ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ: ಸರ್ಕಾರದ ಅಧಿಸೂಚನೆ
ಬೆಂಗಳೂರು, ಅಕ್ಟೋಬರ್ 15: ಖಾಲಿ ಉಳಿದಿದ್ದ 16 ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಹಿಂದಿನ ಸರ್ಕಾರದ ನೇಮಕಾತಿಗಳನ್ನು ರದ್ದುಗೊಳಿಸಿತ್ತು. ಮಂಗಳವಾರ 16 ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ, ಲೇಖಕ ಅಜಕ್ಕಳ ಗಿರೀಶ್ ಭಟ್, ಜೋಗತಿ ಕಲಾವಿದೆ ಮಂಜಮ್ಮ ಜೋಗತಿ ಸೇರಿದಂತೆ ಅಧ್ಯಕ್ಷರನ್ನು ನೇಮಿಸಲಾಗಿದೆ.
ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅದರ ವಿವರ ಇಲ್ಲಿದೆ.

* ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಅಧ್ಯಕ್ಷರು- ಟಿಎಸ್ ನಾಗಾಭರಣ. ಸದಸ್ಯರು- ಕಬ್ಬಿನಾಲೆ ವಸಂತ ಭಾರದ್ವಾಜ, ರೋಹಿತ್ ಚಕ್ರತೀರ್ಥ, ಅಬ್ದುಲ್ ರಹಮಾನ್ ಪಾಷಾ, ವಿಜಯಲಕ್ಷ್ಮಿ ಬಾಳೆಕುಂದ್ರಿ, ರಮೇಶ್ ಗುಬ್ಬಿಗೂಡ, ಸುರೇಶ್ ಬಡಿಗೇರ ಮತ್ತು ಎನ್. ಆರ್. ವಿಶುಕುಮಾರ್
* ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಅಧ್ಯಕ್ಷರು- ಅಜಕ್ಕಳ ಗಿರೀಶ್ ಭಟ್. ಸದಸ್ಯರು- ಅಜ್ಜಂಪುರ ಮಂಜುನಾಥ, ಷಣ್ಮುಖ, ಎಂ.ಎಸ್. ಚೈತ್ರ, ಡಂಕಿನ್ ಜಳಕಿ, ಮಾಧವ ಪೆರಾಜೆ, ಗಿರಿಜಾ ಶಂಕರ.
* ಕನ್ನಡ ಸಾಹಿತ್ಯ ಅಕಾಡೆಮಿ
ಅಧ್ಯಕ್ಷರು- ಡಾ. ಬಿ.ವಿ. ವಸಂತಕುಮಾರ್. ಸದಸ್ಯರು-ಜಿನದತ್ತ ಹಡಗಲಿ, ಪ್ರೊ. ಕೃಷ್ಣೇಗೌಡ, ಛಾಯಾ ಭಗವತಿ, ಸಂತೋಷ್ ತಮ್ಮಯ್ಯ, ರೋಹಿಣಾಕ್ಷ ಶಿರ್ಲಾಲು, ಡಾ. ಬಿಎಂ ಶರಭೇಂದ್ರ ಸ್ವಾಮಿ, ಪಾರ್ವತಿ ಪಿಟಗಿ, ಡಾ.ಎನ್ಎಸ್ ತಾರಾನಾಥ, ಡಾ. ವೈ.ಸಿ. ಭಾನುಮತಿ.
* ಕನ್ನಡ ಪುಸ್ತಕ ಪ್ರಾಧಿಕಾರ
ಅಧ್ಯಕ್ಷರು- ಡಾ. ಎಂ.ಎನ್. ನಂದೀಶ್ ಹಂಜೆ. ಸದಸ್ಯರು- ಸಂಗಮೇಶ್ ಪೂಜಾರ್, ಪ್ರಕಾಶ್ ಕಂಬತ್ತಹಳ್ಳಿ, ಅಶೋಕ್ ರಾಯ್ಕರ್, ಪುರುಷೋತ್ತಮ ಗೌಡ, ಎಚ್.ಬಿ ಬೋರಲಿಂಗಯ್ಯ, ಎ.ವಿ. ನಾವಡ, ಟಿಎಎನ್ ಖಂಡಿಗೆ, ಗದ್ದಗಿಮಠ
* ಕರ್ನಾಟಕ ನಾಟಕ ಅಕಾಡೆಮಿ
ಅಧ್ಯಕ್ಷರು- ಭೀಮಸೇನ. ಸದಸ್ಯರು-ಎಂಕೆ ಮಠ, ಟಿ. ರಾಜಾರಾಮ್, ಯಶವಂತ ಸರದೇಶಪಾಂಡೆ, ಪ್ರೇಮ ಬಾದಾಮಿ, ಪ್ರಭುದೇವ ಕಪ್ಪಗಲ, ವಿನೋದ ಅಂಬೇಕರ್, ಡಾ. ಎಂ. ಗುಣಶೀಲನ್, ಜೋಸೆಫ್, ಕೆ.ಆರ್. ಪ್ರಕಾಶ್, ಶಿವಪ್ಪ ಭರಮಪ್ಪ ಅದರಗುಂಚಿ, ವೈದ್ಯನಾಥ ಬಿರಾದಾರ್, ಟಿ.ಎ ರಾ ಶಿವಯ್ಯ, ನಾಗರಾಜರಾವ್ ಕಲ್ಕಟ್ಟೆ.
* ಸಂಗೀತ- ನೃತ್ಯ ಅಕಾಡೆಮಿ
ಅಧ್ಯಕ್ಷರು- ಆನೂರು ಅನಂತಕೃಷ್ಣ ಶರ್ಮ. ಸದಸ್ಯರು- ನಿರುಪಮಾ ರಾಜೇಂದ್ರ, ಶಂಕರ್ ಶಾನಭಾಗ್, ಡಾ. ವೀರಣ್ಣ ಪತ್ತರ್, ರಾಜಗೋಪಾಲ್, ಕಿಕ್ಕೇರಿ ಕೃಷ್ಣಮೂರ್ತಿ, ಸುಜೇಂದ್ರ ಬಾಬು, ಶಾರದಾ ಮಣಿಶಂಕರ್, ಹೊಸಳ್ಳಿ ವೆಂಕಟರಾಮ್, ರಮ್ಯಾ ಸೂರಜ್, ಪದ್ಮಿನಿ ಓಕ್, ಹೇಮಾ ವಾಗ್ಮೋರೆ.
* ಕರ್ನಾಟಕ ಶಿಲ್ಪಕಲಾ ಅಕಾಡೆಮಿ
ಅಧ್ಯಕ್ಷರು- ವೀರಣ್ಣ ಅರ್ಕಸಾಲಿ. ಸದಸ್ಯರು- ಚಂದ್ರಶೇಖರ್ ನಾಯ್ಕ್, ನಟರಾಜ್, ರಾಜೇಶ್ ಪತ್ತಾರ್, ಸುರೇಶ್ ಗುಡಿಗಾರ್, ಅಣ್ಣಪ್ಪ ಆಚಾರ್ಯ, ಶ್ರೀಧರ ಕಾಶಿನಾಥ್, ಕೃಷ್ಣಪ್ಪ ಬಡಿಗೇರ, ಮನೋಹರ್ ಕಾಳಪ್ಪ ಪತ್ತಾರ್, ಸುರೇಶ್ ಎಸ್ ಕಮ್ಮಾರ್, ಮಂಜುನಾಥ್ ಅಚಾರ್, ಜಗದೀಶ್ ದೊಡ್ಡಮನಿ.
* ಕರ್ನಾಟಕ ಲಲಿತ ಕಲಾ ಅಕಾಡೆಮಿ
ಅಧ್ಯಕ್ಷರು- ಡಿ. ಮಹೇಂದ್ರ. ಸದಸ್ಯರು- ರಮೇಶ್ ಚೌಹಾಣ್, ಬಿಆರ್ ಉಪ್ಪಳ, ಗಣೇಶ್ ಧಾರೇಶ್ವರ್, ನರಸಿಂಹಮೂರ್ತಿ, ಲಕ್ಷ್ಮೀ ಮೈಸೂರು, ವಿನೋದ್ ಕುಮಾರ್, ಸೂರ್ಯಪ್ರಕಾಶ್, ಆತ್ಮಾನಂದ ಎಚ್ ಎ, ಅನೀಸ್ ಫಾತೀಮ, ಜಯಾನಂದ ಮಾದರ.
* ಕರ್ನಾಟಕ ಯಕ್ಷಗಾನ ಅಕಾಡೆಮಿ
ಅಧ್ಯಕ್ಷರು- ಪ್ರೊ. ಎಂಎ ಹೆಗ್ಡೆ. ಸದಸ್ಯರು- ನಿರ್ಮಲಾ ಮಂಜುನಾಥ ಹೆಗಡೆ, ಮಾಧವ ಭಂಡಾರಿ, ರಮೇಶ್ ಬೇಗಾರು, ನವನೀತ ಶೆಟ್ಟಿ, ಆರತಿ, ರಾಧಾಕೃಷ್ಣ ಕಲ್ವಾರು, ಜಿಎಸ್ ಭಟ್ ಮೈಸೂರು, ಯೋಗೇಶ್ ರಾವ್, ಕೆಎಂ ಶೇಖರ್, ಶ್ರೀನಿವಾಸ್ ಸಾಸ್ತಾನ್, ಕೆಎಂ ಶೇಖರ್, ದಿವಾಕರ್ ಹೆಗಡೆ.
* ಕರ್ನಾಟಕ ಜಾನಪದ ಅಕಾಡೆಮಿ
ಅಧ್ಯಕ್ಷರು- ಮಂಜಮ್ಮ ಜೋಗತಿ. ಸದಸ್ಯರು- ಎಸ್ ಜಿ ಲಕ್ಷ್ಮೀದೇವಮ್ಮ, ಲಿಂಗಪ್ಪ, ಶಂಕರ ಅರ್ಕಸಾಲಿ, ರಾಜೇಂದರ ಯರನಾಳ, ಪಿಕೆ ರಾಜಶೇಖರ್, ಪುಷ್ಪಲತಾ, ಬೂದ್ಯಪ್ಪ, ಚಟ್ಟಿಕುಟ್ಟಡ ಡಾ. ಅನಂತಸುಬ್ಬಯ್ಯ, ಕಡಿಯರ ಬೋಜಕ್ಕಿ, ಅಮರಯ್ಯ ಸ್ವಾಮಿ, ವೇಮಗಲ್ ನಾರಾಯಣಸ್ವಾಮಿ.
* ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಅಧ್ಯಕ್ಷರು- ದಯಾನಂದ ಕತ್ತಲಸರ. ಸದಸ್ಯರು- ರವೀಂದ್ರ ಶೆಟ್ಟಿ ಬಳಂಜ, ಲೀಲಾಕ್ಷ ಕರ್ಕೇರ, ತಾರಾ ಉಮೇಶ್, ಆಕಾಶ್ ರಾಜ್ ಜೈನ್, ಸಾಯಿಗೀತ ಹೆಗಡೆ, ನಾಗೇಶ್ ಕುಲಾಲ್, ವಿಜಯಲಕ್ಷ್ಮೀ ರೈ, ಮಲ್ಲಿಕಾ ಶೆಟ್ಟಿ, ಕಡಬ ದಿನೇಶ್ ರೈ, ವೈಎನ್ ಶೆಟ್ಟಿ, ನಿಟ್ಟೆ ಶಶಿಧರ ಶೆಟ್ಟಿ.
* ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ
ಅಧ್ಯಕ್ಷರು- ಡಾ. ಪಾರ್ವತಿ ಅಪ್ಪಯ್ಯ. ಸದಸ್ಯರು- ಮೆಚ್ಚಿರ ಸುಭಾಷ್ ನಾಣಯ್ಯ, ಗೌರಮ್ಮ ಮದಮ್ಮಯ್ಯ, ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಶಂಬಯ್ಯ, ಪಡಿರಂಡ ಪ್ರಭುಕುಮಾರ್, ರವಿ ಕಾಳಪ್ಪ.
* ಕೊಂಕಣಿ ಸಾಹಿತ್ಯ ಅಕಾಡೆಮಿ
ಅಧ್ಯಕ್ಷರು- ಡಾ. ಜಗದೀಶ್ ಪೈ. ಸದಸ್ಯರು- ಅರುಣ್ ಜಿ. ಸೇಟ್, ಪೂರ್ಣಿಮಾ ಸುರೇಶ್ ನಾಯ್ಕ್, ಗೋಪಿ ಭಟ್, ಗುರುಮೂರ್ತಿ ಶೇಟ್, ನವೀನ್ ನಾಯ್ಕ್, ಪ್ರಮೋದ್ ಸೇಟ್, ಎ. ನಾರಾಯಣ ಖಾರ್ವಿ, ವಸಂತ ಬಾಂದೇಕರ್, ಚಿದಾನಂದ ಹರಿ ಭಂಡಾರಿ, ಸುರೇಂದ್ರ ವಿ. ಬಾಲಂಕರ್.
* ಬ್ಯಾರಿ ಸಾಹಿತ್ಯ ಅಕಾಡೆಮಿ
ಅಧ್ಯಕ್ಷರು- ರಹೀಂ ಉಚ್ಚಿಲ. ಸದಸ್ಯರು- ಸಿರಾಜ್ ಮುಡಿಪು, ಮುರಳಿ ರಾಜ್, ರೂಪೇಶ್ ಕುಮಾರ್, ಮುನೀರ್ ಬಾವಾ, ಚಂಚಲಾಕ್ಷಿ, ಸುರೇಖಾ, ಫಸಲ್ ಹಸಿಗೋಳಿ.
* ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ
ಅಧ್ಯಕ್ಷರು- ಲಕ್ಷ್ಮೀನಾರಾಯಣ ಕಜೆಗದ್ದೆ. ಸದಸ್ಯರು- ಸೋಮಣ್ಣ ಆರ್ ಸೂರ್ತಲೆ, ಜಾನಕಿ ಬೈತಡ್ಕ, ಹೇಮಾ ರಾಘವಯ್ಯ, ಸ್ಮಿತಾ ಅಮೃತರಾಜ್, ಆನಂದ ದಂಬೆಕೊಡಿ, ಎಪಿ ಧನಂಜಯ.
* ಕರ್ನಾಟಕ ಬಯಲಾಟ ಅಕಾಡೆಮಿ
ಅಧ್ಯಕ್ಷರು- ಸೊರಬಕ್ಕನವರ ಹಾವೇರಿ. ಸದಸ್ಯರು- ಅನುಪಮಾ ಹೊಸಕೆರೆ, ಶಿವಾನಂದ ಶೆಲ್ಲಿಕೇರಿ, ಚರಚೋಗಿ ಬಸವರಾಜು, ಎನ್ಎಸ್ ರಾಜು, ಕರಿಶೆಟ್ಟಿ ರುದ್ರಪ್ಪ ಬಳ್ಳಾರಿ, ಗಂಗವ್ವ, ಬಿರಾದಾರ್ ಹಳಿಯಾಳ, ಕೆ. ಸತ್ಯನಾರಾಯಣ, ಶಿವಲಿಂಗಪ್ಪ ಪೂಜಾರಿ, ಮಂಜು ಗುರುಲಿಂಗ.
-
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?












Click it and Unblock the Notifications