ಬೆಂಗಳೂರಿನ ನೆಲಮಂಗಲ ಫ್ಲೈಓವರ್ನಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು, ಮೇ 13: ನಗರದ ಪೀಣ್ಯ ಸಮೀಪದಲ್ಲಿರುವ ನೆಲಮಂಗಲ ಎಕ್ಸ್ಪ್ರೆಸ್ವೇ ಫ್ಲೈಓರ್ನಿಂದ ಬಿದ್ದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾಮಾಕ್ಷಿ ಪಾಳ್ಯದ 38 ವರ್ಷದ ನರಸಿಂಹ ಮೂರ್ತಿ ಆತ್ಮಹತ್ಯೆ ಮಾಡಿಕೊಂಡವರು.ಸಾಯುವ ಮುನ್ನ ಸಹೋದ್ಯೋಗಿ ಹಾಗೂ ಸ್ನೇಹಿತರ ಬಳಿ ತನ್ನ ಒಂದು ತಿಂಗಳ ಮಗು ಮೃತಪಟ್ಟಿದೆ ಹಾಗಾಗಿ ಊರಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದ.
ಜೊತೆಗೆ ಮಗುವಿನ ಅಂತ್ಯಸಂಸ್ಕಾರಕ್ಕೆ ಹಣ ಬೇಕು ಎಂದು ಇಬ್ಬರು ಸಹೋದ್ಯೋಗಿಗಳ ಬಳಿ 1 ಸಾವಿರ ರೂ ತೆಗೆದುಕೊಂಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಅವರ ಮಗುವಿಗೆ ಏನು ಆಗಿಲ್ಲ ಆರೋಗ್ಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆದರೆ ಬಳಿಕ ಮೂರ್ತಿ ಅವರ ಹೆಂಡತಿಯನ್ನು ಸಂಪರ್ಕಿಸಿದಾಗ ಮಗು ಆರೋಗ್ಯವಾಗಿಗೆ ಜೀವಂತವಾಗಿದೆ ಎಂಬ ವಿಷಯ ತಿಳಿದುಬಂದಿದೆ. ಆದರೆ ಮೂರ್ತಿ ತನ್ನ ಸಹೋದ್ಯೋಗಿಗಳ ಬಳಿ ಯಾಕೆ ಸುಳ್ಳು ಹೇಳಿದ್ದ, ಆತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎನ್ನುವುದರ ಪೀಣ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications