ರೈಲಿನಲ್ಲಿ ದರೋಡೆ ಮಾಡುತ್ತಿದ್ದಾಗ ಗ್ಯಾಂಗ್ ಪೊಲೀಸರ ಬಲೆಗೆ
ಬೆಂಗಳೂರು, ಫೆಬ್ರವರಿ 28: ರೈಲಿನಲ್ಲಿ ದರೋಡೆ ಮಾಡುತ್ತಿರುವಾಗಲೇ ದರೋಡೆಕೋರರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರೈಲ್ಎ ಪೊಲೀಸರಿಎ ಹಲವು ತಿಂಗಳುಗಳಿಂದ ತಲೆನೋವಾಗಿದ್ದ ಕಳ್ಳತನ ಮತ್ತು ದರೋಡೆ ಗ್ಯಾಂಗ್ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಸಹ ಪ್ರಯಾಣಿಕರ ಸೋಗಿನಲ್ಲಿ ರೈಲ್ವೆ ಪ್ರಯಾಣಿಕರ ಲಗೇಜ್ ಇಳಿಸಲು ನೆರವಾಗುವ ಸೋಗಿನಲ್ಲಿ ಅವರ ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನು ಲಪಟಾಯಿಸುತ್ತಿದ್ದರು. ದೆಹಲಿ ಮೂಲದ ಐವರು ಕುಖ್ಯಾತ ಕಳ್ಳರನ್ನು ಬೆಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.ಗಳನ್ನು ಮಾಮೂಲು
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ದರೋಡೆ
ದೆಹಲಿ ನಾರ್ಥ್ವೆಸ್ಟ್ ಸುಲ್ತಾನ್ಪುರಿಯ ರಣವೀರ ಸಿಂಗ್, ಸತ್ಬೀರ್ ಕುಮಾರ್, ಹರಿಯಾಣದ ಸುಭಾಷ್ ಬಂಧಿತರು.ಅಂತಾರಾಜ್ಯ ಚೋರರ ಬಂಧನದಿಂದ ಸುಮಾರು ಹತ್ತು ಪ್ರಕರಣಗಳನ್ನು ಪತ್ತೆ ಹಚ್ಚಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲುಗಳಲ್ಲಿ ಮಾಮೂಲು ಪ್ರಯಾಣಿಕರಂತೆ ತೆರಳುವ ಗ್ಯಾಂಗ್ ಅಕ್ಕಪಕ್ಕದವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಮಾತಿನ ನಡುವೆ ಅವರು ಇಳಿದುಕೊಳ್ಳುವ ನಿಲ್ದಾಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಹೆಚ್ಚಾಗಿ ವೃದ್ಧರು,ಒಂಟಿ ಪ್ರಯಾಣಿಕರನ್ನು ಟಾರ್ಗೆಟ್ ಮಾಡುತ್ತಿದ್ದರು. ಲಗೇಜ್ ಇಳಿಸುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದರು.