Get Updates
Get notified of breaking news, exclusive insights, and must-see stories!

ಜೂ. 1ರಿಂದ ಬೆಂಗಳೂರಲ್ಲಿ ಕುಮಾರಣ್ಣ ಅಭಿಯಾನ

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಸಾಧನೆಗಳನ್ನು ಜನರ ಮುಂದಿಡಲು ಜೂನ್ 1ರಿಂದ ಹೊಸ ಬಗೆಯ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ.

ಬೆಂಗಳೂರು, ಮೇ 30: ಜಾತ್ಯಾತೀತ ಜನತಾದಳ (ಜೆಡಿಎಸ್) ವತಿಯಿಂದ ಹೊಸತೊಂದು ಅಭಿಯಾನಕ್ಕೆ ಜೂನ್ 1ರಿಂದ ಚಾಲನೆ ನೀಡಲಾಗುತ್ತಿದೆ. ಅಂದು, ಮೆಜೆಸ್ಟಿಕ್ ನಲ್ಲಿರುವ ಅಣ್ಣಮ್ಮ ದೇಗುಲದಲ್ಲಿ ಪೂಜೆ ನೆರವೇರಿಸಿದ ನಂತರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರು, ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳನ್ನು ಮತದಾರರಿಗೆ ಮತ್ತೆ ನೆನಪು ಮಾಡಿಕೊಡುವ ಪ್ರಯತ್ನ ಈ ಅಭಿಯಾನದ ಉದ್ದೇಶ.

Kumaraswamy inaugurates new campaign of JDS on June 1st in Bengaluru

ಈ ಹಿನ್ನೆಲೆಯಲ್ಲಿ, ಸುಮಾರು 15 ದಿನಗಳ ಕಾಲ ಸತತವಾಗಿ ನಗರದ ನಾನಾ ಪ್ರಾಂತ್ಯಗಳಿಗೆ ಭೇಟಿ ನೀಡುವ ಜೆಡಿಎಸ್ ಕಾರ್ಯಕರ್ತರು, ಕುಮಾರ ಸ್ವಾಮಿ ಸರ್ಕಾರದ ಸಾಧನೆಗಳನ್ನು ಸಾರಲಿದ್ದಾರೆ. ಕೆಲವಾರು ಪ್ರಾಂತ್ಯಗಳಲ್ಲಿ ಜರುಗುವ ಈ ಅಭಿಯಾನದಲ್ಲಿ ಖುದ್ದು ಕುಮಾರಸ್ವಾಮಿಯವರೇ ಪಾಲ್ಗೊಂಡು ಮನೆ ಮನೆಗೂ ತೆರಳಿ ತಮ್ಮ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+