ಸೆ.9-10 ರ ಮಾತುಕತೆ@ಮುನ್ನೋಟದಲ್ಲಿ ತೇಜಸ್ವಿ, ಶಿಶುನಾಳ ಷರೀಫ
ಬೆಂಗಳೂರು, ಸೆಪ್ಟೆಂಬರ್ 4: ಸಾಹಿತ್ಯ, ಫೋಟೋಗ್ರಫಿ, ನಾಟಕ, ಸಿನೆಮಾ, ಕೃಷಿ, ಸಾಮಾಜಿಕ ಚಳವಳಿ, ಕನ್ನಡಪರ ಚಿಂತನೆ ಎಲ್ಲವುಗಳ ಮಿಶ್ರಣವಾದ ಪೂರ್ಣಚಂದ್ರ ತೇಜಸ್ವಿ ಕನ್ನಡ ಕಂಡ ಅತ್ಯದ್ಭುತ ಸಾಹಿತಿ ಎಂಬುದರಲ್ಲಿ ಎರಡು ಮಾತಿಲ್ಲ.
ರಾಷ್ಟ್ರಕವಿ ಕುವೆಂಪು ಅವರ ಮಗನಾದರೂ ಸಾಹಿತ್ಯ ಪ್ರಕಾರದಲ್ಲಿ ತಮ್ಮದೇ ಸ್ವಂತಿಕೆ ರೂಢಿಸಿಕೊಂಡ ಕಾರಣಕ್ಕೆ ತೇಜಸ್ವಿ ಅವರು ಮತ್ತಷ್ಟು ಇಷ್ಟವಾಗುತ್ತಾರೆ.
ಸೆಪ್ಟೆಂಬರ್ 8 ರಂದು ಜನಿಸಿದ ತೇಜಸ್ವಿ ಅವರ 80 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ, ಮೇರುಸಾಹಿತಿಯ ಬದುಕು-ಬರಹವನ್ನು ಮೆಲುಕು ಹಾಕುವ, 'ಕನ್ನಡಕ್ಕೊಬ್ಬರೇ ತೇಜಸ್ವಿ' ಎಂಬ ಕಾರ್ಯಕ್ರಮವನ್ನು 'ಮುನ್ನೋಟ' ಬಳಗ ಮಾಡುತ್ತಿದೆ.

ಸೆಪ್ಟೆಂಬರ್ 9, ಶನಿವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಬಸವನಗುಡಿಯ ಸೌತ್ ಅವಿನ್ಯೂ ಕಾಂಪ್ಲೆಕ್ಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಅಧ್ಯಾಪಕರೂ, ವಿಮರ್ಶಕರೂ ಆದ ಎಚ್.ಎಸ್.ಸತ್ಯನಾರಾಯಣ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಶಿಶುನಾಳ ಶರೀಫರ ಸ್ಮರಣೆ
ಅಧ್ಯಾತ್ಮದ ಮೇರುನೀತಿಯನ್ನು ಸುಲಲಿತ ಭಾಷೆಯಲ್ಲಿ ಅರುಹಿ, ಸಾಮಾನ್ಯನಿಗೂ ಅಧ್ಯಾತ್ಮದ ಆಳ ಅರ್ಥವಾಗುವಂತೆ ಮಾಡಿದ ಸಂತ ಶಿಶುನಾಳ ಶರೀಫರ ಸ್ಮರಣೆಯ ಕಾರ್ಯಕ್ರಮವನ್ನೂ ಮುನ್ನೋಟ ಹಮ್ಮಿಕೊಂಡಿದ್ದು, ವಾರಾಂತ್ಯಕ್ಕೆ ಸಾಹಿತ್ಯಾಸಕ್ತರಿಗೆ, ಸಹೃದಯಿಗಳಿಗೆ ಡಬಲ್ ಧಮಾಕಾ ಕೊಡುಗೆ ನೀಡಿದೆ!
'ಶಿಶುನಾಳ ಶರೀಫನೆಂಬ ಕನ್ನಡದ ಸಂತ' ಎಂಬ ಈ ಕಾರ್ಯಕ್ರಮ, ಸೌತ್ ಅವಿನ್ಯೂ ಕಾಂಪ್ಲೆಕ್ಸ್ ನಲ್ಲೇ ಸೆಪ್ಟೆಂಬರ್ 10, ಭಾನುವಾರದಂದು ನಡೆಯಲಿದೆ. ಈ ಕಾರ್ಯಕ್ರಮವನ್ನು ದೂರದರ್ಶನ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಮಹೇಶ್ ಜೋಶಿ ನಡೆಸಿಕೊಡಲಿದ್ದಾರೆ. ಸಾಹಿತ್ಯಾಸಕ್ತರು ಭಾಗವಹಿಸುವಂತೆ ಕೋರಲಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications