ಮಹಾಬೆಳಗು -ವಚನಗಳ ಧ್ವನಿಸುರುಳಿ ಬಿಡುಗಡೆಗೆ ಆಹ್ವಾನ
ಬೆಂಗಳೂರು, ಡಿ. 03: ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವೆನಿಸಿರುವ ವಚನಗಳ ರಸಧಾತೆಯನ್ನು ಜನರಿಗೆ ತಲುಪಿಸಲು ಗಾಯಕಿ ಶಶಿಕಲಾ ಹಾಗೂ ಪೂರ್ಣಿಮಾ ಸಜ್ಜಾಗಿದ್ದಾರೆ. ಕಲಾಗ್ರಾಮದಲ್ಲಿ ಈ ಇಬ್ಬರು ಪ್ರತಿಭಾವಂತರ ಚೊಚ್ಚಲ ಆಲ್ಬಂ 'ಮಹಾಬೆಳಗು' ಲೋಕಾರ್ಪಣೆಗೊಳ್ಳುತ್ತಿದೆ.
ಕಾರ್ಯಕ್ರಮದ ವಿವರ:
ದಿನಾಂಕ : 5/12/2015
ದಿನ. ಸಮಯ: ಶನಿವಾರ ಸಂಜೆ 5.30ಕ್ಕೆ
ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು
ಹಾಡಿರುವವರು: ಶಶಿಕಲಾ ಮತ್ತು ಪೂರ್ಣಿಮಾ
ಸಂಗೀತ ನಿರ್ದೇಶನ: ಗಣೇಶ್ ದೇಸಾಯಿ

ವಾದ್ಯ ಸಹಕಾರ:
ಕೀಬೋರ್ಡ್: ಸಂಗೀತ್ ಥಾಮಸ್
ತಬಲ: ಮಧುಸೂದನ್
ಕೊಳಲು: ಸಂದೀಪ್ ವಸಿಷ್ಠ
ಸಿತಾರ್: ಶೃತಿ ಕಾಮತ್
ವಿಶೇಷ ಲಯವಾದ್ಯ: ಜೆರಾಲ್ಡ್
ಸಿಂಫನಿ ಸ್ಟುಡಿಯೋ: ಶಕ್ತಿವೇಲ್
ಛಾಯಾಗ್ರಹಣ: ಸಂದೀಪ ರವಿಕುಮಾರ್
ಶೀರ್ಷಿಕೆ: ವಿ ನಾಗೇಂದ್ರ ಪ್ರಸಾದ್
ಗುರು ಸಾನಿಧ್ಯ: ಚರಮೂರ್ತಿ ಶಿವರುದ್ರಸ್ವಾಮಿ, ಬೇಲಿಮಠ, ಬೆಂಗಳೂರು
* ಶಿವರುದ್ರ ಸ್ವಾಮಿ, ವಿರಕ್ತಮಠ, ಚನ್ನಪಟ್ಟಣ
ಉಪಸ್ಥಿತಿ: ಡಾ. ಸಿ ಸೋಮಶೇಖರ್, ಅಧ್ಯಕ್ಷರು, ಅಖಿಲಭಾರತ ಶರಣ ಸಾಹಿತ್ಯ ಪರಿಷತ್
* ಪ್ರವೀಣ್ ಡಿ ರಾವ್, ಸಂಗೀತ ನಿರ್ದೇಶಕರು
* ವೈಕೆ ಮುದ್ದುಕೃಷ್ಣ, ಅಧ್ಯಕ್ಷರು, ಸುಗಮಸಂಗೀತ ಪರಿಷತ್
* ನಾಗೇಂದ್ರಪ್ರಸಾದ್, ಚಿತ್ರಸಾಹಿತಿ, ನಿರ್ದೇಶಕರು

ಗಾಯಕಿ ಶಶಿಕಲಾ: ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರಿಂದ ಶಾಸ್ತ್ರೀಯ ಸಂಗೀತ, ಪಂಡಿತ್ ವಿಎಂ ನಾಗರಾಜ್ ಅವರಿಂದ ಹಿಂದೂಸ್ತಾನಿ ಗಾಯನ, ಪ್ರವೀಣ್ ಡಿ ರಾವ್, ಬಿಕೆ ಸುಮಿತ್ರಾ ಹಾಗೂ ರವಿ ಮೂರೂರು ಅವರಿಂದ ಸುಗುಮ ಸಂಗೀತ ಕಲಿಕೆ ಹಾಗೂ ಅಭ್ಯಾಸ ಮಾಡಿದ್ದಾರೆ.
ಎಂಎಸ್ ಐಎಲ್ ನಿತ್ಯೋತ್ಸವ, ಈಟಿವಿಯ ಎದೆ ತುಂಬಿ ಹಾಡುವೆನು, ಸುವರ್ಣ ಟಿವಿಯಲ್ಲಿ ಹಳೆ ಬೇರು ಹೊಸ ತೇರು ಕಾರ್ಯಕ್ರಮದಲ್ಲಿ ಜೀ ಕನ್ನಡ ಟಿವಿಯಲ್ಲಿ ಕರುನಾಡ ಸಂಭ್ರಮ, ಸ್ವರ ಸ್ವಾದ, ಕಸ್ತೂರಿ ಟಿವಿಯ ಸವಿ ಸವಿ ನೆನಪು, ಡಿಡಿ ಚಂದನದಲ್ಲಿ ಮಧುರ ಮಧುರವೀ ಮಂಜುಳ ಗಾನ, ಉದಯ ಟಿವಿಯಲ್ಲಿ ದಿವ್ಯ ದರ್ಶನ, ಶ್ರೀಶಂಕರ ಟಿವಿಯಲ್ಲಿ ದೀಪವಾಳಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಬೆಂಗಳೂರು ಹಬ್ಬ, ಮೈಸೂರು ದಸರಾ, ಹಂಪಿ ಉತ್ಸವ, ಕೃಷಿ ಮೇಳ, ಕೀನ್ಯಾದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ, ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮಹಾ ಬೆಳಗು ಆಲ್ಬಂಗೆ ಟ್ರೈಲರ್ ಇಲ್ಲಿದೆ
ಸಂಗೀತಗಾರ ವಿ ಮನೋಹರ್ ಅವರಿಂದ ಶುಭ ಹಾರೈಕೆ
(ಒನ್ ಇಂಡಿಯಾ ಸುದ್ದಿ)












Click it and Unblock the Notifications