ನರ್ತಕಿ, ಕಲಾವಿದೆಯಾಗಿ ಜಯರಾಮ್ ಜಯಲಲಿತಾ
ಒಂದು ಕಾಲದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್ ನೃತ್ಯ ಶೈಲಿಯಲ್ಲಿ ನರ್ತಿಸುತ್ತಿದ್ದ ಜಯಲಲಿತಾ ಅವರದ್ದು ಕಲರ್ ಫುಲ್ ಬದುಕು. ನೃತ್ಯ ಕಲಾವಿದೆಯಾಗಿ ನಂತರ ಸಿನಿಮಾ ತಾರೆಯಾಗಿ, ಜನಪ್ರಿಯ ರಾಜಕಾರಣಿಯಾಗಿ ಬೆಳೆದವರು.
ಬೆಂಗಳೂರು, ಡಿಸೆಂಬರ್ 06: ಒಂದು ಕಾಲದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್ ನೃತ್ಯ ಶೈಲಿಯಲ್ಲಿ ನರ್ತಿಸುತ್ತಿದ್ದ ಜಯಲಲಿತಾ ಅವರದ್ದು ಕಲರ್ ಫುಲ್ ಬದುಕು. ನೃತ್ಯ ಕಲಾವಿದೆಯಾಗಿ ನಂತರ ಸಿನಿಮಾ ತಾರೆಯಾಗಿ, ಜನಪ್ರಿಯ ರಾಜಕಾರಣಿಯಾಗಿ ಬೆಳೆದವರು.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಕರ್ನಾಟಕದ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್ ಹಾಗೂ ವೇದವಲ್ಲಿ ದಂಪತಿಯ ಪುತ್ರಿಯಾಗಿ ಜನಿಸಿದ ಕೋಮಲವಲ್ಲಿ ಮುಂದೆ ತಮಿಳುನಾಡಿನ ಜಯಲಲಿತಾ ಆಗಿ ಬೆಳೆದಿದ್ದು ದೊಡ್ಡ ಸಾಧನೆ. ಬಳುಕುವ ಬಳ್ಳಿಯಂತ್ತಿದ್ದ ಜಯಲಲಿತಾ ಅವರ ಸ್ಥೂಲ ಕಾಯ ಅವರಿಗೆ ಪರಂಪರಾಗತವಾಗಿ ಬಂದ ಬಳುವಳಿ.[ಜಯಲಲಿತಾಗೂ ಮೈಸೂರಿಗೂ ಅವಿನಾಭಾವ ಸಂಬಂಧ]
ಜಯಾ ಹುಟ್ಟಿದ್ದು ಎಲ್ಲಿ?: ಕರ್ನಾಟಕದ ಮಂಡ್ಯದ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಎಂಬುದು ಒಂದು ವಾದವಾದರೆ, ಇಲ್ಲ ಮೈಸೂರಿನ ದೊಡ್ಡಾಸ್ಪತ್ರೆ(ಕೆಆರ್ ಆಸ್ಪತ್ರೆಯ ಚೆಲುವಾಂಬ ಆಸ್ಪತ್ರೆಯಲ್ಲೇ 1948ರ ಫೆಬ್ರವರಿ 05ರಂದು ಜನಿಸಿದರು ಎಂದು ಇನ್ನೊಂದು ವಾದವಿದೆ.

ಮೈಸೂರು ರಾಜಮನೆತನದ ಜತೆಗೆ ಜಯರಾಮ್ ಅವರ ಕುಟುಂಬ ನಿಕಟ ಸಂಪರ್ಕ ಹೊಂದಿತ್ತು. ಲಕ್ಷ್ಮಿಪುರಂ ಹಾಗೂ ಸರಸ್ವತಿಪುರಂನಲ್ಲಿ ಜಯಾ ಅವರ ನಿವಾಸ ಇರುವುದು ಹಾಗೂ ಮೈಸೂರಿನ ಜತೆಗಿನ ಅವಿನಾಭಾವ ಸಂಬಂಧದ ಬಗ್ಗೆ ಇಲ್ಲಿ ಓದಿ
ಜಯರಾಮ್ ಅವರು ಕಾಲವಾದ ನಂತರ ತಾಯಿ ವೇದವಲ್ಲಿ (ಸಿನಿಮಾಗಾಗಿ ಇಟ್ಟುಕೊಟ್ಟ ಹೆಸರು ಸಂಧ್ಯಾ) ಅವರು ಬೆಂಗಳೂರಿಗೆ ಜೀವನೋಪಾಯಕ್ಕಾಗಿ ವಲಸೆ ಬರಬೇಕಾಯಿತು. ಅವರ ಸೋದರಿ ವಿದ್ಯಾ (ಅಂಬುಜಾ) ಅವರು ಗಗನಸಖಿಯಾಗಿದ್ದರು. ಜೊತೆಗೆ, ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆಗಿನ ನೃತ್ಯ ತಾರೆಯರಾದ ಲಲಿತಾ, ಪದ್ಮಿನಿ, ರಾಗಿನಿ ಅವರ ನಿಕಟಸ್ನೇಹ ಗಳಿಸಿದ್ದರು. ನಂತರ ಜಯಾ ಕೂಡಾ ಇದೇ ಹಾದಿ ಹಿಡಿದರು.
ಮೈಸೂರಿನಲ್ಲಿ ಭರತನಾಟ್ಯ ಕಾರ್ಯಕ್ರಮ: 19-03-1967ರ ಭಾನುವಾರ ಸಂಜೆ 6.30ಕ್ಕೆ ಕ್ರಾಫರ್ಡ್ ಹಾಲ್ನಲ್ಲಿ ಜಯಲಲಿತಾ ಅವರ ಅಮೋಘ ನೃತ್ಯ ಪ್ರದರ್ಶನ ಕಾರ್ಯಕ್ರಮ ನೀಡಿದ್ದರು. ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಜಯಾ ಅವರು ನರ್ತಿಸಿದ್ದರು. ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದ ರಾಮಚಂದ್ರಯ್ಯನವರು ಈಗ ಶ್ರೀರಂಗಪಟ್ಟಣ ಸಮೀಪದ ನಗುವನಹಳ್ಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಜಯಲಲಿತಾ ವಿದ್ಯಾಭ್ಯಾಸ ಮದರಾಸಿನಲ್ಲಿ ಮುಂದುವರೆಯಿತು. ಆಗಲೇ ಡಾನ್ಸ್ ತರಗತಿಗೆ ಜಯಲಲಿತಾರನ್ನು ಸೇರಿಸಿದ್ದರು. ತನ್ನ 14ನೇ ವಯಸ್ಸಿನಲ್ಲಿ ರಂಗಪ್ರವೇಶಿಸಿದರು. ಬಾಲನಟಿಯಾಗಿ ಕನ್ನಡ, ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಜಯಲಲಿತಾ ಅವರು 15 ವರ್ಷ ವಯಸ್ಸಿಗೆ ನಾಯಕಿಯಾದರು. 1965ರ ವೇಳೆಗೆ ಸ್ಟಾರ್ ನಟ ಎಂಜಿಆರ್ ಪರಿಚಯವಾಗಿ ಅವರ ಚಿತ್ರಗಳ ನಾಯಕಿ ಎರಡು ದಶಕಗಳ ಕಾಲ ಮೆರೆದರು.
-
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ












Click it and Unblock the Notifications