ಆತ್ಮರಕ್ಷಣೆಗಾಗಿ ವಿದ್ಯಾರ್ಥಿನಿಯರಿಗೆ ಮಾರ್ಷಲ್ ಆರ್ಟ್ಸ್ ತರಬೇತಿ
ಬೆಂಗಳೂರು, ಅಕ್ಟೋಬರ್ 30: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ 4000ಕ್ಕೂ ಹೆಚ್ಚು ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಸೆಂಟ್ರಲ್ ಕಾಲೇಜಿನಲ್ಲಿ ಹಮ್ಮಿಕೊಂಡಿತ್ತು.
ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯಾ ತಡೆಗೆ ನೂತನ ಕೋರ್ಸ್
ಕನ್ನಡ ಚಿತ್ರನಟಿ ಶ್ರುತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರವೀಣ ರಂಕಾರವರು ಅವರ ತಂಡದಿಂದ ವಿಶೇಷ ಪ್ರದರ್ಶನವನ್ನು ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳ 'ಸುಸೈಡ್ ಪಾಯಿಂಟ್ ಆಗ್ತಿದೆಯೇ ಶಿಕ್ಷಣ ಕಾಶಿ ದಕ್ಷಿಣ ಕನ್ನಡ!?
ಶ್ರುತಿ ಮಾತನಾಡಿ ಮಹಿಳೆಯರು ಇಂತಹ ಸಾಹಸಿ ಕಲೆಗಳನ್ನು ಕಲಿತುಕೊಳ್ಳುವುದರಿಂದ ಸಮಾಜದಲ್ಲಿ ಯಾವುದೇ ಭಯವಿರುವುದಿಲ್ಲ ಹಾಗೂ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಎಂದು ಹೇಳಿದರು
ಕೇರಳದಲ್ಲಿ ಸ್ಕೂಲ್ ಬಸ್ಗೆ ಜಿಪಿಎಸ್ ಕಡ್ಡಾಯ: ಕರ್ನಾಟಕದಲ್ಲಿ ಯಾವಾಗ?
ರಾಜ್ಯ ಕಾರ್ಯದರ್ಶಿ ಹರ್ಷನಾರಾಯಣ ಮಾತನಾಡಿ ಎಬಿವಿಪಿಯ ಈ ಕಾರ್ಯಕ್ರಮ ದೇಶಾದ್ಯಂತ ನಡೆಯುತ್ತಿದ್ದು ಲಕ್ಷಾಂತರ ವಿದ್ಯಾರ್ಥಿನಿಯರಿಗೆ ಇದರಿಂದ ಸ್ಫೂರ್ತಿ ಸಿಗಲಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಸ್ವ-ರಕ್ಷಣೆಯ ವಿವಿಧ ತಂತ್ರಗಳನ್ನು ಹೇಳಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಮೇದಿನಿ ಗರುಡಾಚಾರ್ ಹಾಗೂ ಎಬಿವಿಪಿ ಬೆಂಗಳೂರು ಮಹಾನಗರ ಕಾರ್ಯದರ್ಶಿ ಶ್ರೀ ಸೂರಜ್ ಪಂಡಿತ್, ಮಹಾನಗರ ಅಧ್ಯಕ್ಷರಾದ ಡಾ. ಸತೀಶ ಅವರು, ಬೆಂಗಳೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.