ಕಲಾವಿದರ ಕಲ್ಯಾಣ ನಿಧಿ ಸಂಗ್ರಹಕ್ಕೆ ಡಿಜಿಟಲ್ ಸಂಗೀತ ಕಚೇರಿ
ಬೆಂಗಳೂರು, ಜೂನ್ 12: ಸವಾಲುದಾಯಕ ಕೋವಿಡ್-19ನಿಂದ ಚಾಲಿತವಾದ ಲಾಕ್ಡೌನ್ನಿಂದ ನಿಶ್ಶಬ್ದವಾಗಿ ಸಂತ್ರಸ್ತರಾದವರಲ್ಲಿ ಪ್ರದರ್ಶನ ಕಲೆ ಹಾಗೂ ಕಲಾವಿದರು ಮೊದಲಿಗರು. ಇತರ ವ್ಯವಹಾರಕ್ಕಿಂತ ಭಿನ್ನವಾಗಿ ಸಮೂಹ ಮನೋರಂಜನೆ ನೀಡುವ ಈ ವೃತ್ತಿ ಸುಧೀರ್ಘ ಕಾಲದಿಂದ ಬಾಧಿತವಾಗಿದೆ.
ಪ್ರವೀಣ್ ಡಿ.ರಾವ್ ಅವರ ಪರಿಕಲ್ಪನೆಯಂತೆ ರೂಪುಗೊಂಡ ಸಂಗೀತ ಕಲಿಕಾ ಮತ್ತು ಹಂಚಿಕೆಯ ವರ್ಚುವಲ್ ಪ್ಲಾಟ್ಫಾರಂ ಎನಿಸಿದ ಸಂಯೋಚನೆ ಆರಂಭದಲ್ಲಿ ಪ್ರಯೋಗಾತ್ಮಕವಾಗಿದ್ದು, ಕ್ಷಿಪ್ರವಾಗಿ ಚಳವಳಿಯಾಗಿ ಬೆಳೆದು ನಿಂತಿದೆ. ಇದೀಗ 500ಕ್ಕೂ ಹೆಚ್ಚು ಮಂದಿ ಖ್ಯಾತ ಸಂಗೀತಕಾರರು, ಕವಿಗಳು ಹಾಗೂ ತಂತ್ರಜ್ಞರು ಇದರ ಜತೆ ಜೋಡಿಸಿಕೊಂಡಿದ್ದಾರೆ.
ಸಂಯೋಚನೆ ಡಿಜಿಟಲ್ ನೇರ ಸಂಗೀತ ಕಚೇರಿ ಪ್ಲಾಟ್ಫಾರಂ ಬಗ್ಗೆ ಮಾತನಾಡಿದ ಪ್ರವೀಣ್ ಡಿ.ರಾವ್, ''ಸಂಯೋಚನೆ ಡಿಜಿಟಲ್ ನೇರ ಸಂಗೀತ ಸರಣಿಯು ಸಂಗೀತಪ್ರೇಮಿಗಳಿಗೆ ನಾವು ಸೃಷ್ಟಿಸಿದ ರೋಮಾಂಚಕ ಹೊಸ ವಿಷಯಗಳನ್ನು ಪರಿಚಯಿಸುವುದು ಮಾತ್ರವಲ್ಲದೇ, ವಿಷಯ ಸೃಷ್ಟಿಕರ್ತರು ಮತ್ತು ಕಲಾವಿದರಿಗೆ ತಮ್ಮ ಕೊಡುಗೆಯನ್ನು ನಗದೀಕರಿಸಿಕೊಳ್ಳಲು ಕೂಡಾ ನೆರವಾಗಿದೆ. ಈ ನೇರಪ್ರಸಾರದ ಸಂಗೀತ ಕಾರ್ಯಕ್ರಮ ಎಲ್ಲರಿಗೂ ಉಚಿತವಾಗಿದ್ದರೂ, ಸಂಗೀತ ಪೋಷಕರು ಈ ಸಕಾರಣಕ್ಕೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಕಲಾವಿದರ ಕಲ್ಯಾಣಕ್ಕೆ ನೆರವಾಗುತ್ತಾರೆ ಎಂಬ ವಿಶ್ವಾಸ ನನ್ನದು'' ಎಂದು ಹೇಳಿದ್ದಾರೆ.

ಓಕ್ಟಾವೆಝ್ ಚಾಲಿತ ಸಂಯೋಚನೆ ಸರಣಿಯು 2020ರ ಜೂನ್ 14ರಂದು ಮಧ್ಯಾಹ್ನ 3 ರಿಂದ ರಾತ್ರಿ 8ರವರೆಗೆ ನೇರ ಸಂಗೀತ ಕರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಇದರಲ್ಲಿ ಎಂ.ಡಿ.ಪಲ್ಲವಿ, ಜೋಗಿ ಸುನೀತಾ, ಸುಪ್ರಿಯಾ, ರಘುನಂದನ್ ಮತ್ತು ಮಂಗಳಾ ರವಿ ಸೇರಿದಂತೆ ಹತ್ತು ಮಂದಿ ಖ್ಯಾತ ಕಲಾವಿದರು ನಿರಂತರವಾಗಿ ಸುಗಮ ಸಂಗೀತ ಸುಧೆ ಹರಿಸಲಿದ್ದಾರೆ. ಸೆಲೆಸ್ಟೈನ್ ಗೆರಾಲ್ಡ್, ಶ್ರೀನಿವಾಸ ಪ್ರಸಾದ್ ಮಧುಸೂಧನ, ಪ್ರದ್ಯುಮ್ನ ಸೊರಬ, ಕೃಷ್ಣ ಉಡುಪ, ಸಂಗೀತ ಥಾಮಸ್ ಮತ್ತು ಅಭಿಷೇಕ್ ಎ. ಅವರೂ ಭಾಗವಹಿಸುವರು.
ಭಾರತದ ವಿಶಿಷ್ಟ ಹಾಗೂ ಅಗ್ರಗಣ್ಯ ಸಂಗೀಕ ಕಲಿಕಾ ಆ್ಯಪ್ ಆಗಿರುವ ಓಕ್ಟಾವೆಝ್ ಟೀಂ ಸಂಯೋಚನೆ ಜತೆ ಕೈಜೋಡಿಸಿದೆ. ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿರುವ ಓಕ್ಟಾವೆಝ್, ಖ್ಯಾತ ಕಲಾವಿದರನ್ನು ಕರೆ ತರಲಿದ್ದು, ಅವರ ಪ್ರಸ್ತುತಿಯನ್ನು ನಿಮ್ಮ ಬೆರಳ ತುದಿಗೆ ತಲುಪಿಸಲಿದೆ. ಸ್ವೀಕರಿಸಿದ ಸಂಪೂರ್ಣ ದೇಣಿಗೆ ಹಾಗೂ ಇತರ ಆದಾಯವನ್ನು ಕಾರ್ಯಕ್ರಮ ನೀಡುವ ಕಲಾವಿದರಿಗೆ ಹಾಗೂ ಕಲಾವಿದರ ನಿಧಿಗೆ ನೀಡುವುದು ಒಂದು ಭಾಗವಾದರೆ, ಓಕ್ಟಾವೆಝ್ನ ಕೊಡುಗೆಯೆಂದರೆ, ಸಂಗೀತ ಕೋರ್ಸ್ಗಳಿಗೆ ಸದಸ್ಯತ್ವ ಪಡೆಯುವುದರಿಂದ ಬಂದ ಆದಾಯದ ದೊಡ್ಡ ಮೊತ್ತವನ್ನು ಕಲಾವಿದರ ಕಲ್ಯಾಣ ಕಾರ್ಯಕ್ಕೆ ವಿನಿಯೋಗಿಸಲಾಗುವುದು.

ಏನು: ಕಲಾವಿದರ ಕಲ್ಯಾಣಕ್ಕೆ ನಿಧಿ ಸಂಗ್ರಹಕ್ಕೆ ನೇರಪ್ರಸಾರದ ಡಿಜಿಟಲ್ ಸಂಗೀತ ಕಚೇರಿ
ಯಾವಾಗ: ಜೂನ್ 14, 2020
ಸಮಯ: ಮಧ್ಯಾಹ್ನ 3 ರಿಂದ ರಾತ್ರಿ 8
ಎಲ್ಲಿ: ಸಂಯೋಚನೆ (someyochane) ಫೇಸ್ಬುಕ್ ಪೇಜ್, ಅಧಿಕೃತ ಓಕ್ಟಾವೆಝ್ (OctavezApp) ಫೇಸ್ಬುಕ್ ಪೇಜ್ ಮತ್ತು ಕಲಾವಿದರ ವೈಯಕ್ತಿಕ ಸಾಮಾಜಿಕ ಜಾಲತಾಣ ಪುಟಗಳು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications