ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವನಗುಡಿಯಲ್ಲಿ ಮತಚಲಾಯಿಸಿದ ತೇಜಸ್ವಿನಿ ಅನಂತಕುಮಾರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ಲೋಕಸಭೆ ಚುನಾವಣೆಗೆ ಗುರುವಾರ ಬೆಂಗಳೂರಿನ ಬಸವನಗುಡಿಯಲ್ಲಿ ಮತಚಲಾಯಿಸಿದರು. ಅವರೊಟ್ಟಿಗೆ ಕುಟುಂಬಸ್ಥರೂ ಜೊತೆಯಾಗಿದ್ದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅವರು ಮತದಾನದ ಹಕ್ಕು ಪಡೆದಿದ್ದು, ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಸವನಗುಡಿಯ ವಾಸವಿ ವಿದ್ಯಾ ನಿಕೇತನ ಶಾಲೆಯ ಮತಗಟ್ಟೆಯಲ್ಲಿ ಅವರು ಮತಚಲಾಯಿಸಿದರು.

ಲೋಕಸಭೆ ಚುನಾವಣೆ LIVE:ಪ.ಬಂಗಾಳದಲ್ಲಿ ಚುನಾವಣೆ ಗಲಭೆ, ಅಶ್ರುವಾಯು ಪ್ರಯೋಗಲೋಕಸಭೆ ಚುನಾವಣೆ LIVE:ಪ.ಬಂಗಾಳದಲ್ಲಿ ಚುನಾವಣೆ ಗಲಭೆ, ಅಶ್ರುವಾಯು ಪ್ರಯೋಗ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅವರ ಪತಿ ಕೇಂದ್ರದ ಮಾಜಿ ಸಚಿವ ದಿ.ಅನಂತ ಕುಮಾರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ ಆರು ಬಾರ ಗೆಲುವು ಸಾಧಿಸಿದ್ದರು. ಅವರು ಅನಾರೋಗ್ಯದ ಕಾರಣ ಅಸುನೀಗಿದ್ದರಿಂದ ಈ ಬಾರಿ ತೇಜಸ್ವಿನಿ ಅವರನ್ನೇ ಈ ಕ್ಷೇತ್ರದಿಂದ ಚುನಾವಣೆ ಕಣಕ್ಕಿಳಿಸಬೇಕೆಂದು ಮೊದಲಿಗೆ ಬಿಜೆಪಿ ವರಿಷ್ಟರು ನಿರ್ಧರಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ತೇಜಸ್ವಿನಿ ಅವರ ಬದಲು ಬಿಜೆಪಿ ಯುವನಾಯಕ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿತು.

Lok Sabha Elections 2019: Tejaswini Ananth Kumar casts her vote

ಕರ್ನಾಟಕ ಲೋಕ ಸಮರ LIVE: ಮಧುವಣಗಿತ್ತಿಯರ ಮತ ಸಂಭ್ರಮ ಕರ್ನಾಟಕ ಲೋಕ ಸಮರ LIVE: ಮಧುವಣಗಿತ್ತಿಯರ ಮತ ಸಂಭ್ರಮ

ಕಾಂಗ್ರೆಸ್ ನಿಂದ ಈ ಕ್ಷೇತ್ರದಲ್ಲಿ ಬಿಕೆ ಹರಿಪ್ರಸಾದ್ ಸ್ಪರ್ಧಿಸಿದ್ದಾರೆ. ಗುರುವಾರ ಈ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದ್ದು, ಮೇ 23 ರಂಡು ಫಲಿತಾಂಶ ಹೊರಬೀಳಲಿದೆ.

English summary
State BJP Vice President Tejaswini Ananth Kumar casts her vote for Lok Sabha Elections 2019 at the polling station in Sri Vasavi Vidya Niketan in Bengaluru's Basavanagudi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X