ಸೆಪ್ಟೆಂಬರ್‌ನಲ್ಲಿ ರಾಜ್ಯಕ್ಕೆ ಯುರೋಪಿಯನ್‌ ತಜ್ಞರ ಭೇಟಿ

ಬೆಂಗಳೂರು, ಜೂ.25: ಯುರೋಪಿಯನ್‌ ಒಕ್ಕೂಟ ಅಲ್ಪಾನ್ಸೋ ಮಾವು ಸೇರಿದಂತೆ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಹೇರಿರುವ ನಿಷೇಧ ಪುನರ್‌ ಪರೀಶಿಲನೆಗಾಗಿ ಯುರೋಪ್‌ ರಾಷ್ಟ್ರಗಳ ತಜ್ಞರ ಸಮಿತಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತೋಟಗಾರಿಕಾ ಹಾಗೂ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ರಾಮಚಂದ್ರ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಯುರೋಪಿಯನ್‌ ತಜ್ಞರ ಸಮಿತಿ ಸೆಪ್ಟೆಂಬರ್‍ 2 ರಿಂದ 12ವರೆಗೆ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ರಾಜ್ಯದ ವಿವಿಧ ತಾಲೂಕಿನಲ್ಲಿರುವ ರೈತರನ್ನು ಸಂಪರ್ಕಿಸಿ ಮಾವಿನಹಣ್ಣು ವೀಳ್ಯದೆಲೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು.[ಭಾರತದ ಮಾವಿನ ಹಣ್ಣಿಗೆ ಯುರೋಪಿನಲ್ಲಿ ನಿಷೇಧ]

Mango export
ಮಾಧ್ಯಮಗಳಲ್ಲಿ ಕೀಟನಾಷಕ ಹೆಚ್ಚಾಗಿರುವ ಹಿನ್ನಲೆಯಲ್ಲಿ ಕೃಷಿ ಉತ್ಪನ್ನಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಪ್ರಕಟವಾಗುತ್ತಿದೆ. ಆದರೆ ಗುಣಮಟ್ಟದ ಕೊರತೆ ಮತ್ತು ಕೀಟ ಬಾಧೆ ಕಂಡು ಬಂದಿರುವ ಹಿನ್ನಲೆಯಲ್ಲಿ ಅಲ್ಫಾನ್ಸೋ ಮಾವು, ಹಾಗಲಕಾಯಿ, ಬದನೆ, ವೀಳ್ಯದೆಲೆ, ಕೆಸುವಿನ ಗೆಡ್ಡೆ ಮತ್ತು ಪಡವಲಕಾಯಿ ಮೇಲೆ ನಿಷೇಧ ಹೇರಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.[ಮಾವಿನ ನಂತರ ವೀಳ್ಯದೆಲೆಗೆ ಯರೋಪಿನಲ್ಲಿ ನಿಷೇಧ]

ಯುರೋಪ್‌ ರಾಷ್ಟ್ರಗಳು ಮಾವು ಹಾಗೂ ವೀಳ್ಯದೆಲೆ ರಫ್ತುಗೆ ನಿಷೇಧ ಹೇರಿದ್ದರೂ ಯಾವುದೇ ಪರಿಣಾಮ ಬೀರಿಲ್ಲ. ಶೇ.1ರಷ್ಟು ಅದಾಯ ಕಡಿಮೆಯಾಗಿದೆ ಎಂದು ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದರು.[ಭಾರತದ ಮೆಣಸಿನಕಾಯಿಗೆ ಸೌದಿಯಲ್ಲಿ ನಿಷೇಧ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+