ನೆರೆಹೊರೆಯವರಲ್ಲಿ ಸಂವಹನ ಕಡಿಮೆಯಾಗಿರುವುದು ವಿಷಾದನೀಯ: ನಟಿ ರಾಗಿಣಿ ದ್ವಿವೇದಿ
ಬೆಂಗಳೂರು ಜೂನ್ 30: ಬೆಂಗಳೂರು ನಗರದಲ್ಲಿ ನೆರೆ ಹೊರೆಯವರ ಮಧ್ಯೆ ಸಂವಹನ ಕಡಿಮೆಯಾಗಿದೆ. ಮೊದಲೆಲ್ಲಾ ಎಲ್ಲರ ಮಧ್ಯೆ ನಗುವಿನ ವಿನಿಮಯವಾಗುತ್ತಿತ್ತು. ಆದರೆ ಈಗ ಮುಖ ನೋಡುವುದೇ ಕಡಿಮೆಯಾಗಿದೆ. ಅಲ್ಲದೆ, ಅಪಾರ್ಟ್ಮೆಂಟ್ ಗಳಲ್ಲಿ ಜನರು ತಮ್ಮಷ್ಟಕ್ಕೆ ತಾವೇ ಇರುವುದನ್ನ ತಮ್ಮ ಘನತೆಯಾಗಿ ತಗೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದು ನಟಿ ರಾಗಿಣಿ ದ್ವಿವೇದಿ ಅಭಿಪ್ರಾಯಪಟ್ಟರು.
ನಗರದ ಇಟ್ಟಮಡುವಿನಲ್ಲಿ ಎನ್ ಕಾರ್ಪ್ ಹಾಗೂ ವಿ2 ಹೋಲ್ಡಿಂಗ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಸ್ಕೈವಾಕ್ ಅಪಾರ್ಟ್ ಮೆಂಟ್ ಗೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು. ನೆರೆಹೊರೆಯವರಲ್ಲಿ ಉತ್ತಮ ಸಂವಹನ ಬೆಳೆಸಿಕೊಳ್ಳಬೇಕು. ಅಕ್ಕ ಪಕ್ಕದವರೊಂದಿಗಿನ ಉತ್ತಮ ಸಂಬಂಧ ಬೆಳೆಸಿಕೊಳ್ಳುವಂತಹ ಪರಿಸರ ನಿರ್ಮಾಣ ಮಾಡುವಂತಹ ಅಪಾರ್ಟಮೆಂಟ್ ಉದ್ಘಾಟನೆಯಲ್ಲಿ ಭಾಗಿಯಾಗಿರುವುದು ಬಹಳ ಸಂತಸದ ವಿಷಯ ಎಂದರು.

ಇತ್ತೀಚಿನ ದಿನಗಳಲ್ಲಿ ಸಿನೆಮಾಗಳಲ್ಲಿ ಅವಕಾಶ ಕಡಿಮೆಯಾಗಿದೆ ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, 10 ಕೆಟ್ಟ ಸಿನೆಮಾಗಳಿಗಿಂತಾ ಒಂದು ಒಳ್ಳೆಯ ಸಿನೆಮಾಕ್ಕಾಗಿ ಕಾಯವುದು ನನ್ನ ಸ್ಟೈಲ್. ಈಗಿನ ದಿನಗಳಲ್ಲಿ ನಟರು ಇಂತಹ ಒಳ್ಳೆಯ ಅವಕಾಶಕ್ಕಾಗಿ ಕಾಯತ್ತೇವೆ. ಒಳ್ಳೆಯ ಸಿನೆಮಾ ಮಾಡುವುದು ನನ್ನ ಸ್ಟೈಲ್ ಎಂದು ಉತ್ತರಿಸಿದರು.

ವಿ2 ಹೋಲ್ಡಿಂಗ್ ನ ವ್ಯವಸ್ಥಾಪಕ ನಿರ್ದೇಶಕರಾದ ಪಿ ಎಲ್ ವೆಂಕಟರಾಮ ರೆಡ್ಡಿ ಮಾತನಾಡಿ, ಒಂದು ಎಕರೆಯಲ್ಲಿ ನಿರ್ಮಿಸಲಾಗುತ್ತಿರುವ ಈ ಸ್ಕೈವಾಕ್ ಅಪಾರ್ಟ್ಮೆಂಟಿನಲ್ಲಿ ನೆರೆ ಹೊರೆಯವರಲ್ಲಿ ಒಳ್ಳೆಯ ಸಂಹವನ ಬೆಳೆಸುವ ಉದ್ದೇಶದಿಂದ ಡಿಸೈನ್ ಮಾಡಲಾಗಿದೆ. ಶೇಕಡಾ 50 ರಷ್ಟು ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸುತ್ತಿದ್ದು, ಇನ್ನುಳಿದ ಶೇಕಡಾ 45 ರಷ್ಟು ಜಾಗದಲ್ಲಿ ಮಕ್ಕಳಿಗೆ ಆಟ ಆಡುವ ಜಾಗ, ಸ್ವಿಮ್ಮಿಂಗ್ ಪೂಲ್ ನ್ನು ನಿರ್ಮಿಸಲಾಗತ್ತಿದೆ. ಒಂದು ಫ್ಲಾಟ್ ಗೂ ಇನ್ನೊಂದಕ್ಕೂ ಮಧ್ಯೆ ಒಳ್ಳೆ ಜಾಗವನ್ನು ಬಿಡಲಾಗಿದೆ ಎಂದು ಹೇಳಿದರು.

ಎನ್ ಕಾರ್ಪ್ನ ನವೀನ್ ಮಾತನಾಡಿ, ಎಲ್ಲಾ ಬ್ಯಾಂಕುಗಳಿಂದಲೂ ಸಾಲಸೌಲಭ್ಯ ವನ್ನು ಮಾಡಲಾಗಿದೆ. ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಟಿ ದುನಿಯಾ ರಷ್ಮಿ, ಸ್ವರ್ಣಭಾರತಿ ಬ್ಯಾಂಕಿನ ನಿರ್ದೇಶಕರಾದ ರವೀಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ












Click it and Unblock the Notifications