ಬಾಗಲಕೋಟೆಯಲ್ಲಿ ತಲೆ, ತುಮಕೂರಿನಲ್ಲಿ ದೇಹ, ಮಂಡ್ಯದಲ್ಲಿ ಮಹಿಳೆ ನಾಪತ್ತೆ!
ಬೆಂಗಳೂರು, ಜು. 26: ಮಹಿಳೆಯನ್ನು ಹತ್ಯೆ ಮಾಡಿದ್ದ ಹಂತಕರು ದೇಹವನ್ನು ರೈಲ್ವೇ ಹಳಿ ಮೇಲೆ ಬಿಸಾಕಿದ್ದರು. ದೇಹ ತುಂಡರಿಸಿದ ಬಳಿಕ ತಲೆಯನ್ನು ಕವರ್ನಲ್ಲಿ ಸುತ್ತಿ ಚಲಿಸುತ್ತಿದ್ದ ಲಾರಿಯಲ್ಲಿ ಬಿಸಾಡಿದ್ದರು. ಸಣ್ಣ ಸುಳಿವು ಇಲ್ಲದ ಈ ಹತ್ಯೆ ಪ್ರಕರಣ ರಹಸ್ಯ ಬೇಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಗಲಕೋಟೆಯ ಲಾರಿಯಲ್ಲಿ ತಲೆ!
ಜು. 20 ರಂದು ತುಮಕೂರು ರಸ್ತೆಯ ಹಿರೇಹಳ್ಳಿ ನಿಡುವಂದ ರೈಲ್ವೇ ಹಳಿ ಬಳಿ ರುಂಡ ಇಲ್ಲದ ಮಹಿಳೆಯ ಮೃತ ದೇಹ ಪತ್ತೆಯಾಗಿತ್ತು. ಈ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದರೂ ಮಹಿಳೆ ವಿವರ ಪತ್ತೆಯಾಗಿರಲಿಲ್ಲ. ತನಿಖಾ ಕಾಲದಲ್ಲಿ ಬಾಗಲಕೋಟೆಯ ಇಳಕಲ್ ಬಳಿ ಲಾರಿಯಲ್ಲಿ ರುಂಡ ಸಿಕ್ಕಿರುವ ಅಂಶ ಸಂಗತಿ ಬೆಳಕಿಗೆ ಬಂದಿತ್ತು. ತನಿಖೆಯಲ್ಲಿರುವಾಗಲೇ ತನ್ನ ತಾಯಿ ನಿಂಗಮ್ಮ ಪಿಂಚಣಿ ತರಲು ತುಮಕೂರಿಗೆ ಹೋದವರು ವಾಪಸು ಬಂದಿಲ್ಲ ಎಂದು ಮಂಡ್ಯದ ತೂಬಿನಕೆರೆ ನಿವಾಸಿ ಶಿವಕುಮಾರ್ ಎಂಬುವರು ದೂರು ನೀಡಿದ್ದರು. ಮಹಿಳೆ ಮೃತ ದೇಹ ಸಿಕ್ಕಿರುವ ಮಾಹಿತಿ ತಿಳಿದು ತುಮಕೂರಿನ ಶವಗಾರದಲ್ಲಿ ದೇಹ ನೋಡಿ ತನ್ನ ತಾಯಿಯದ್ದೇ ಎಂದು ಹೇಳಿದ್ದರು. ಈ ಮೂಲಕ ಮೃತ ಮಹಿಳೆ ನಿಂಗಮ್ಮನ ಗುರುತು ಪೊಲೀಸರು ಪತ್ತೆ ಮಾಡಿದ್ದರು.

ಬಿಎಂಟಿಸಿ ಚಾಲಕನೇ ಕೊಲೆ ಪಾತಕ
ಪೋನ್ ಕರೆಗಳ ಸಂಶಯದ ಆಧಾರದ ಮೇಲೆ ತುಮಕೂರಿನ ನಿವಾಸಿ ಬಿಎಂಟಿಸಿ ಚಾಲಕ ಬಾಲಚಂದ್ರ ಎಂಬುವನನ್ನು ವಶಕ್ಕೆ ಪಡದು ರೈಲ್ವೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಂಗಮ್ಮನನ್ನು ಕೊಲೆ ಮಾಡಿರುವ ಸಂಗತಿ ಬಾಯಿ ಬಿಟ್ಟಿದ್ದು ಆರೋಪಿ ಚಾಲಕನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗೆ ಕೊಲೆಗೆ ಸಹಕರಿಸಿದ ಆರೋಪ ಎದುರಿಸುತ್ತಿರುವ ನಿಂಗಮ್ಮನ ಸೊಸೆ ಲತಾ ತಲೆ ಮರೆಸಿಕೊಂಡಿದ್ದಾರೆ.

ವಿಚಿತ್ರ ಕಾರಣಕ್ಕೆ ಕೊಲೆ
ನಿಂಗಮ್ಮನ ಬಳಿ ಸೊಸೆ ಲತಾ 1.5 ಲಕ್ಷ ರೂ. ಸಾಲ ಮಾಡಿದ್ದರು. ಸಾಲವನ್ನು ನೀಡುವಂತೆ ನಿಂಗಮ್ಮ ಪೀಡಿಸುತ್ತಿದ್ದಳು. ಮಾತ್ರವಲ್ಲ ಬಿಎಂಟಿಸಿ ಚಾಲಕ ಬಾಲಚಂದ್ರ ಮತ್ತು ಲತಾ ನಡುವೆ ಅನೈತಿಕ ಸಂಪರ್ಕ ಇರುವ ಬಗ್ಗೆ ಸಂಬಂಧಿಕರಲ್ಲಿ ಹೇಳಿಕೊಂಡು ಬರುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ ಮಾಡಿದರೆ ಹಣ ಕೊಡುವ ಪ್ರಮೇಯ ಬರಲ್ಲ, ಈ ಅಪ ಪ್ರಚಾರಕ್ಕೆ ಇತಿಶ್ರೀ ಹಾಡಲೆಂದು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ.

ಮನೆಗೆ ಕರೆಸಿಕೊಂಡು ಹತ್ಯೆ
ನಿಂಗಮ್ಮನಿಗೆ ಹಣ ವಾಪಸು ಕೊಡುವುದಾಗಿ ಮಂಡ್ಯದಿಂದ ತುಮಕೂರಿಗೆ ಕರೆಸಿಕೊಂಡಿದ್ದಾರೆ. ಕುತ್ತಿಗೆಗೆ ಹಗ್ಗದಿಂದ ಬಿಗಿದು ನಿಂಗಮ್ಮನನ್ನು ಕೊಲೆ ಮಾಡಿದ ಲತಾ ಮತ್ತು ಬಾಲಚಂದ್ರ ಕೊಲೆ ಬಗ್ಗೆ ಗುರುತು ಸಿಗದಂತೆ ಮೃತ ದೇಹವನ್ನು ಹಿರೇಹಳ್ಳಿ ರೈಲ್ವೇ ಹಳಿ ಮೇಲೆ ಬಿಸಾಡಿದ್ದಾರೆ. ಮಾತ್ರವಲ್ಲ ರೈಲು ಹರಿದ ಬಳಿಕ ದೇಹದಿಂದ ಬೇರ್ಪಟ್ಟಿದ್ದ ತಲೆಯನ್ನು ಕವರ್ಗೆ ಹಾಕಿ ಅದನ್ನು ಬಾಗಲಕೋಟೆ ಕಡೆ ಚಲಿಸುತ್ತಿದ್ದ ಲಾರಿಯಲ್ಲಿ ಬಿಸಾಡಿದ್ದರು. ನಿಂಗಮ್ಮನ ಮೈಮೇಲಿದ್ದ ಒಡವೆಗಳನ್ನು ಬಿಚ್ಚಿಕೊಂಡು ಲತಾ ಮತ್ತು ಬಾಲಚಂದ್ರ ಪರಾರಿಯಾಗಿದ್ದರು. ಇದೀಗ ಬಾಲಚಂದ್ರ ರೈಲ್ವೆ ಪೊಲೀಸರ ಅತಿಥಿಯಾಗಿದ್ದಾನೆ. ಇಬ್ಬರನ್ನು ವಿಚಾರಣೆ ನಡೆಸಿದಾಗ ರುಂಡದ ಅಸಲಿ ಸತ್ಯ ಬಾಯಿ ಬಿಟ್ಟಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications