ತಮಿಳುನಾಡಿನಲ್ಲಿ ಶಕ್ತಿ ಪ್ರದರ್ಶಿಸಿದ ಆರ್.ಅಶೋಕ್
ಬೆಂಗಳೂರು, ಫೆ.11 : ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭೆ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೆ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಉತ್ತರ ಕ್ಷೇತ್ರದ ಶಾಸಕರೊಂದಿಗೆ ತಮಿಳುನಾಡಿಗೆ ತೆರಳಿದ್ದು, ಅಲ್ಲಿ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಈ ಮೂಲಕ ಶಕ್ತಿ ಪ್ರದರ್ಶಿಸುತ್ತಿದ್ದಾರೆ.
ಮಂಗಳವಾರ
ಆರ್.ಅಶೋಕ್
ತಮಿಳುನಾಡಿನ
ತಿರುವಣ್ಣಮಲೈ
ದೇವಾಲಯಕ್ಕೆ
ಬೆಂಗಳೂರು
ಉತ್ತರ
ಕ್ಷೇತ್ರದ
ಶಾಸಕರ
ಜೊತೆ
ತೆರಳಿದ್ದು,
ಕ್ಷೇತ್ರದ
ಶಾಸಕರು
ತಮ್ಮ
ಬೆಂಬಲಕ್ಕಿದ್ದಾರೆ,
ಆದ್ದರಿಂದ
ಕ್ಷೇತ್ರದಲ್ಲಿ
ತಮಗೆ
ಟಿಕೆಟ್
ನೀಡಬೇಕು
ಎಂಬ
ಸ್ಪಷ್ಟ
ಸಂದೇಶವನ್ನು
ಪಕ್ಷದ
ನಾಯಕರಿಗೆ
ಕಳುಹಿಸಿದ್ದಾರೆ.
ಶಾಸಕರಾದ ಎ.ಕೃಷ್ಣಪ್ಪ, ಮುನಿರಾಜು, ಮಾಜಿ ಶಾಸಕ ನಂದೀಶ್ ರೆಡ್ಡಿ ಸೇರಿದಂತೆ ಬೆಂಗಳೂರು ಉತ್ತರ ಕ್ಷೇತ್ರದ ಕೆಲವು ಬಿಜೆಪಿ ನಾಯಕರೊಂದಿಗೆ ಅಶೋಕ್ ತಿರುವಣ್ಣಮಲೈಗೆ ಭೇಟಿ ತೆರಳಿದ್ದಾರೆ. ಶಾಸಕರೊಂದಿಗೆ ದೇವಾಲಯಕ್ಕೆ ತೆರಳಿ ನಂತರ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. [ಬೆ.ಉತ್ತರದಿಂದ ಸ್ಪರ್ಧಿಸುವೆ : ಶೋಭಾ ಕರಂದ್ಲಾಜೆ]
ಈಗಾಗಲೇ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ಆರಂಭಿಸಿದ್ದಾರೆ. ಈ ಸಮಯದಲ್ಲೇ ಅಶೋಕ್ ಶಾಸಕರೊಂದಿಗೆ ಸೇರಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದು, ಬಿಜೆಪಿ ಪಾಲಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.
ಅಶೋಕ್ ಸ್ಪಷ್ಟನೆ : ಶಾಸಕರೊಂದಿಗೆ ತಮಿಳುನಾಡಿನ ತಿರುವಣ್ಣಮಲೈ ದೇವಾಲಯಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಮರಳುತ್ತಿದ್ದೇನೆ. ದೇವರ ದರ್ಶನ ಪಡೆಯಲು ಅಲ್ಲಿಗೆ ಹೋಗಿದ್ದೆವು, ವಾರ್ಷಿಕವಾಗಿ ಅಲ್ಲಿಗೆ ಭೇಟಿ ನೀಡುತ್ತೇವೆ. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಆರ್.ಅಶೋಕ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಂದಹಾಗೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಯಶವಂತಪುರ, ಮಹಾಲಕ್ಷ್ಮೀ ಲೇ ಔಟ್, ಕೆ.ಆರ್.ಪುರಂ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂ, ಪುಲಕೇಶಿ ನಗರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತದೆ.