ಗೂಂಡಾ ಕಾಯ್ದೆಯೇ ರೌಡಿಸಂ ಕೊನೆಗಾಣಿಸಲು ಮದ್ದು
ಬೆಂಗಳೂರು, ಸೆ. 11 : ರೌಡಿಗಳ ಅಟ್ಟಹಾಸ ಕೊನೆಗಾಣಿಸಲು ಬೆಂಗಳೂರು ಪೊಲೀಸರು ಬದ್ಧರಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ವರದಿಗಾರ ಒಕ್ಕೂಟ ಪ್ರೆಸ್ ಕ್ಲಬ್ನಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿ, ರೌಡಿಸಂ ಎನ್ನುವುದು ಕೇವಲ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಯಲ್ಲ. ಇದನ್ನು ಪರಿಹರಿಸಲು ಪ್ರತಿಯೊಬ್ಬ ನಾಗರಿಕನೂ ಪೊಲೀಸ್ ಇಲಾಖೆಯೊಂದಿಗೆ ಶ್ರಮಿಸಬೇಕು ಎಂದು ತಿಳಿಸಿದರು.(ಗೂಂಡಾ ಕಾಯ್ದೆ ಏನಿದು? ಈಗ ಸುದ್ದಿಯಲ್ಲೇಕಿದೆ?)
ಹೊಸದಾಗಿ 10 ಸಾವಿರ ರೌಡಿ ಶೀಟರ್ ಪಟ್ಟಿ ತೆರೆಯಬೇಕಾಗಿ ಬಂದಿರುವುದು ದುರ್ದೈವ. ಬೆಂಗಳೂರಿಗೆ ಹೊರಗಿನ ರಾಜ್ಯಗಳಿಂದ ಗ್ಯಾಂಗ್ಗಳು ಆಗಮಿಸುತ್ತಿರುವ ಮಾಹಿತಿಯಿದೆ. ಎಲ್ಲ ಕಡೆ ಚೆಕ್ ಬಂದಿ ನಿರ್ಮಿಸಿ ಅನುಮಾನ ಬಂದವರನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು.(ಪೊಲೀಸರ ಬಲೆಗೆ ಬಿದ್ದ ಶಸ್ತ್ರಾಸ್ತ್ರ ಮಾರಾಟಗಾರ)
ಸರಗಳ್ಳತನ, ಮನೆ ದರೋಡೆ, ವಾಹನ ಕಳ್ಳತನ ಮತ್ತಿತರ ಅಪರಾಧ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಯಾವುದೆ ಗೊಂದಲಕ್ಕೆ ಒಳಗಾಗದೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ತಕ್ಷಣ ಇಲಾಖೆ ಕಾರ್ಯನಿರತವಾಗುತ್ತದೆ ಎಂದು ಭರವಸೆ ನೀಡಿದರು.
ಸಹಾಯವಾಣಿಗಳಿವು
ಹಿರಿಯ ನಾಗರಿಕರಿಗೆ- 1090
ಮಕ್ಕಳ ಸಹಾಯವಾಣಿ-1098
ವನಿತಾ ಸಹಾಯವಾಣಿ-1091
ಆಂಬುಲೆನ್ಸ್-105711, 1062 / 108
ಟ್ರಾಫಿಕ್- 103. 080-2294 3030, 131
ಆಟೊ ಚಾಲಕರ ಹುಚ್ಚಾಟ- 080-25588444 / 555
ಆತ್ಮಹತ್ಯೆ-080-25497777
ಅಗ್ನಿ ಶಾಮಕ ದಳ-080-22971500

ಗೂಂಡಾ ಕಾಯ್ದೆಯೇ ಮದ್ದು
ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುವವರ ಮೇಲೆ ಗೂಂಡಾ ಕಾಯ್ದೆ ದಾಖಲಿಸುವುದೇ ಸದ್ಯದ ಪರಿಹಾರ. ಈಗಾಗಲೇ 10-15ಜನರನ್ನು ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಲಕ್ಷಕ್ಕೊಬ್ಬರು ಅಪರಾಧ ಚಟುವಟಿಕೆಯತ್ತ ಒಲವು ತೋರುವ ಲಕ್ಷಣವಿದ್ದು ಅದಕ್ಕೂ ಇದು ಬ್ರೇಕ್ ಹಾಕುತ್ತದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.

ಸ್ವತಂತ್ರ ದೂರು ದಾಖಲು ಕೇಂದ್ರ
ಪೊಲೀಸ್ ಠಾಣೆಗೆ ತೆರಳಿದಾಗ ಕೆಲ ಅಡಚಣೆಗಳು ಸಾರ್ವಜನಿಕರಿಗಾಗುತ್ತಿರುವ ದೂರು ಕೇಳಿಬಂದಿದೆ. ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂಬ ಪೊಲೀಸರ ಉತ್ತರ ಹಲವರಿಗೆ ನೋವು ತರುತ್ತಿದೆ. ಇದಕ್ಕೆಲ್ಲ ಪರಿಹಾರ ಎಂಬಂತೆ ಜನಸ್ನೇಹಿ ಸ್ವತಂತ್ರ ದೂರು ದಾಖಲು ಕೇಂದ್ರ ತೆರೆಯುವ ಯೋಜನೆ ಪರಿಶೀಲನೆಯಲ್ಲಿದೆ ಎಂದರು.

ಟ್ರಾಫಿಕ್ ಕಂಟ್ರೋಲ್ಗೆ ಸೂತ್ರ
ಟ್ರಾಫಿಕ್ ನಿಯಂತ್ರಣ ಸವಾಲಿನ ಕೆಲಸವಾಗಿದ್ದು ನಿಧಾನವಾಗಿ ಸಂಚರಿಸುವ ವಾಹನಗಳಿಗೊಂದು ಮಾರ್ಗ, ವೇಗವಾಗಿ ಸಂಚರಿಸುವ ವಾಹನಗಳಿಗೆ ಒಂದು ಮಾರ್ಗ ಮತ್ತು ಸುಸಜ್ಜಿತ ಫುಟ್ಪಾತ್ ನಿರ್ಮಾಣ ಸರ್ಕಾರದಿಂದಾಬೇಕು ಎಂದು ಸಲಹೆ ನೀಡಿದರು.

ಲಾರಿ ಲಾಬಿಗೆ ಮಣೆ ಹಾಕಿಲ್ಲ
ನಗರದ ಯಾವ ರೆಸ್ತೆಯಲ್ಲಿ ಬೇಕಾದರೂ ಬೆಳಗ್ಗೆಯಿಂದ ಸಂಜೆಯವರೆಗೆ ಲಾರಿಗಳು ರಾಜಾರೋಷವಾಗಿ ತಿರುಗಾಡುತ್ತಿವೆ. ಇದರ ಹಿಂದೆ ಲಾಬಿಯೊಂದಿದ್ದಂತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ ಈ ಬಗ್ಗೆ ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆಹಾಕುತ್ತೇನೆ ಎಂದರು.

ಪತ್ರಕರ್ತರ ಮನವಿ
ಮಾಧ್ಯಮದವರೆಂದು ಹೇಳಿಕೊಂಡು ಅನೇಕರು ವಂಚನೆ ಮಾಡುತ್ತಿದ್ದು ತಮ್ಮ ವಾಹನಗಳಿಗೆ 'ಪ್ರೆಸ್' ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡಲು ಪೊಲೀಸ್ ಇಲಾಖೆ, ಪ್ರತಕರ್ತರ ಸಂಘದ ಸಂಯೋಜನೆಯಲ್ಲಿ ಎರಡು ಸಂಸ್ಥೆಗಳ ಅಧಿಕೃತ ಮಾನ್ಯತೆ ಪಡೆದಿರುವ ಸ್ಟಿಕ್ಕರ್ ನೀಡಬೇಕು ಎಂದು ಬೆಂಗಳೂರು ಪ್ರೆಸ್ ಕ್ಲಬ್ನಿಂದ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications