ಅವರ ಸೋಲಿನ ಕುರಿತಂತೆ ಹಲವರು ಹಲವು ಬಗೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇತರ ತಮಾಷೆಯ ಪ್ರತಿಕ್ರಿಯೆಗಳು ಕೂಡ ಇಲ್ಲಿವೆ.
|
ಮುನಿರತ್ನ ಹೀಗೂ ಉಂಠೇ?
ಮುನಿರತ್ನ ಅವರು 41,162 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಇಷ್ಟೆಲ್ಲಾ ಲೀಡ್ ತಗೊಂಡಿದ್ದರೂ ಮುನಿರತ್ನ ಅವರು ಅಕ್ರಮ ಎಸಗಿದ್ದು ಏಕೆ? ನಕಲಿ ವೋಟರ್ ಐಡಿ ಮಾಡಿದ್ದು ಯಾಕೆ? (ಮತಚೀಟಿ ಸಂಗ್ರಹಿಸಿದ ಆರೋಪ ಅವರ ಮೇಲಿತ್ತು) ನಮ್ಮನ್ನೆಲ್ಲಾ ಕಾಡುವ ಕಾಡೋ ಕಡೆಯ ಪ್ರಶ್ನೆ... ಹೀಗೂ ಉಂಠೆ? ಎಂದು ಲೋಹಿತ್ ಅವರು ತಮಾಷೆ ಮಾಡಿದ್ದಾರೆ.
|
ವೆಂಕಟ್ ಅವರಿಗೂ ವೋಟ್ ಹಾಕೋರು ಇದ್ದಾರಾ?
ಹುಚ್ಚ ವೆಂಕಟ್ ಅವರಿಗೂ ವೋಟ್ ಹಾಕೋರು ಇದ್ದಾರಾ? ಶಿವ ಶಿವಾ... ಇನ್ನೂ ಏನೇನು ಬಾಕಿ ಇದೆಯೋ ಎಂದು ಶ್ವೇತಾ ಆನಂದ್ ಅವರು ಬಾಯಿಯ ಮೇಲೆ ಅಚ್ಚರಿಯಿಂದ ಬೆರಳಿಟ್ಟಿದ್ದಾರೆ. ಹುಚ್ಚ ವೆಂಕಟ್ ಅವರು ಬಿಡಿ, ಇನ್ನೂ ಎಂಥೆಂಥವರೋ ಭರ್ಜರಿ ಪ್ರಚಾರ ಮಾಡಿಯೂ ಇಷ್ಟು ಕೂಡ ಮತ ಗಳಿಸಿರುವುದಿಲ್ಲ. ಅವರಿಗಿಂತ ಹುಚ್ಚ ವೆಂಕಟ್ ಅವರೇ ಎಷ್ಟೋ ಮೇಲು ಅಲ್ಲವೆ. ನೀರಿಗಿಳಿದ ಮೇಲೆ ತಾನೆ ಆಳದ ಅರಿವಾಗುವುದು?
|
ಹುಚ್ಚ ವೆಂಕಟ್ ವರ್ಸಸ್ ನೋಟಾ
ರಾಜರಾಜೇಶ್ವರಿ ನಗರದಲ್ಲಿ ಏನು ಜಿದ್ದಾಜಿದ್ದಿ ಫೈಟ್ ಅಂತೀರಾ? ಕಾಂಗ್ರೆಸ್, ಬಿಜೆಪಿ ನಡುವೆ ಅಲ್ಲ! ಹುಚ್ಚ ವೆಂಕಟ್ ಮತ್ತು ನೋಟಾ ನಡುವೆ! ಯಾರು ಗೆಲ್ತಾರೆ ಅಂತ ಅತ್ಯಂತ ಕುತೂಹಲದಿಂದ ನೋಡುತ್ತಿದ್ದೇನೆ. ಯಾರು ಗೆಲ್ತಾರೆ? ನಾನು ನೋಟಾ ಮೇಲೆ ಬೇಕಿದ್ರೆ ಬೆಟ್ಟಿಂಗ್ ಕಟ್ತೇನೆ ಎಂದು ರಾಮಚಂದ್ರ ಎಂಬುವವರು ತಮ್ಮ ಹಾಸ್ಯ ಲಹರಿಯನ್ನು ಹರಿಯಬಿಟ್ಟಿದ್ದಾರೆ.
|
ವೆಂಕಟ್ ಸಾಧನೆಯೇನು ಕಮ್ಮಿಯದಲ್ಲ
ವೆಂಕಟ್ ಗಳಿಸಿರುವ ವೋಟ್ ಗಳ ಬಗ್ಗೆ ಅಷ್ಟು ಕೇವಲವಾಗಿ ಮಾತಾಡುವುದು ಅಷ್ಟು ತರವಲ್ಲ. ಏಕೆಂದರೆ, ಉಳಿದೆಲ್ಲ ಪಕ್ಷೇತರರಿಗಿಂತ ಕಾಂಟ್ರೋವರ್ಸಿಯಲ್ ರಿಯಾಲಿಟಿ ಶೋ ಸ್ಟಾರ್ ಹುಚ್ಚ ವೆಂಕಟ್ ಅವರು ಹೆಚ್ಚು ಮತ ಗಳಿಸಿದ್ದಾರೆ. ಇದು ಸಾಧನೆ ಅಲ್ಲವೆ? ವೆಂಕಟ್ ಅವರು ಪಡೆದದ್ದು 764 ವೋಟುಗಳು. ಏನೇ ಆಗ್ಲಿ, ಲೋಕಸಭೆ ಚುನಾವಣೆಯಲ್ಲೂ ವೆಂಕಟ್ ಅವರು ಸ್ಪರ್ಧಿಸಲಿದ್ದಾರಂತೆ. ಪ್ರಧಾನಿಯಾಗುವುದೇ ನನ್ನ ಕನಸು ಎಂದೂ ಅವರು ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications