'ಗಾಂಧಿ ಕನಸಿನ ಭಾರತ ಬೇಕು' ಎಂದವರ ಬಂಧಿಸಿದ ಪೊಲೀಸರು!
ಬೆಂಗಳೂರು, ಡಿಸೆಂಬರ್ 23: 'ಗಾಂಧಿ ಕನಸಿನ ಭಾರತ ಬೇಕು' ಎಂದು ಕೇಳುವುದು, ಗಾಂಧಿ ಕನಸು ಕಂಡಿದ್ದ, ಶಾಂತಿಯುತ, ಸೌಹಾರ್ದ, ಜಾತ್ಯಾತೀತ ದೇಶ ನಮ್ಮದಾಗಬೇಕು ಎಂದುಕೊಳ್ಳುವುದು ತಪ್ಪೇ? ಬೆಂಗಳೂರು ಪೊಲೀಸರ ಪ್ರಕಾರ ತಪ್ಪು!
'ಗಾಂಧಿ ಕನಸಿನ ಭಾರತ ಬೇಕು, ಸಾವರ್ಕರ್ ಕನಸಿನ ಭಾರತ ಬೇಡ' ಎಂದು ಘೋಷಣೆ ಕೂಗಿದ್ದು, ಬಂಧಿಸಲು ಕಾರಣಗಳಲ್ಲಿ ಒಂದು ಎಂಬಂತೆ ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರತಿ ವೈರಲ್ ಆಗಿದೆ.
ನಿಷೇಧಾಜ್ಞೆ ಹೇರಿದ್ದ ಗುರುವಾರದಂದು ಸಿಎಎ ವಿರೋಧಿಸಿ ಟೌನ್ಹಾಲ್ ಬಳಿ ಕೆಲವರು ಪ್ರತಿಭಟನೆ ನಡೆಸಿದರು. ಅವರನ್ನು ಪೊಲೀಸರು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿದ್ದರು. ಹೀಗೆ ದಾಖಲಾದ ಪ್ರಕರಣದ ಬಗ್ಗೆ ಪೊಲೀಸರು ದಾಖಲಿಸಿರುವ ಎಫ್ಐಆರ್ ಇದೀಗ ವೈರಲ್ ಆಗಿದೆ. 'ಗಾಂಧಿ ಕನಸಿನ ಭಾರತ ಬೇಕು' ಎಂದು ಕೇಳಿದ್ದು ತಪ್ಪೇ? ಎನ್ನುವಂತೆ ಮಾಡಿದೆ.

'ಟೌನ್ಹಾಲ್ ಬಳಿಗೆ 150-200 ಜನ ಅಕ್ರಮ ಕೂಟ ಮಾಡಿಕೊಂಡು ಮಾಡಿಕೊಂಡು ಬಂದ ಗುಂಪು, ಸರ್ಕಾರದ ಆದೇಶವನ್ನು ಉಲ್ಲಂಘಿಸಿ (ನಿಷೇಧಾಜ್ಞೆ) 'ನಮಗೆ ಗಾಂಧಿ ಕನಸಿನ ಭಾರತ ಬೇಕು, ಸಾವರ್ಕರ್ ಕನಸಿನ ಭಾರತ ಬೇಡ' ಎಂದು ಘೋಷಣೆಗಳನ್ನು ಕೂಗಿದರು' ಎಂದು ಘಟನೆ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪ್ರತಿಭಟನಾಕಾರರನ್ನು ಬಂಧಿಸಿರುವುದು ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕೇ ಎಂಬುದು ಸ್ಪಷ್ಟ, ಆದರೆ ಎಫ್ಐಆರ್ ದಾಖಲಿಸಿರುವ ಪೊಲೀಸರು, ಘೋಷಣೆ ಕೂಗಿದ್ದೂ ಸಹ ಒಂದು ಅಪರಾಧ ಎಂಬ ಧ್ವನಿ ಮೂಡುವಂತೆ ಎಫ್ಐಆರ್ ದಾಖಲಿಸಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications