ಪಾರ್ಕ್ನಲ್ಲಿ ಭದ್ರತೆ, ಮೂಲಸೌಕರ್ಯ ಒದಗಿಸಿ; ಬಿಬಿಎಂಪಿಗೆ ಜನರ ಆಗ್ರಹ
ಬೆಂಗಳೂರು ಜುಲೈ 17: ಬೆಂಗಳೂರಿನ ಉದ್ಯಾನವನಗಳಿಗೆ ಸಾರ್ವಜನಿಕರ ಪ್ರವೇಶ ಸಮಯ ಮಾರ್ಪಾಡು ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದ ಬೆನ್ನಲ್ಲೇ ಸಾರ್ವಜನಿಕರು ಉದ್ಯಾನಗಳಲ್ಲಿ ಸೂಕ್ತ ಭದ್ರತೆ, ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಈ ಮೊದಲು ಬೆಳಗ್ಗೆ 5ಗಂಟೆಯಿಂದ 10ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8ಗಂಟೆ ವರಗೆ ಉದ್ಯಾನಗಳಿಗೆ ಪ್ರವೇಶ ನೀಡಲಾಗಿತ್ತು. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಗುರುವಾರ ಬಿಬಿಎಂಪಿ ಹೊಸದಾಗಿ ಆದೇಶ ನೀಡಿದೆ. ಕೆಲ ಮಾರ್ಪಾಡು ಮಾಡಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 8ಗಂಟೆ ವರಗೆ ಉದ್ಯಾನಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಉದ್ಯಾನ ನಿರ್ವಹಣೆಗೆ ಸಮಯದ ನಿಗದಿ ಪಡಿಸಿದ್ದು, ಈ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಸಮಯ ಬದಲಾವಣೆ ಸಂಬಂಧ ಉದ್ಯಾನಗಳ ಮುಂದೆ ಯಾವುದೇ ನಾಮಫಲಕ ಹಾಕದಿರುವುದಕ್ಕೆ ಸಾರ್ವಜನಿಕರು ಬೇಸರಕ್ಕೆ ಕಾರಣವಾಗಿದೆ ಎಂದು ಮಲ್ಲೇಶ್ವರಂ ಸ್ವಾಭಿಮಾನ ಸಂಘದ ಅಧ್ಯಕ್ಷೆ ನವೀನಾ ಶ್ರೀಧರ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಹಿರಿಯ ನಾಗರಿಕರು ಬೆಳಗ್ಗೆ 10 ಗಂಟೆ ನಂತರವೇ ಉದ್ಯಾನ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅವರಿಗೆ ಬೆಳ್ಳಂಬೆಳಗ್ಗೆ ಚಳಿಯಲ್ಲಿ ಎದ್ದು ಉದ್ಯಾನಕ್ಕೆ ಬರಲು ಆಗದು. ಅಂಥವರಿಗೆ ಬಿಬಿಎಂಪಿ ಹೊಸ ಆದೇಶದಿಂದ ಕಿರಿ-ಕಿರಿ ಆಗಲಿದೆ. ನಿರ್ವಹಣೆಗೆ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನಿಗದಿ ಮಾಡಬಹುದಲ್ಲವೇ? ಎಂದು ಅವರು ಹೇಳಿದ್ದಾರೆ.
ಮೂಲಸೌಕರ್ಯ, ಭದ್ರತೆ ಒದಗಿಸಿ; ಬಿಬಿಎಂಪಿ ದಿನವೀಡಿ ಉದ್ಯಾನ ಪ್ರವೇಶಕ್ಕೆ ಅನುಮತಿ ಏನೋ ನೀಡಿದೆ. ಆದರೆ ಕೆಲವು ಉದ್ಯಾನಗಳಲ್ಲಿ ಶೌಚಾಯಗಳು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಹೆಣ್ಣುಮಕ್ಕಳು, ಹಿರಿಯ ನಾಗರಿಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಜತೆಗೆ ಸೂಕ್ತ ಭದ್ರತೆ ಒದಗಿಸಬೇಕು. ಸಮಯ ಬದಲಾವಣೆ ಕುರಿತು ಆಯಾ ಉದ್ಯಾನಗಳ ಮುಂದೆ ನಾಮಫಲಕ ಅಳವಡಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿದ್ಯಾರಣ್ಯಪುರ ನಿವಾಸಿಯೊಬ್ಬರು ಈ ಕುರಿತ ಮಾತನಾಡಿ, ಬಿಬಿಎಂಪಿ ಉದ್ಯಾನಗಳ ಪ್ರವೇಶ ನಿರ್ಬಂಧ ಇಲ್ಲವೇ ಪ್ರವೇಶ ಸಮಯ ಬದಲಾವಣೆ ಸಂದರ್ಭದಲ್ಲಿ ಉದ್ಯಾನಗಳ ಸುತ್ತಮುತ್ತಲಿನ ನಾಗರಿಕರನ್ನು, ಪಾಲಿಕೆ ಸಮಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಜನರಿಗೆ ಅಗತ್ಯವಾದದನ್ನು ನೀಡುವಲ್ಲಿ ಅಥವಾ ಕೆಲವು ಕ್ರಮ ಕೈಗೊಳ್ಳುವಲ್ಲಿ ಪಾಲಿಕೆ ವಿಫಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಉದ್ಯಾನಗಳಲ್ಲಿ ಹಾಲಿ ಸೌಲಭ್ಯಗಳು, ಸಿಸಿಟಿವಿಗಳು ಉತ್ತಮ ಸ್ಥಿತಿಯಲ್ಲಿಲ್ಲ. ಪ್ರವೇಶದ ಸಮಯ ವಿಸ್ತರಣೆಯಿಂದಾಗಿ ಉದ್ಯಾನಗಳಲ್ಲಿನ ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಯಾರು ಸಿದ್ದರಿಲ್ಲ ಎಂದು ವೈಯಾಲಿಕಾವೆಲ್ ನಿವಾಸಿ ದೂರಿದರು.
ವಸತಿ ಪ್ರದೇಶ ಬಳಿ ಉದ್ಯಾನಕ್ಕೆ ಸಿಸಿಟಿವಿ ಬೇಕಿಲ್ಲ; ಪಾಲಿಕೆ ತೋಟಗಾರಿಕೆ ಉಪನಿರ್ದೇಶಕ ಚಂದ್ರಶೇಖರ್ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ 1,118 ಉದ್ಯಾನಗಳಿದ್ದು, ನಿರ್ವಹಣೆಗೆ ವಾರ್ಷಿಕ ಸುಮಾರು 6-7 ಕೋಟಿ ವೆಚ್ಚವಾಗುತ್ತದೆ. ವಾರ್ಡ್ವಾರು ಟೆಂಡರ್ ಕರೆದು ಉದ್ಯಾನ ನಿರ್ವಹಿಸಲಾಗುತ್ತಿದೆ.
ವಸತಿ ಪ್ರದೇಶಗಳಲ್ಲಿನ ಉದ್ಯಾನಗಳಲ್ಲಿ ಸಿಸಿಟಿವಿ ಅಗತ್ಯ ವಿಲ್ಲ. ದೂರದ ಉದ್ಯಾನಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಮೂಲಸೌಕರ್ಯ ಇನ್ನಿತರ ವ್ಯವಸ್ಥೆಗಳು ಸುಧಾರಣೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
-
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications