ಹಳೇ ದ್ವೇಷ: ರೌಡಿ ಶೀಟರ್ ಸಂತೋಷ್ ಬರ್ಬರ ಹತ್ಯೆ
ಬೆಂಗಳೂರು, ಜನವರಿ 23: ಹಳೇ ದ್ವೇಷಕ್ಕೆ ಓರ್ವ ರೌಡಿ ಶೀಟರ್ ಮತ್ತೊಬ್ಬ ರೌಡಿಶೀಟರ್ನ್ನು ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂತೋಷ್(32) ಹತ್ಯೆಯಾದ ರೌಡಿ, ಸಂತೋಷ್ ರಾಜಾನುಕುಂಟೆ ನಿವಾಸಿಯಾಗಿದ್ದ, ರಾಜಾನುಕುಂಟೆಯ ಮಾದಪನಹಳ್ಳಿಯಲ್ಲಿ ಘಟನೆ ನಡೆದಿದೆ. ಸಂತೋಷ್ ಮೇಲೆ ಲಾಂಗ್ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರಕೆರೆ ವೇಣು ಹಾಗೂ ಸಂತೋಷ್ ನಡುವೆ ಈ ಹಿಂದೆಯೂ ಗಲಾಟೆ ನಡೆದಿತ್ತು. ಈ ವೇಳೆ ವೇಣುವಿಗೆ ಸಂತೋಷ್ ತೀವ್ರ ರೀತಿಯಲ್ಲಿ ಥಳಿಸಿದ್ದ.

ಬಳಿಕ ಸಂತೋಷ್ ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ, ಹಳೇ ದ್ವೇಷಕ್ಕೆ ಸಂತೋಷ್ನನ್ನು ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications