ಬೆಂಗಳೂರಿನಲ್ಲಿ ಬಿ ಖಾತೆ ಸೈಟ್ಗಳಿಗೆ ಮುಕ್ತಿ; ಇದು ಅಕ್ರಮ ಸಕ್ರಮವಾ?
ಬೆಂಗಳೂರು, ಏ. 26: ಈ ಬಾರಿಯ ಬಜೆಟ್ನಲ್ಲಿ ಘೋಷಿಸಲಾದಂತೆ ನಗರದಲ್ಲಿರುವ ಎಲ್ಲಾ ನಿವೇಶನಗಳಿಗೂ ಏಕರೀತಿಯ ಖಾತೆ ದಾಖಲೆಗಳನ್ನ ನೀಡಲು ಬಿಬಿಎಂಪಿ ಸಜ್ಜಾಗಿದೆ. ಅಂದರೆ ಬೆಂಗಳೂರಿನ ನಿವೇಶನಗಳಲ್ಲಿ ಎ ಖಾತೆ ಮತ್ತು ಬಿ ಖಾತೆ ಎಂದು ವರ್ಗೀಕರಣ ಇರುವುದಿಲ್ಲ. ಬಿ ಖಾತೆ ಇರುವ ನಿವೇಶನಗಳನ್ನ ಎ ಖಾತೆಗೆ ಪರಿವರ್ತಿಸುವ ಕೆಲಸವನ್ನು ಮಾಡಲಾಗುತ್ತದೆ. ನಗರದಲ್ಲರುವ ಎಲ್ಲಾ ಆಸ್ತಿಗಳಿಗೂ ಖಾತೆ ಮತ್ತು ಪಿಐಡಿ ನಂಬರ್ ಒದಗಿಸುವಂತೆ ಸರಕಾರದಿಂದ ಬಿಬಿಎಂಪಿಗೆ ಸೂಚನೆ ರವಾನೆಯಾಗಿದೆ.
ರೆವೆನ್ಯೂ ಭೂಮಿಯಲ್ಲಿ ಮನೆಗಳನ್ನ ಕಟ್ಟಿಕೊಂಡು ಬಿ ಖಾತೆ ಹೊಂದಿರುವವರು ನಿರ್ದಿಷ್ಟ ಮೊತ್ತದಷ್ಟು ಬೆಟರ್ಮೆಂಟ್ ಶುಲ್ಕ ಪಾವತಿಸಿ ಎ ಖಾತೆ ಸರ್ಟಿಫಿಕೇಟ್ ಪಡೆಯಬಹುದು. ಈ ಕ್ರಮದಿಂದ ಬೆಂಗಳೂರಿನಲ್ಲಿರುವ 6.16 ಲಕ್ಷ ರೆವೆನ್ಯೂ ನಿವೇಶನಗಳ ಮಾಲೀಕರಿಗೆ ಅನುಕೂಲವಾಗುತ್ತದೆ. ಈ ನಿವೇಶನಗಳ ಮೌಲ್ಯ ಹೆಚ್ಚಳವಾಗುತ್ತದೆ, ಜೊತೆಗೆ ಈ ನಿವೇಶನದ ದಾಖಲೆಗಳ ಮೇಲೆ ಬ್ಯಾಂಕ್ ಲೋನ್ ಕೂಡ ಸಿಗುತ್ತದೆ.
ಏಪ್ರಿಲ್ 13ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಬಿ ಖಾತೆಯಿಂದ ಎ ಖಾತೆಗೆ ಪರಿವರ್ತಿಸುವ ಈ ಕಾರ್ಯದಿಂದ ಬಿಬಿಎಂಪಿಗೆ 1000 ಕೋಟಿ ರೂ ಆದಾಯ ಹರಿದುಬರುವ ನಿರೀಕ್ಷೆ ಇದೆ.

ಖಾತೆ ಪರಿವರ್ತನೆಯಾದರೆ ನಿವೇಶನ ಸಕ್ರಮವಾಗುತ್ತಾ?
ರೆವೆನ್ಯೂ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ನಿವೇಶನಗಳಿಗೆ ಎ ಖಾತೆ ಸಿಕ್ಕಿದರೆ ಅದು ಸಕ್ರಮವಾಗುತ್ತದಾ ಎಂದು ಹಲವರಿಗೆ ಗೊಂದಲವಾಗಿದೆ. ಆದರೆ, ಸರಕಾರದ ಅಕ್ರಮ ಸಕ್ರಮ ಯೋಜನೆಗೂ ಈ ಖಾತೆ ಪರಿವರ್ತನೆ ಕಾರ್ಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
"ಸಕ್ರಮವಾಗಿರಲಿ ಅಥವಾ ಅಕ್ರಮದ್ದಾಗಿರಲಿ ಯಾವುದೇ ನಿವೇಶನಕ್ಕೂ ನಾವು ಖಾತೆ ಕೊಡುತ್ತೇವೆ. ಹೈಕೋರ್ಟ್ ಆದೇಶದಲ್ಲಿ ಇದು ಸ್ಪಷ್ಟವಾಗಿದೆ. ಹಾಗೆಯೇ ಬಿಬಿಎಂಪಿ ಕಾಯ್ದೆಯಲ್ಲೂ ಎ ಖಾತೆ ಮತ್ತು ಬಿ ಖಾತೆ ಎಂಬ ವರ್ಗೀಕರಣ ಇಲ್ಲ. ಎಲ್ಲಾ ಆಸ್ತಿಗಳಿಗೂ ಒಂದೇ ರೀತಿಯ ಖಾತೆಯನ್ನ ನೀಡಲು ನಿರ್ಧರಿಸಿದ್ದೇವೆ. ಆದರೆ, ಅಧಿಕೃತ ಮತ್ತು ಅನಧಿಕೃ ಕಟ್ಟಡಗಳಿಗೆ ಪ್ರತ್ಯೇಕ ರಿಜಿಸ್ಟರ್ ಇಡಲಾಗುತ್ತದೆ" ಎಂದು ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಸ್ಥಗಿತಗೊಂಡಿರುವ ಅಕ್ರಮ ಸಕ್ರಮ ಯೋಜನೆ ಬಗ್ಗೆ ಏಪ್ರಿಲ್ ೧೩ರ ಸಭೆಯಲ್ಲಿ ಚರ್ಚಿಸಲಾಗಿದೆ. ಸರಕಾರದ ಈ ಯೋಜನೆಗೆ ೨೦೧೭ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಕೋರ್ಟ್ನಿಂದ ಅಂತಿಮ ತೀರ್ಪು ಬರುವವರೆಗೂ ಯಾವುದೇ ಅನಧಿಕೃತ ಕಟ್ಟಡಗಳನ್ನ ಸಕ್ರಮ ಮಾಡುವ ಕಾರ್ಯಕ್ಕೆ ಕೈಹಾಕದಿರಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಖಾತೆ ವರ್ಗೀಕರಣ ಯಾವಾಗ ಶುರುವಾಗಿದ್ದು?
2007ರಲ್ಲಿ ಆಸ್ತಿ ತೆರಿಗೆ ಪದ್ಧತಿಯನ್ನು ಸರಳಗೊಳಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿರುವ ಆಸ್ತಿಗಳನ್ನ ಎ ಖಾತೆ ಮತ್ತು ಬಿ ಖಾತೆಗಳೆಂದು ಬಿಬಿಎಂಪಿ ವರ್ಗೀಕರಣ ಮಾಡಿತ್ತು. ಅಧಿಕೃತವಾದ ನಿವೇಶನಗಳಿಗೆ ಮಾತ್ರ ಪಿಐಡಿ ನಂಬರ್ ಒದಗಿಸಲಾಗಿತ್ತು. (ಒನ್ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications