ಮಗ ಸಿದ್ಧಾರ್ಥ್ ಅಕ್ರಮ ನೇಮಕ: ಇಸ್ರೋ ಅಧ್ಯಕ್ಷ ಶಿವನ್ ವಿರುದ್ಧ ಗಂಭೀರ ಆರೋಪ
ಬೆಂಗಳೂರು, ಫೆಬ್ರವರಿ 13: ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ (ಡಿಒಎಸ್) ಕಾರ್ಯದರ್ಶಿ ಡಾ. ಕೆ. ಶಿವನ್ ಅವರ ವಿರುದ್ಧ ಕೇಂದ್ರ ಜಾಗೃತಾ ಆಯೋಗವು (ಸಿವಿಸಿ) ದೂರು ದಾಖಲಿಸಿಕೊಂಡಿದೆ. ತಿರುವನಂತಪುರಂನ ವಲೈಮಾಲಾದಲ್ಲಿರುವ ಇಸ್ರೋದ ಲಿಕ್ವಿಡ್ ಪ್ರೊಪುಲ್ಷನ್ ಸಿಸ್ಟಂ ಸೆಂಟರ್ಗೆ (ಎಲ್ಪಿಎಸ್ಸಿ) ನಿಯಮಾವಳಿಗಳನ್ನು ಉಲ್ಲಂಘಿಸಿ ತಮ್ಮ ಮಗನನ್ನು ನೇಮಕಾತಿ ಮಾಡುವಲ್ಲಿ ಶಿವನ್ ಅವರು ಅಕ್ರಮಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
'ಡಾ. ಶಿವನ್ ಅವರ ಮಗ ಸಿದ್ಧಾರ್ಥ್ ಎಸ್. ನೇಮಕಾತಿಯು ಹಿತಾಸಕ್ತಿ ಸಂಘರ್ಷದ ವಿಚಾರವಷ್ಟೇ ಅಲ್ಲ, ಡಿಒಎಸ್ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಹಾಗೂ ಅವರ ಮಗನ ಲಾಭಕ್ಕಾಗಿ ಪಕ್ಷಪಾತಿ ಹಾಗೂ ಸಂಚು ನಡೆಸಿದ ಪ್ರಕರಣವೂ ಹೌದು' ಎಂದು ಎಲ್ಪಿಎಸ್ಸಿ ನಿರ್ದೇಶಕ ಡಾ. ವಿ. ನಾರಾಯಣನ್ ಜನವರಿ 25ರಂದು ದೂರು ನೀಡಿದ್ದಾರೆ.
ಡಾ. ನಾರಾಯಣನ್ ಅವರು ವರ್ಗಾವಣೆಯಾಗುವ ನಿರೀಕ್ಷೆಯಿದ್ದು, ಅದಕ್ಕೂ ಮೊದಲೇ ತರಾತುರಿಯಲ್ಲಿ ಎಲ್ಪಿಎಸ್ಸಿಗೆ ಸಿದ್ಧಾರ್ಥ್ ಅವರನ್ನು ನೇಮಿಸಲಾಗಿದೆ. ರಾಕೆಟ್ ಪ್ರೊಪಲ್ಷನ್ ಪರಿಣತರಾದ ಡಾ. ನಾರಾಯಣನ್ ಅವರು 1984ರಲ್ಲಿ ಇಸ್ರೋಗೆ ಸೇರ್ಪಡೆಯಾಗಿದ್ದರು. 2018ರ ಜನವರಿಯಿಂದ ಎಲ್ಪಿಎಸ್ಸಿಯ ನಿರ್ದೇಶಕರಾಗಿದ್ದಾರೆ. ಮುಂದೆ ಓದಿ.

ಕೇವಲ ಸಂದರ್ಶನ ಮಾಡಿ ನೇಮಕ
ಸಿದ್ಧಾರ್ಥ್ ಅವರ ನೇಮಕಾತಿಯನ್ನು ಸಾಮಾನ್ಯವಾಗಿ ನಡೆಸಲಾಗುವ ಪ್ರಕ್ರಿಯೆಯಂತೆ ಇಸ್ರೋದ ಕೇಂದ್ರೀಯ ನೇಮಕಾತಿ ಮಂಡಳಿಯ ಮೂಲಕ ನಡೆಸದೆ ಆತುರವಾಗಿ ಮಾಡಲಾಗಿದೆ. ಪರಿಶೀಲನೆ, ಲಿಖಿತ ಪರೀಕ್ಷ ಮತ್ತು ಸಂದರ್ಶನಗಳನ್ನು ನೇಮಕಾತಿ ಮಂಡಳಿ ನಡೆಸುತ್ತದೆ. ಆದರೆ ಸಿದ್ಧಾರ್ಥ್ ಅವರನ್ನು ಕೇವಲ ಸಂದರ್ಶನ ಮಾಡಿ ನೇಮಿಸಲಾಗಿದೆ ಎಂದು ಆರೋಪಿಸಲಾಗಿದೆ.

ಸೈಂಟಿಸ್ಟ್ ಎಂಜಿನಿಯರ್ ಹುದ್ದೆಗಳು
ಬೆಂಗಳೂರು, ತಿರುವನಂತಪುರಂ ಮತ್ತು ವಲೈಮಾಲಾದಲ್ಲಿರುವ ಎಲ್ಪಿಎಸ್ಸಿ ಘಟಕಗಳಿಗೆ 738 ಸೈಂಟಿಸ್ಟ್ ಎಂಜಿನಿಯರ್ 'ಎಸ್ಸಿ' ಹುದ್ದೆ ನೇಮಕಾತಿಗೆ ಬಾಹ್ಯಾಕಾಶ ಇಲಾಖೆ, ಇಸ್ರೋ ಮತ್ತು ಎಲ್ಪಿಎಸ್ಸಿ ಜಾಹೀರಾತು ಪ್ರಕಟಿಸಿದ್ದವು.

ಪ್ರಕ್ರಿಯೆ ವಿವರ
ಆಸಕ್ತ ಅಭ್ಯರ್ಥಿಗಳು ಎಲ್ಪಿಎಸ್ಸಿ ವೆಬ್ಸೈಟ್ ಮೂಲಕ ಅರ್ಜಿ ಭರ್ತಿ ಮಾಡಿ ಕಳಿಸಬೇಕಿತ್ತು. ಇದಕ್ಕೆ ಬಿ.ಇ/ಬಿಟೆಕ್ ಅಥವಾ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ ಸಮಾನ ಪದವಿ+ಎಂಇ/ಎಂಟೆಕ್ ಅಥವಾ ವಿಎಲ್ಎಸ್ಐ ಮತ್ತು ಎಂಬೆಡೆಡ್ ಸಿಸ್ಟಂನಲ್ಲಿ ಪದವಿ ಪಡೆಯಬೇಕು ಎಂದು ಹೇಳಲಾಗಿತ್ತು.

ಎಂಟೆಕ್ ಪದವಿ ಬೇಕಿಲ್ಲ
ಆದರೆ ಎಲ್ಪಿಎಸ್ಸಿಯ ನೇಮಕಾತಿಗೆ ವಿಎಲ್ಎಸ್ಐನಲ್ಲಿ ಎಂಟೆಕ್ ಪದವಿಯ ಅಗತ್ಯವಿಲ್ಲ. ಇದುವರೆಗೂ 'ಎಸ್ಸಿ' ಮಟ್ಟದ ಸೈಂಟಿಸ್ಟ್ ಎಂಜಿನಿಯರಿಂಗ್ ಹುದ್ದೆಗೆ ಎಲ್ಪಿಎಸ್ಸಿಯಲ್ಲಿ ಈ ವಿದ್ಯಾರ್ಹತೆಯಡಿ ನೇಮಕಾತಿ ಮಾಡಿಕೊಂಡಿಲ್ಲ. ಜಾಹೀರಾತಿನಲ್ಲಿ ನೀಡಿರುವ ವಿದ್ಯಾರ್ಹತೆಯು ಎಂಟೆಕ್ ಮಾಡಿರುವ ಸಿದ್ಧಾರ್ಥ್ ಅವರಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗಿದೆ. ಒಬ್ಬ ನಿರ್ದಿಷ್ಟ ಅಭ್ಯರ್ಥಿಗಾಗಿಯೇ ಈ ಜಾಹೀರಾತನ್ನು ಸಿದ್ಧಪಡಿಸಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಅವರು ಆರೋಪಿಸಿದ್ದಾರೆ.
Recommended Video

ಪ್ರಕ್ರಿಯೆ ಪಾಲಿಸಲಾಗಿದೆ
ಎಲ್ಪಿಎಸ್ಸಿ ಪ್ರಕಟಿಸಿದ ಮೆರಿಟ್ ಪಟ್ಟಿಯಲ್ಲಿ ಸಿದ್ಧಾರ್ಥ್ ಎರಡನೆಯ ಶ್ರೇಯಾಂಕ ಪಡೆದಿದ್ದರು. ಈ ಪಟ್ಟಿ ಜನವರಿ 13ರವರೆಗೂ ಚಾಲ್ತಿಯಲ್ಲಿತ್ತು. ತಮ್ಮ ವಿರುದ್ಧದ ಆರೋಪಕ್ಕೆ ಡಾ. ಶಿವನ್ ಪ್ರತಿಕ್ರಿಯೆ ನೀಡಿಲ್ಲ. ಎಂಟೆಕ್ ಪದವೀಧರ ಸಿದ್ಧಾರ್ಥ್ ಅವರ ಅರ್ಜಿಯನ್ನು ಸೂಕ್ತ ಸಮಿತಿ ಪರಿಶೀಲಿಸಿದೆ. ಈ ನೇಮಕಾತಿಯಲ್ಲಿ ಎಲ್ಲ ಪ್ರಕ್ರಿಯೆಗಳನ್ನೂ ಪಾಲಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷರ ಕಚೇರಿ ತಿಳಿಸಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications