Get Updates
Get notified of breaking news, exclusive insights, and must-see stories!

ಸೆ.9-10 ರ ಮಾತುಕತೆ@ಮುನ್ನೋಟದಲ್ಲಿ ತೇಜಸ್ವಿ, ಶಿಶುನಾಳ ಷರೀಫ

ಬೆಂಗಳೂರು, ಸೆಪ್ಟೆಂಬರ್ 4: ಸಾಹಿತ್ಯ, ಫೋಟೋಗ್ರಫಿ, ನಾಟಕ, ಸಿನೆಮಾ, ಕೃಷಿ, ಸಾಮಾಜಿಕ ಚಳವಳಿ, ಕನ್ನಡಪರ ಚಿಂತನೆ ಎಲ್ಲವುಗಳ ಮಿಶ್ರಣವಾದ ಪೂರ್ಣಚಂದ್ರ ತೇಜಸ್ವಿ ಕನ್ನಡ ಕಂಡ ಅತ್ಯದ್ಭುತ ಸಾಹಿತಿ ಎಂಬುದರಲ್ಲಿ ಎರಡು ಮಾತಿಲ್ಲ.
ರಾಷ್ಟ್ರಕವಿ ಕುವೆಂಪು ಅವರ ಮಗನಾದರೂ ಸಾಹಿತ್ಯ ಪ್ರಕಾರದಲ್ಲಿ ತಮ್ಮದೇ ಸ್ವಂತಿಕೆ ರೂಢಿಸಿಕೊಂಡ ಕಾರಣಕ್ಕೆ ತೇಜಸ್ವಿ ಅವರು ಮತ್ತಷ್ಟು ಇಷ್ಟವಾಗುತ್ತಾರೆ.

ಸೆಪ್ಟೆಂಬರ್ 8 ರಂದು ಜನಿಸಿದ ತೇಜಸ್ವಿ ಅವರ 80 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ, ಮೇರುಸಾಹಿತಿಯ ಬದುಕು-ಬರಹವನ್ನು ಮೆಲುಕು ಹಾಕುವ, 'ಕನ್ನಡಕ್ಕೊಬ್ಬರೇ ತೇಜಸ್ವಿ' ಎಂಬ ಕಾರ್ಯಕ್ರಮವನ್ನು 'ಮುನ್ನೋಟ' ಬಳಗ ಮಾಡುತ್ತಿದೆ.

Mathukathe@Munnota: Sep 9th-10th in Bengaluru on Poornachandra Tejaswi and Shishunala Sharif

ಸೆಪ್ಟೆಂಬರ್ 9, ಶನಿವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಬಸವನಗುಡಿಯ ಸೌತ್ ಅವಿನ್ಯೂ ಕಾಂಪ್ಲೆಕ್ಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಅಧ್ಯಾಪಕರೂ, ವಿಮರ್ಶಕರೂ ಆದ ಎಚ್.ಎಸ್.ಸತ್ಯನಾರಾಯಣ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಶಿಶುನಾಳ ಶರೀಫರ ಸ್ಮರಣೆ
ಅಧ್ಯಾತ್ಮದ ಮೇರುನೀತಿಯನ್ನು ಸುಲಲಿತ ಭಾಷೆಯಲ್ಲಿ ಅರುಹಿ, ಸಾಮಾನ್ಯನಿಗೂ ಅಧ್ಯಾತ್ಮದ ಆಳ ಅರ್ಥವಾಗುವಂತೆ ಮಾಡಿದ ಸಂತ ಶಿಶುನಾಳ ಶರೀಫರ ಸ್ಮರಣೆಯ ಕಾರ್ಯಕ್ರಮವನ್ನೂ ಮುನ್ನೋಟ ಹಮ್ಮಿಕೊಂಡಿದ್ದು, ವಾರಾಂತ್ಯಕ್ಕೆ ಸಾಹಿತ್ಯಾಸಕ್ತರಿಗೆ, ಸಹೃದಯಿಗಳಿಗೆ ಡಬಲ್ ಧಮಾಕಾ ಕೊಡುಗೆ ನೀಡಿದೆ!

'ಶಿಶುನಾಳ ಶರೀಫನೆಂಬ ಕನ್ನಡದ ಸಂತ' ಎಂಬ ಈ ಕಾರ್ಯಕ್ರಮ, ಸೌತ್ ಅವಿನ್ಯೂ ಕಾಂಪ್ಲೆಕ್ಸ್ ನಲ್ಲೇ ಸೆಪ್ಟೆಂಬರ್ 10, ಭಾನುವಾರದಂದು ನಡೆಯಲಿದೆ. ಈ ಕಾರ್ಯಕ್ರಮವನ್ನು ದೂರದರ್ಶನ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಮಹೇಶ್ ಜೋಶಿ ನಡೆಸಿಕೊಡಲಿದ್ದಾರೆ. ಸಾಹಿತ್ಯಾಸಕ್ತರು ಭಾಗವಹಿಸುವಂತೆ ಕೋರಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+