ಬೆಂಗಳೂರಿನಲ್ಲಿ ಘರ್ಷಣೆಗೆ ಕಾರಣವಾಯ್ತು ಹೈದ್ರಾಬಾದ್ ಪ್ರಕರಣ

ಬೆಂಗಳೂರು, ಜನವರಿ,22: ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಆತ್ಮಹತ್ಯೆ ಇದೀಗ ಎನ್ಎಸ್ ಯುಐ ಹಾಗೂ ಎಬಿವಿಪಿ ನಡುವಿನ ಘರ್ಷಣೆಗೂ ಕಾರಣವಾಗಿದ್ದು, ಈ ಸಂಬಂಧ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಎಬಿವಿಪಿ ಮುಖಂಡರು ಮಾಧ್ಯಮಗಳಲ್ಲಿ ದಲಿತ ವಿದ್ಯಾರ್ಥಿ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಎನ್ಎಸ್ ಯುಐ ಖಂಡಿಸಿದ್ದು, ಎಬಿವಿಪಿ ಕಚೇರಿ ಮುಂದೆ ನಡೆದ ಪ್ರತಿಭಟನೆ ತಾರಕಕ್ಕೆ ಏರಿದ ಪರಿಣಾಮ ಪೊಲೀಸರು ಈ ಕ್ರಮಕ್ಕೆ ಮುಂದಾದರು.[ಹೈದರಾಬಾದ್ : ನೊಂದ ದಲಿತ ವಿದ್ಯಾರ್ಥಿ ಆತ್ಮಹತ್ಯೆ, ವಿವಿ ಪ್ರಕ್ಷುಬ್ಧ]

Bengaluru

ಎಬಿವಿಪಿ ಮುಖಂಡರು ಹೇಳಿದ್ದೇನು?

ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಕ್ಸಲ್ ಹಾಗೂ ಉಗ್ರವಾದಿಗಳ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ನಡೆದ ಚರ್ಚೆಯಲ್ಲಿ ಹೇಳಿದ ಪರಿಣಾಮ ಎನ್ಎಸ್ ಯುಐ ಸಂಘಟನಾಕಾರರು ಎಬಿವಿಪಿ ವಿರುದ್ಧ ಕಿಡಿಕಾರಿದರು.

ಎಬಿವಿಪಿ ಮುಖಂಡರು ಈ ಹೇಳಿಕೆ ಸಾಬೀತು ಪಡಿಸಲಿ ಎಂದು ಎನ್ಎಸ್ ಯುಐ ಪಟ್ಟು ಹಿಡಿದ ಪರಿಣಾಮ ಎಬಿವಿಪಿ ಹಾಗೂ ಎನ್ಎಸ್ ಯುಐ ನಡುವೆ ಕಲ್ಲು ತೂರಾಟಗಳು ನಡೆದಿದ್ದು, ಎರಡು ತಂಡದವರೂ ಗಾಯಗೊಂಡಿದ್ದಾರೆ.[ಎಬಿವಿಪಿ ಕಾರ್ಯಕರ್ತರ ಮೇಲೆ ಎನ್ ಎಸ್ ಯುಐ ದಾಳಿ]

ಈ ಕುರಿತು ಶೇಷಾಧ್ರಿಪುರಂ ಪೊಲೀಸ್ ಠಾಣೆಯಲ್ಲಿ ಎನ್ಎಸ್ ಯುಐ ಜನರಲ್ ಸೆಕ್ರೆಟರಿ ಸಿರಿಲ್ ಪ್ರಭು, ಅಸೆಂಬ್ಲಿ ಕೋ ಆರ್ಡಿನೆಟರ್ ಸಂತೋಷ್ ಕುಮಾರ್, ಸ್ಟೇಟ್ ಸೆಕ್ರೆಟರಿ ಕೀರ್ತಿ ಗಣೇಶ್ ಇನ್ನು ಮುಂತಾದವರು ಸೇರಿ ಎಬಿವಿಪಿ ವಿರುದ್ಧ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+