ಪಾರ್ಶ್ವವಾಯುಪೀಡಿತ 102 ವರ್ಷದ ವ್ಯಕ್ತಿ ರಕ್ಷಿಸಿದ ನಾರಾಯಣ ಆಸ್ಪತ್ರೆ
ಬೆಂಗಳೂರು, ಆಗಸ್ಟ್ 1: ಪಾರ್ಶ್ವವಾಯು ಪೀಡಿತರಾಗಿದ್ದ 102 ವರ್ಷ ವಯಸ್ಸಿನ ರೋಗಿಗೆ ವೈಟ್ಫೀಲ್ಡ್ ನಲ್ಲಿ ಇರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆನೀಡಿದ್ದಾರೆ. ಥ್ರೊಂಬೊಲೈಸಿಸ್ ನೀಡುವ ಮೂಲಕ ಜೀವರಕ್ಷಣೆ ಮಾಡಿದ್ದಾರೆ.
ರಾಮಸ್ವಾಮಿ ಅವರು ವೈಟ್ಫೀಲ್ಡ್ನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಒಮ್ಮೆ ಏಕಾಏಕಿ ತಮ್ಮ ಎಡಗೈ ಮತ್ತು ಕಾಲಿನಲ್ಲಿ ದುರ್ಬಲತೆ ಕಾಣಿಸಿಕೊಂಡಿತು. ಕುಟುಂಬ ಸದಸ್ಯರು ಇದು ಸಾಮಾನ್ಯ ದೌರ್ಬಲ್ಯವಲ್ಲ ಎಂದು ಅರಿತುಕೊಂಡರು, ತಕ್ಷಣವೇ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಿದರು.
ರೋಗದ ಲಕ್ಷಣಗಳು ಇದು ಪಾರ್ಶ್ವವಾಯುವಿಗೆ ಹೋಲಿಕೆ ಆಗುತ್ತಿತ್ತು.
ಡಾ.ಎನ್.ದೀಪಕ್, ಅಸೋಸಿಯೇಟ್ ಕನ್ಸಲ್ಟಂಟ್, ನ್ಯೂರಾಲಾಜಿಸ್ಟ್, ನಾರಾಯಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ವೈಟ್ಫೀಲ್ಡ್ ಮತ್ತು ತಂಡ ಮಿದುಳಿನ ಎಂಆರ್ಐ ಸ್ಕ್ಯಾನ್ ಮಾಡಿಸಿತು. ಡಯಾಗ್ನೋಸಿಸ್ನಲ್ಲಿ ರಾಮಸ್ವಾಮಿ ಅವರ ಮಿದುಳಿನ ಬಲಭಾಗದಲ್ಲಿ ಪಾರ್ಶ್ವವಾಯು ಪೀಡಿತರಾಗಿದ್ದು, ಸಮರ್ಪಕವಾಗಿ ರಕ್ತಪೂರೈಕೆಯಾಗುತ್ತಿಲ್ಲ ಎಂಬುದು ಕಂಡುಬಂತು.

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ತನ್ನ ಸುದೀರ್ಘ ಅನುಭವವನ್ನು ಆಧರಿಸಿ ರೋಗಿ ಪರಿಸ್ಥಿತಿಯ ವಿಶ್ಲೇಷಣೆಯ ನಂತರ ಥ್ರೊಂಬೊಲೈಸಿಸ್ಗೆ ಶಿಫಾರಸು ಮಾಡಿತು.
ಥ್ರೋಂಬೊಲೈಸಿಸ್ ಎಂಬುದು ಒಂದು ಚಿಕಿತ್ಸಾಕ್ರಮವಾಗಿದ್ದು, ರಕ್ತನಾಳಗಳಲ್ಲಿ ಹೆಪ್ಪುಗಟ್ಟಿರುವ ಅಪಾಯಕಾರಿ ಅಂಶವನ್ನು ತೆಗೆದು, ಸರಾಗಾವಾಗಿ ರಕ್ತದ ಚಲನೆಗೆ ಅವಕಾಶ ಮಾಡಿಕೊಡುವುದಾಗಿದೆ. ಥ್ರೊಂಬೊಲೈಸಿಸ್ ಅನ್ನು ಇಂಟ್ರಾವೆನಸ್ (ಐವಿ)ಲೈನ್ ಇಂಜೆಕ್ಷನ್ ಮೂಲಕ ಔಷಧ ನೀಡಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆಯುವುದೇ ಆಗಿದೆ. ರೋಗಿಯನ್ನು ಈ ಮೂಲಕ ಪಾರ್ಶ್ವವಾಯುವಿನಿಂದ ಮೂರು ದಿನದಲ್ಲಿಯೇ ರಕ್ಷಿಸಲು ಸಾಧ್ಯವಾಗಿದೆ. ಇಂದು ರೋಗಿಯು ಸಾಮಾನ್ಯವಾದ ನಿವೃತ್ತ ಜೀವನವನ್ನು ಅನುಭವಿಸುತ್ತಿದ್ದಾರೆ.
ಪ್ರಕರಣದ ವಿವರ ನೀಡಿದ ನಾರಾಯಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ನ ಅಸೋಸಿಯೇಟ್ ಕನ್ಸಲ್ಟಂಟ್ (ನ್ಯೂರಾಲಾಜಿಸ್ಟ್) ಡಾ.ದೀಪಕ್ ಎನ್ ಅವರು, 'ಥ್ರೊಂಬೊಲೈಸಿಸ್ ಚಿಕಿತ್ಸೆಯನ್ನು ಹಿರಿಯ ನಾಗರಿಕರಿಗೆ ನೆರವೇರಿಸುವುದು ಸವಾಲಿನ ಕೆಲಸ. ವಯಸ್ಸಿಗೆ ಅನುಗುಣವಾಗಿ ಮಿದುಳು ದುರ್ಬಲವಾಗಲಿದೆ. ಥ್ರೊಂಬೊಲೈಸಿಸ್ನಂಥ ಶಕ್ತಿಯುತವಾದ ಚಿಕಿತ್ಸೆಯು ಮಿದುಳಿನಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು. ರಾಮಸ್ವಾಮಿ ಅವರು ಇಂಥ ಚಿಕಿತ್ಸೆಗೆ ಒಳಗಾದ ಅತಿ ಹಿರಿಯ ನಾಗರಿಕರಾಗಿದ್ದಾರೆ' ಎಂದು ತಿಳಿಸಿದರು.

ಚಿಕಿತ್ಸೆಗೆ ಸಂತಸವನ್ನು ವ್ಯಕ್ತಪಡಿಸಿದ ರಾಮಸ್ವಾಮಿ ಅವರು, 'ಡಾ. ದೀಪಕ್ ಮತ್ತು ಅವರ ತಂಡವು ನಮ್ಮ ಕುಟುಂಬಕ್ಕೆ ಪೂರ್ಣಬೆಂಬಲ ನೀಡಿತು. ಈ ವಯಸ್ಸಿನಲ್ಲಿ ಪಾಶ್ರ್ವವಾಯು ಪೀಡಿತನಾಗುವುದು ಕುಟುಂಬದ ಮೇಲೆ ಖಂಡಿತವಾಗಿ ಹೆಚ್ಚಿನ ಒತ್ತಡ ಬೀಳುತ್ತಿತ್ತು. ಆದರೆ, ಸೂಕ್ತ ಚಿಕಿತ್ಸೆಯ ಮೂಲಕ ಆಸ್ಪತ್ರೆ ನನಗೆ ಬದುಕು ನೀಡಿದೆ. ಈ ಚಿಕಿತ್ಸೆ ಕೊಡಿಸಿದ್ದಕ್ಕಾಗಿ ನಾನು ಕುಟುಂಬ ಸದಸ್ಯರಿಗೂ ಆಭಾರಿಯಾಗಿದ್ದೇನೆ' ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಪ್ರಕಾರ, ದೀರ್ಘಕಾಲದ ಅಸ್ವಸ್ಥತೆಗೆ ಕಾರಣವಾಗುವ ನರರೋಗ ಸಮಸ್ಯೆಗಳಲ್ಲಿ ಪಾಶ್ರ್ವವಾಯು ಸಾಮಾನ್ಯವಾದುದು. ವಾಸ್ತವವಾಗಿ, ಭಾರತದಲಿ ಇದು ಸಾವಿಗೆ ಕಾರಣವಾಗುವ ಎರಡನೇ ಸಾಮಾನ್ಯ ಸಮಸ್ಯೆಯೂ ಆಗಿದೆ.
ನಾರಾಯಣ ಹೆಲ್ತ್ ನೆಟ್ವರ್ಕ್: ನಾರಾಯಣ ಹೆಲ್ತ್ ಬೆಂಗಳೂರಿನ ಜನರಿಗೆ ತನ್ನ ಏಳು ನೆಟ್ವರ್ಕ್ ಆಸ್ಪತ್ರೆ ಮೂಲಕ ಸೇವೆ ಒದಗಿಸುತ್ತಿದೆ. ಬೊಮ್ಮಸಂದ್ರ, ಎಚ್ಎಸ್ಆರ್ ಲೇಔಟ್, ವೈಟ್ಫೀಲ್ಡ್, ಇಂದಿರಾನಗರ, ನೃಪತುಂಗ ರಸ್ತೆ, ಮತ್ತಿಕೆರೆಯಲ್ಲಿ ಆಸ್ಪತ್ರೆಗಳಿವೆ.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications