ಪೈಲ್ವಾನ್ ಸಿನಿಮಾ ಲೀಕ್ ಮಾಡಿದ ಆರೋಪಿ ರಾಕೇಶ್ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 20 : ಕಿಚ್ಚ ಸುದೀಪ್ ಅಭಿನಯದ, ಕಳೆದ ವಾರ ಬಿಡುಗಡೆಗೊಂಡ ಪೈಲ್ವಾನ್ ಆನ್ಲೈನ್ನಲ್ಲಿ ಲೀಕ್ ಆಗಿದೆ. ಸಿನಿಮಾ ಕಾಪಿರೈಟ್ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಯುವಕನನ್ನು ಬೆಂಗಳೂರಿನ ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಎಲ್. ರಾಕೇಶ್ ಎಂದು ಗುರುತಿಸಲಾಗಿದೆ. 19 ವರ್ಷ ವಯಸ್ಸಿನ ರಾಕೇಶ್ ಇಮಚೇನಹಳ್ಳಿ ನಿವಾಸಿ. ಸೆಪ್ಟೆಂಬರ್ 19ರಂದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನೆಲಮಂಗಲ ತಾಲೂಕಿನ ಇಮೇಚನಹಳ್ಳಿಯಲ್ಲಿ ರಾಕೇಶ್ ಬಂಧಿಸಲಾಗಿದೆ.
ಪೈಲ್ವಾನ್ ಚಿತ್ರದ ಕಾಪಿರೈಟ್ ಮಾಲೀಕರ ಅನುಮತಿ ಪಡೆಯದೇ ಸಂಪೂರ್ಣ ಚಲನಚಿತ್ರ ವೀಕ್ಷಿಸುವ ಲಿಂಕ್ ಅನ್ನು ಸಾರ್ವಜನಿಕವಾಗಿ ತನ್ನ ಫೇಸ್ ಬುಕ್ ಖಾತೆಯಲ್ಲಿ ರಾಕೇಶ್ ಪೋಸ್ಟ್ ಮಾಡಿಕೊಂಡಿದ್ದ ಎಂಬುದು ಆರೋಪವಾಗಿದೆ.
ಚಿತ್ರ ವೀಕ್ಷಣೆ ಲಿಂಕ್ ಕೇಳಿದ ಎಲ್ಲರಿಗೂ ಅದನ್ನು ಕಳುಹಿಸಿದ ಆರೋಪ ರಾಕೇಶ್ ಮೇಲಿದೆ. ರಾಕೇಶ್ ಬಂಧಿಸಿದ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.

ಚಿತ್ರ ಬಿಡುಗಡೆ ದಿನವೇ ಲಿಂಕ್ ಶೇರ್
Rakesh Virat (Yuva) ಎಂಬ ಹೆಸರಿನಲ್ಲಿ ಆರೋಪಿ ಫೇಸ್ ಬುಕ್ ಖಾತೆಯನ್ನು ಹೊಂದಿದ್ದಾನೆ. ಚಿತ್ರ ಬಿಡುಗಡೆಯಾದ ದಿನವೇ ಚಲನಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಬಹುದಾದದ ಲಿಂಕ್ ಅನ್ನು ಫೇಸ್ ಬುಕ್ ಖಾತೆಯಲ್ಲಿ ಹೊಂದಿದ್ದ. ಫೇಸ್ ಬುಕ್ ಸ್ನೇಹಿತರು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ.

ಇನ್ ಬಾಕ್ಸ್ ಮಾಡಿ ಎಂದು ಹೇಳಿಕೊಂಡಿದ್ದ
ತನ್ನ ಫೇಸ್ ಬುಕ್ ಸ್ಟೋರಿಯಲ್ಲಿ ಸ್ಟ್ರೀನ್ ಶಾಟ್ ವೊಂದನ್ನು ಹಾಕಿದ್ದ ಆರೋಪಿ ಚಲನಚಿತ್ರದ ಲಿಂಕ್ ಪಡೆಯಲು ಇಚ್ಛಿಸುವವರು ಇನ್ ಬಾಕ್ಸ್ಗೆ ಮೆಸೇಜ್ ಮಾಡುವಂತೆ ಪ್ರಕಟಣೆ ಹಾಕಿದ್ದ.

ಇಬ್ಬರಿಗೆ ಲಿಂಕ್ ಶೇರ್
ಇಬ್ಬರು ಫೇಸ್ಬುಕ್ ಸ್ನೇಹಿತರಿಗೆ ಸಂಪೂರ್ಣ ಚಿತ್ರವನ್ನು ವೀಕ್ಷಣೆ ಮಾಡಲು ಲಿಂಕ್ ಶೇರ್ ಮಾಡಿದ್ದ. ಚಿತ್ರದ ನಿರ್ಮಾಪಕರು ನೀಡಿದ ದೂರಿನ ಅನ್ವಯ ಸೆಪ್ಟೆಂಬರ್ 19ರಂದು ರಾಕೇಶ್ನನ್ನು ನೆಲಮಂಗಲದಲ್ಲಿ ಬಂಧಿಸಲಾಗಿದೆ.

ದೂರಿನಲ್ಲಿ ಏನಿದೆ?
16/9/2019ರಂದು ಪೈಲ್ವಾನ್ ಸಿನಿಮಾ ನಿರ್ಮಾಪಕರು ಕಾಪಿ ರೈಟ್ ಮಾಲೀಕರ ಅನುಮತಿ ಪಡೆಯದೇ ಪೈಲ್ವಾನ್ ಚಿತ್ರದ ಲಿಂಕ್ಗಳನ್ನು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಂಡು ಸಂಪೂರ್ಣ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ನಷ್ಟ ಮಾಡಿರುತ್ತಾರೆ ಎಂದು ಆರೋಪಿಯ ವಿರುದ್ಧ ದೂರು ನೀಡಲಾಗಿತ್ತು.
-
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ










Click it and Unblock the Notifications