ಸೋಲಾರ್ ಬಳಸಿ ಸ್ವಾವಲಂಬಿಯಾದ ಅಜ್ಜಿ, ಹಲವರಿಗೆ ಮಾದರಿ
ಬೆಂಗಳೂರು, ಜನವರಿ 28: ತಂತ್ರಜ್ಞಾನವನ್ನು ಬಳಸಿಕೊಂಡು ಜೀವನವನ್ನು ಸರಳಗೊಳಿಸಿಕೊಳ್ಳಬೇಕು. ತಂತ್ರಜ್ಞಾನದ ಲಾಭ ಕಟ್ಟಕಡೆಯ ಮನುಷ್ಯನಿಗೂ ತಲುಪೇಕು ಎಂಬುದು ಎಲ್ಲ ಸರ್ಕಾರಗಳ ಆಶಯ. ಆದರೆ ಅದು ಸಾಕಾರಗೊಂಡಿರುವುದು ವಿರಳ. ಆದರೆ ಇದಕ್ಕೆ ವ್ಯತಿರಿಕ್ತವಾದ ಉದಾಹರಣೆಯೊಂದು ಬೆಂಗಳೂರಿನಲ್ಲೇ ಇದೆ.
ವಿಧಾನಸೌಧದ ಮುಂದೆ ಹಣ್ಣು ವಯಸ್ಸಿನ ಮುದುಕಿಯೊಬ್ಬರು ಸೋಲಾರ್ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸಣ್ಣ ಪ್ರಮಾಣದ ಜೋಳದ ವ್ಯಾಪಾರ ಮಾಡುತ್ತಿದ್ದಾರೆ. ಸೋಲಾರ್ ಅನ್ನು ವ್ಯಾಪಾರದ ಶ್ರಮ ಕಡಿಮೆ ಮಾಡಲು ಬಳಸಿರುವುದು ದೊಡ್ಡ-ದೊಡ್ಡವರ ಹುಬ್ಬೇರಿಸಿದೆ.
ಸೆಲ್ವಂ ಎಂಬ ತಮಿಳು ಮೂಲದ ಅಜ್ಜಿ ಒಬ್ಬರು ಸುಮಾರು 18 ವರ್ಷದಿಂದಲೂ ವಿಧಾನಸೌಧದ ಮುಂದೆ ಜೋಳು ಸುಟ್ಟು ಮಾರತ್ತಾ ಜೀವನ ಕಟ್ಟಿಕೊಂಡಿದ್ದಾರೆ. ಆದರೆ ವಯಸ್ಸಾಗಿ ಇತ್ತೀಚಿಗೆ ಕಣ್ಣು ಮಂದವಾಗಿದೆ, ಬೀಸಣಿಕೆ ಬೀಸಿ ಕೆಂಡದ ಮೇಲೆ ಜೋಳ ಸುಡುವ ಕಸುವು ಇಲ್ಲದಾಗಿದೆ. ಇದೇ ಸಮಯದಲ್ಲಿ ಸೋಲಾರ್ ತಂತ್ರಜ್ಞಾನ ಅವರಿಗೆ ನೆರವು ನೀಡಿದೆ.

ಅಜ್ಜಿಯ ಶ್ರಮ ಜೀವನವನ್ನು ನೋಡಿದ್ದ ಸಿಲ್ಕೊ ಸೋಲಾರ್ ಸಂಸ್ಥೆಯ ಉದ್ಯೋಗಿ ಶಾಸ್ತ್ರಿ ಎಂಬುವರು ಸಂಸ್ಥೆಯ ಸಿಬ್ಬಂದಿಯ ಜೊತೆಗೆ ಮಾತನಾಡಿ ಸಂಸ್ಥೆಯಿಂದ ಅಜ್ಜಿಗೆ ಸೋಲಾರ್ ಉಪಕರಣವೊಂದನ್ನು ನೀಡಿದ್ದಾರೆ. ಅದರಲ್ಲಿ ಸೂರ್ಯನ ಬೆಳಕಿನಿಂದ ಫ್ಯಾನ್ ತಿರುಗುವಂತೆ ಹಾಗೂ ಲೈಟ್ ಒಂದು ಉರಿಯುವಂತೆ ಮಾಡಲಾಗಿದೆ.
ಸೋಲಾರ್ ಉಪಕರಣ ಬಂದ ಮೇಲೆ, ಬೀಸಣಿಕೆ ಬೀಸಿ ಕೆಂಡ ಉರಿಸುವ ಶ್ರಮದಿಂದ ಅಜ್ಜಿಗೆ ಮುಕ್ತಿ ದೊರೆತಿದೆ. ಕತ್ತಲ ಸಮಯದಲ್ಲಿ ಸೋಲಾರ್ ದೀಪದಿಂದ ಅಂಗಡಿ ಬೆಳಗಿಸುತ್ತಿದ್ದಾರೆ ಅಜ್ಜಿ. ಸೋಲಾರ್ ತಂತ್ರಜ್ಞನವನ್ನು ತನ್ನ ತಳ್ಳುಗಾಡಿಗೆ ಅಳವಡಿಸಿದ ಮೇಲೆ ಸಾಕಷ್ಟು ಶ್ರಮ ಕಡಿಮೆ ಆಗಿದೆ ಎಂದು ಅಜ್ಜಿ ಸಂತೋಶದಿಂದ ಹೇಳುತ್ತಾರೆ.
-
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications