ರಮೇಶ್ ಜಾರಕಿಹೊಳಿ ಒಂದೆರಡು ಏಟು ಹೊಡೆಯಲಿ ಪರವಾಗಿಲ್ಲ: ಡಿಕೆಶಿ!
Recommended Video
ರಮೇಶ್ ಜಾರಕಿಹೊಳಿಯನ್ನ ಲೇವಡಿ ಮಾಡಿದ ಡಿ ಕೆ ಶಿವಕುಮಾರ್
ಬೆಂಗಳೂರು, ಏಪ್ರಿಲ್ 25: "ರಮೇಶ್ ಜಾರಕಿಹೊಳಿ ಅವರಿಗೆ ನಾನು ಸರಿಸಮ ವ್ಯಕ್ತಿ ಅಲ್ಲ, ಅವರು ದೊಡ್ಡವರು. ನನಗೆ ಒಂದೆರಡು ಏಟು ಹೊಡೆಯಲಿ, ಪರವಾಗಿಲ್ಲ" ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
"ನಮ್ಮ ಜೊತೆ ಸಂಧಾನ ನಡೆಸೋದಕ್ಕೆ ಡಿಕೆ ಶಿವಕುಮಾರ್ ಯಾರು? ಅಗತ್ಯವಿದ್ದರೆ ನಾನು ರಾಹುಲ್ ಗಾಂಧಿ ಅವರ ಬಳಿಯೇ ಹೋಗುತ್ತೇನೆ. ಅವರೇ ನನ್ನ ನಾಯಕ" ಎಂದ ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, 'ರಮೇಶ್, ನನಗೆ ಎರಡು ಏಟು ಹೊಡೆದುಬಿಡಲಿ' ಎಂದು ವ್ಯಂಗ್ಯವಾಗಿ ಹೇಳಿದರು.

ಸಹೋದರರಾದ ಸಚಿವ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದು, ಅದನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ತಾವು ಸಿದ್ದ ಎಂದು ಡಿಕೆಶಿ ಹೇಳಿದ್ದರು. ಡಿಕೆಶಿ ಆಫರ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ರಮೇಶ್ ಜಾರಕಿಹೊಳಿ, ಮಧ್ಯಸ್ಥಿಕೆ ವಹಿಸೋಕೆ ಡೀಕೆಶಿ ಯಾರು, ಆತನ ನಮ್ಮ ಲೆವಲ್ ನವನಲ್ಲ ಎಂದು ಏಕವಚನದಲ್ಲೇ ಹರಿಹಾಯ್ದಿದ್ದರು.












Click it and Unblock the Notifications