ನರ್ತಕಿ, ಕಲಾವಿದೆಯಾಗಿ ಜಯರಾಮ್ ಜಯಲಲಿತಾ
ಒಂದು ಕಾಲದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್ ನೃತ್ಯ ಶೈಲಿಯಲ್ಲಿ ನರ್ತಿಸುತ್ತಿದ್ದ ಜಯಲಲಿತಾ ಅವರದ್ದು ಕಲರ್ ಫುಲ್ ಬದುಕು. ನೃತ್ಯ ಕಲಾವಿದೆಯಾಗಿ ನಂತರ ಸಿನಿಮಾ ತಾರೆಯಾಗಿ, ಜನಪ್ರಿಯ ರಾಜಕಾರಣಿಯಾಗಿ ಬೆಳೆದವರು.
ಬೆಂಗಳೂರು, ಡಿಸೆಂಬರ್ 06: ಒಂದು ಕಾಲದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್ ನೃತ್ಯ ಶೈಲಿಯಲ್ಲಿ ನರ್ತಿಸುತ್ತಿದ್ದ ಜಯಲಲಿತಾ ಅವರದ್ದು ಕಲರ್ ಫುಲ್ ಬದುಕು. ನೃತ್ಯ ಕಲಾವಿದೆಯಾಗಿ ನಂತರ ಸಿನಿಮಾ ತಾರೆಯಾಗಿ, ಜನಪ್ರಿಯ ರಾಜಕಾರಣಿಯಾಗಿ ಬೆಳೆದವರು.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಕರ್ನಾಟಕದ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್ ಹಾಗೂ ವೇದವಲ್ಲಿ ದಂಪತಿಯ ಪುತ್ರಿಯಾಗಿ ಜನಿಸಿದ ಕೋಮಲವಲ್ಲಿ ಮುಂದೆ ತಮಿಳುನಾಡಿನ ಜಯಲಲಿತಾ ಆಗಿ ಬೆಳೆದಿದ್ದು ದೊಡ್ಡ ಸಾಧನೆ. ಬಳುಕುವ ಬಳ್ಳಿಯಂತ್ತಿದ್ದ ಜಯಲಲಿತಾ ಅವರ ಸ್ಥೂಲ ಕಾಯ ಅವರಿಗೆ ಪರಂಪರಾಗತವಾಗಿ ಬಂದ ಬಳುವಳಿ.[ಜಯಲಲಿತಾಗೂ ಮೈಸೂರಿಗೂ ಅವಿನಾಭಾವ ಸಂಬಂಧ]
ಜಯಾ ಹುಟ್ಟಿದ್ದು ಎಲ್ಲಿ?: ಕರ್ನಾಟಕದ ಮಂಡ್ಯದ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಎಂಬುದು ಒಂದು ವಾದವಾದರೆ, ಇಲ್ಲ ಮೈಸೂರಿನ ದೊಡ್ಡಾಸ್ಪತ್ರೆ(ಕೆಆರ್ ಆಸ್ಪತ್ರೆಯ ಚೆಲುವಾಂಬ ಆಸ್ಪತ್ರೆಯಲ್ಲೇ 1948ರ ಫೆಬ್ರವರಿ 05ರಂದು ಜನಿಸಿದರು ಎಂದು ಇನ್ನೊಂದು ವಾದವಿದೆ.

ಮೈಸೂರು ರಾಜಮನೆತನದ ಜತೆಗೆ ಜಯರಾಮ್ ಅವರ ಕುಟುಂಬ ನಿಕಟ ಸಂಪರ್ಕ ಹೊಂದಿತ್ತು. ಲಕ್ಷ್ಮಿಪುರಂ ಹಾಗೂ ಸರಸ್ವತಿಪುರಂನಲ್ಲಿ ಜಯಾ ಅವರ ನಿವಾಸ ಇರುವುದು ಹಾಗೂ ಮೈಸೂರಿನ ಜತೆಗಿನ ಅವಿನಾಭಾವ ಸಂಬಂಧದ ಬಗ್ಗೆ ಇಲ್ಲಿ ಓದಿ
ಜಯರಾಮ್ ಅವರು ಕಾಲವಾದ ನಂತರ ತಾಯಿ ವೇದವಲ್ಲಿ (ಸಿನಿಮಾಗಾಗಿ ಇಟ್ಟುಕೊಟ್ಟ ಹೆಸರು ಸಂಧ್ಯಾ) ಅವರು ಬೆಂಗಳೂರಿಗೆ ಜೀವನೋಪಾಯಕ್ಕಾಗಿ ವಲಸೆ ಬರಬೇಕಾಯಿತು. ಅವರ ಸೋದರಿ ವಿದ್ಯಾ (ಅಂಬುಜಾ) ಅವರು ಗಗನಸಖಿಯಾಗಿದ್ದರು. ಜೊತೆಗೆ, ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆಗಿನ ನೃತ್ಯ ತಾರೆಯರಾದ ಲಲಿತಾ, ಪದ್ಮಿನಿ, ರಾಗಿನಿ ಅವರ ನಿಕಟಸ್ನೇಹ ಗಳಿಸಿದ್ದರು. ನಂತರ ಜಯಾ ಕೂಡಾ ಇದೇ ಹಾದಿ ಹಿಡಿದರು.
ಮೈಸೂರಿನಲ್ಲಿ ಭರತನಾಟ್ಯ ಕಾರ್ಯಕ್ರಮ: 19-03-1967ರ ಭಾನುವಾರ ಸಂಜೆ 6.30ಕ್ಕೆ ಕ್ರಾಫರ್ಡ್ ಹಾಲ್ನಲ್ಲಿ ಜಯಲಲಿತಾ ಅವರ ಅಮೋಘ ನೃತ್ಯ ಪ್ರದರ್ಶನ ಕಾರ್ಯಕ್ರಮ ನೀಡಿದ್ದರು. ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಜಯಾ ಅವರು ನರ್ತಿಸಿದ್ದರು. ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದ ರಾಮಚಂದ್ರಯ್ಯನವರು ಈಗ ಶ್ರೀರಂಗಪಟ್ಟಣ ಸಮೀಪದ ನಗುವನಹಳ್ಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಜಯಲಲಿತಾ ವಿದ್ಯಾಭ್ಯಾಸ ಮದರಾಸಿನಲ್ಲಿ ಮುಂದುವರೆಯಿತು. ಆಗಲೇ ಡಾನ್ಸ್ ತರಗತಿಗೆ ಜಯಲಲಿತಾರನ್ನು ಸೇರಿಸಿದ್ದರು. ತನ್ನ 14ನೇ ವಯಸ್ಸಿನಲ್ಲಿ ರಂಗಪ್ರವೇಶಿಸಿದರು. ಬಾಲನಟಿಯಾಗಿ ಕನ್ನಡ, ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಜಯಲಲಿತಾ ಅವರು 15 ವರ್ಷ ವಯಸ್ಸಿಗೆ ನಾಯಕಿಯಾದರು. 1965ರ ವೇಳೆಗೆ ಸ್ಟಾರ್ ನಟ ಎಂಜಿಆರ್ ಪರಿಚಯವಾಗಿ ಅವರ ಚಿತ್ರಗಳ ನಾಯಕಿ ಎರಡು ದಶಕಗಳ ಕಾಲ ಮೆರೆದರು.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ










Click it and Unblock the Notifications