ಬೆಂಗಳೂರಿಗೆ ಮೋನೋರೈಲು ಅಗತ್ಯವಿಗೆ : ಜಾರ್ಜ್

ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ. ಆದ್ದರಿಂದ ಮೆಟ್ರೋ ರೈಲು ಜೊತೆಗೆ ಮೋನೋ ರೈಲು ಸೇವೆ ಆರಂಭಿಸುವುದು ಅನಿವಾರ್ಯವಾಗಿಗೆ ಎಂದು ಹೇಳಿದರು.
ನಗರದಲ್ಲಿ ಮೋನೋ ರೈಲು ಯೋಜನೆ ಪ್ರಾರಂಭವಾದರೆ, ನಗರದ ಶೇ 50ರಷ್ಟು ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರುವ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮೋನೋ ರೈಲು ಯೋಜನೆ ಕುರಿತು ಚರ್ಚಿಸಲಾಗುವುದು ಎಂದರು.
ಬಳ್ಳಾರಿ ರಸ್ತೆಯಲ್ಲಿನ ಟ್ರಾಫಿಲ್ ಸಮಸ್ಯೆ ಬಗೆಹರಿಸಲು ಶಾಶ್ವತ ಕಾರ್ಯ ಯೋಜನೆಯನ್ನು ಸರ್ಕಾರ ತಯಾರಿಸುತ್ತಿದೆ. ಅರಮನೆ ಮೈದಾನದಲ್ಲಿನ ಕಾರ್ಯಕ್ರಮಗಳಿಂದಾಗಿ ಬಳ್ಳಾರಿ ರಸ್ತೆಯಲ್ಲಿ ಸದಾ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದರು.
ಯೋಜನೆಯಂತೆ ಅರಮನೆ ಮೈದಾನಕ್ಕೆ ಬಳ್ಳಾರಿ ರಸ್ತೆಯಿಂದ ಆಗಮನ ಮತ್ತು ಜಯಮಹಲ್ ರಸ್ತೆಯಿಂದ ನಿರ್ಗಮನ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜಯಮಹಲ್ ರಸ್ತೆಯ ಅಕ್ಕಪಕ್ಕದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಸರ್ಕಾರ ಈ ಯೋಜನೆ ಕಾರ್ಯಗತಗೊಳ್ಳುವ ತನಕ ಅರಮನೆ ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ನೀಡಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದರು.












Click it and Unblock the Notifications