ವಿಷವೆಂಬ ಕ್ರೌರ್ಯಕೆ ಹಾಲೆಂಬ ಅಮೃತದ ಉತ್ತರ: #MilkFest
ಬೆಂಗಳೂರು, ಜೂನ್ 9: ಬೀಫ್ ಫೆಸ್ಟ್ ಎಂಬ ಅಮಾನವೀಯ ಕೃತ್ಯದ ಮೂಲಕ ವಿಷದ ಬೀಜಗಳನ್ನು ದೇಶದೆಲ್ಲೆಡೆ ಹರಡಲು ಕೆಲವೊಂದು ಗುಂಪುಗಳು ಯೋಜಿಸಿದ್ದವು. ಸಮಾಜದಲ್ಲಿ ಹಬ್ಬಿರುವ ವಿಷವನ್ನು ಹೋಗಲಾಡಿಸಲು ಅಮೃತಸಿಂಚನದ ಅಗತ್ಯವಿದೆ ಎಂದು ಮನಗಂಡವರು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು.
ಈ ಕಾರಣಕ್ಕಾಗಿಯೇ ಬೆಂಗಳೂರಿನ ವಿಜಯನಗರದ ಶ್ರೀಭಾರತಿ ವಿದ್ಯಾಲಯದಲ್ಲಿ ಬರುವ ಭಾನುವಾರ (ಜೂನ್ 11) ಮಧ್ಯಾಹ್ನ 3 ಗಂಟೆಗೆ #MilkFest ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
[ಕ್ರೂರತ್ವದ ವಿರುದ್ಧ ಸಾತ್ವಿಕ ಅಭಿಯಾನ: #BeefFest vs #MilkFest]
ಗೋವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಮಹತ್ವದ ಅಧಿಸೂಚನೆಯನ್ನು ವಿರೋಧಿಸಿದ ಕೆಲ ಗುಂಪುಗಳು ಕೇರಳದಲ್ಲಿ ಅಮಾನವೀಯವಾಗಿ ಗೋವೊಂದನ್ನು ಕಡಿದು ವಿಕೃತಾನಂದದ ಮೂಲಕ ಬೀಫ್ ಫೆಸ್ಟ್ ಎಂಬ ಹಬ್ಬ ಆಚರಿಸಿದರು.
ಈ ಮೂಲಕ ಗೋಹತ್ಯೆಯ ವಿಷಬೀಜವನ್ನು ದೇಶದೆಲ್ಲೆಡೆ ಬಿತ್ತಲು ಮುನ್ನುಡಿ ಹಾಕಲಾಗಿತ್ತು. ಇದೇ ತರಹದ ಕೃತ್ಯವನ್ನು ಬೆಂಗಳೂರಿನಲ್ಲೂ ನಡೆಸಲು ಆಯೋಜಿಸಲಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ, ಈ ನಾಡಿನಲ್ಲಿ ಗೋವಿನ ರಕ್ತ ಹರಿಯಲು ಅವಕಾಶ ಕೊಡಬಾರದು ಎಂದು ಮಿಲ್ಕ್ ಫೆಸ್ಟ್ ಆಚರಿಸಲು ನಿರ್ಧರಿಸಲಾಯಿತು.

ಬೀಫ್ ಫೆಸ್ಟ್ ಪ್ರತಿಯಾಗಿ ಮಿಲ್ಕ್ ಫೆಸ್ಟ್
ಇಂಥಹ ಕ್ರೌರ್ಯಕ್ಕೆ ಕಾರುಣ್ಯದ ಮೂಲಕ ಉತ್ತರ ಕೊಡಬೇಕೆಂಬ ದೃಷ್ಟಿಯಲ್ಲಿ BeefFest ಗೆ ಪ್ರತಿಯಾಗಿ ರಾಜ್ಯಾದ್ಯಂತ #MilkFest ಆಯೋಜಿಸಲಾಗಿದೆ. ಗೋವಿನಿಂದ ಮಾಂಸವನ್ನಲ್ಲ , ಹಾಲು - ಗೋಮಯ - ಗೋಮೂತ್ರಗಳನ್ನು ಪಡೆಯಬೇಕು ಎಂಬುದನ್ನು ಸಾರಿ ಹೇಳಲಿದೆ ಈ ಹಾಲುಹಬ್ಬ. ಗೋವು ನಮ್ಮ ಆಹಾರವಲ್ಲ , ಗೋವು ನಮ್ಮ ಜೀವನದ ಆಧಾರ ಎಂಬುದನ್ನು ಪ್ರಸ್ತುತಪಡಿಸಲಿದೆ ಈ ಹಾಲುಹಬ್ಬ.

ಏನಿರಲಿದೆ ಹಾಲು ಹಬ್ಬದಲ್ಲಿ?
* ಗೋಕ್ಷೀರದ ಸಾತ್ವಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾಟ
* ಹಾಲಿನಿಂದ ಮಾಡುವ ಸ್ವಾದಿಷ್ಟ ಸಿಹಿ ತಿಂಡಿ ತಯಾರಿಯ ಪ್ರಾತ್ಯಕ್ಷಿಕೆ ಮತ್ತು ಮಾರಾಟ
* ಹಾಲಿನ ಮಹತಿ ಸಾರುವ ಸಾಹಿತ್ಯ ಕೃತಿ ಲೋಕಾರ್ಪಣೆ
* ಗೋವಿನ ಮಹತ್ವವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು
* ಹಾಲು ಕುಡಿಯುವದರಿಂದ ನಮಗೇನು ಉಪಯೋಗ ಗೋಮಾಂಸ ಭಕ್ಷಣೆಯಿಂದ ನಮಗಾಗುವ ದುಷ್ಪರಿಣಾಮಗಳ ಕುರಿತು ಪ್ರಸ್ತುತಿ, ಪ್ರದರ್ಶನಗಳ ಅನಾವರಣ.
[ಬೆಂಗಳೂರು: ಜೂನ್ 11 ರಂದು ಅಂಕಿತ ಪ್ರಕಾಶನದ ಐದು ಪುಸ್ತಕ ಬಿಡುಗಡೆ]
|
ಅಭಿಷೇಕ-ಗೋಪೂಜೆ
ವಿಶೇಷವಾಗಿ ಗೋಪಾಲಕೃಷ್ಣನಿಗೆ ಹಾಲಿನ ಅಭಿಷೇಕ, ಗೋಪೂಜೆ ಗೋಗ್ರಾಸ ಸಮರ್ಪಿಸುವ ಅವಕಾಶಗಳು ಇರಲಿದೆ.
ಗೋವು ಕೇವಲ ತಿನ್ನುವ ಸರಕಲ್ಲ ಅದರಿಂದ ಮನುಷ್ಯನ ಜೀವನಕ್ಕೆ ಯಾವೆಲ್ಲ ರೀತಿಯಲ್ಲಿ ಉಪಯೋಗ ಇದೆ ಎಂಬುದನ್ನು ತಿಳಿಯೋಣ ಮತ್ತು ತಿಳಿಸೋಣ
|
ರಾಜ್ಯದಾದ್ಯಂತ ನಡೆಯಲಿ
ಹಾಲುಹಬ್ಬ ಕೇವಲ ಬೆಂಗಳೂರಲ್ಲಿ ಮಾತ್ರ ಅಲ್ಲ, ರಾಜ್ಯಾದ್ಯಂತ ಎಲ್ಲರೂ #MilkFest ಅನ್ನು ಆಚರಿಸಬೇಕು ಎಂಬುದು ಶ್ರೀ ಮಠದ ಅಪೇಕ್ಷೆ
[ಬೆಂಗಳೂರಿನ ಕಲಾರಸಿಕರಿಗಾಗಿ ಜೂ.9 ರಂದು 'ಮಿಸ್ಟಿಕ್ ಲೋಟಸ್']
|
ಸೆಲ್ಫಿ ವಿಥ್ ಗೋವು!
ನಿಮ್ಮ ಅಕ್ಕಪಕ್ಕದವರಿಗೆ, ಶಾಲಾ ಮಕ್ಕಳಿಗೆ, ಸಹೋದ್ಯೋಗಿಗಳಿಗೆ, ಅಪರಿಚಿತಪರಿಚಿತರಿಗೆ ಹೀಗೆ ಯಾರಿಗೆಲ್ಲ ಸಾಧ್ಯವೋ ಅವರಿಗೆಲ್ಲ ಹಾಲಿನ ಪಾಯಸ, ಹಾಲು ಅಥವಾ ಮಜ್ಜಿಗೆಯನ್ನು ಪ್ರೀತಿಯಿಂದ ಕೊಟ್ಟು ಗೋಮಾತೆಯನ್ನು ಸ್ಮರಿಸಿ ಅವರೊಂದಿಗೆ ಸೆಲ್ಫಿಯೊಂದನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ #MilkFest ಎಂಬ ಹ್ಯಾಷಟ್ಯಾಗಿನೊಂದಿಗೆ ಪೋಸ್ಟ್ ಮಾಡುವುದು. ನಮಗಾಗಿಯೇ ಜೀವನ ಸವೆಸುವ ಗೋವುಗಳ ಜೀವ ಉಳಿಸಲು ಇಷ್ಟಾದರೂ ಮಾಡೋಣವೇ?
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications