ಎಂ ಆಡಳಿತ ಪರಿಣಾಮ, ಕೆಎಸ್ಆರ್ಟಿಸಿ ಆನ್ಲೈನ್ ಬುಕಿಂಗ್ ಸ್ಲೋ
ಬೆಂಗಳೂರು, ಡಿ. 30: ರಾಜ್ಯ ಸರ್ಕಾರ ಈಚೆಗಷ್ಟೇ ಜಾರಿಗೆ ತಂದಿರುವ ಎಂ ಆಡಳಿತ ಪದ್ಧತಿಯು ಜನರನ್ನು ತಲುಪಿದೆ. ಆದರೆ, ಸರ್ಕಾರಿ ಸ್ವಾಮಿತ್ವದ ಸಂಸ್ಥೆಗಳು ಅಗತ್ಯ ಪೂರ್ವತಯಾರಿ ಮಾಡಿಕೊಳ್ಳದ ಕಾರಣ ಸರ್ವರ್ ಸ್ಲೋ ಸಮಸ್ಯೆಯೂ ಎದುರಾಗುತ್ತಿದೆ.
ಎಂ ಆಡಳಿತದಡಿ ಬಿಡುಗಡೆ ಮಾಡಿದ ಆಪ್ ಬಳಸಿಕೊಂಡು ಮೊಬೈಲ್ ಮೂಲಕ ಬಸ್ ಟಿಕೆಟ್ ಕಾಯ್ದಿರಿಸಲು ಸಾವಿರಾರು ಜನ ಒಮ್ಮೆಲೇ ಯತ್ನಿಸಿದ ಕಾರಣ ಕೆಎಸ್ಆರ್ಟಿಸಿ ಆನ್ಲೈನ್ ಟಿಕೆಟ್ ಬುಕಿಂಗ್ ವೆಬ್ಸೈಟ್ ಸರ್ವರ್ ನಿಧಾನಗೊಂಡಿದೆ.
ಈ ಕುರಿತು ಕೆಎಸ್ಆರ್ಟಿಸಿ ಫ್ರಾಂಚೈಸಿ ಸಂಘದ ಅಧ್ಯಕ್ಷ ಖಾನ್ ಪಟೇಲ್ ಪ್ರತಿಕ್ರಿಯಿಸಿದ್ದು, "ಡಿ. 19ರಿಂದಲೂ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಸುಮಾರು ಐದು ದಿನಗಳಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಈ ಕುರಿತು ಕೆಎಸ್ಆರ್ಟಿಸಿ ಸಂಸ್ಥೆಯ ಗಮನಕ್ಕೆ ತಂದಿದ್ದೇವೆ" ಎಂದು ತಿಳಿಸಿದ್ದಾರೆ. [ಎಂ ಆಡಳಿತ ಎಂದರೇನು?]

"ಮೊದಲು ಒಂದು ಟಿಕೆಟ್ ಬುಕ್ ಮಾಡಲು ಒಂದು ನಿಮಿಷ ಸಾಕಾಗುತ್ತಿತ್ತು. ಆದರೆ, ಈಗ ಸುಮಾರು ಅರ್ಧಗಂಟೆ ಕಾಲಾವಕಾಶ ಬೇಕಾಗುತ್ತಿದೆ. ಈ ಕಾರಣದಿಂದ ಕಾಯಲು ತಯಾರಿಲ್ಲದ ಅನೇಕ ಗ್ರಾಹಕರು ವಾಪಸ್ ಹೋಗಿದ್ದಾರೆ. ಆದ್ದರಿಂದ ಕೆಎಸ್ಆರ್ಟಿಸಿ ಟಿಕೆಟ್ ಮಾರಾಟ ಶೇ. 50ರಷ್ಟು ಕಡಿಮೆಯಾಗಿದೆ" ಎಂದು ಇನ್ನೋರ್ವ ಪ್ರಾಂಚೈಸಿ ಹೇಳಿದ್ದಾರೆ.
ಕೆಎಸ್ಆರ್ಟಿಸಿ ಪ್ರತಿಕ್ರಿಯೆ : ಕೆಎಸ್ಆರ್ಟಿಸಿ ಮುಖ್ಯ ವ್ಯವಸ್ಥಾಪಕ (ಮಾರುಕಟ್ಟೆ) ಉಮೇಶ ಬಾಬು ಪ್ರತಿಕ್ರಿಯಿಸಿ, "ಸರ್ವರ್ ನಿಧಾನಗೊಳ್ಳಲು ತಾಂತ್ರಿಕ ಹಾಗೂ ತಾಂತ್ರಿಕವಲ್ಲದ ಎರಡೂ ಕಾರಣಗಳಿವೆ. ಸಂಸ್ಥೆಯು ಡಿ. 16ರಂದೇ ಸರ್ವರ್ ಅಪ್ಗ್ರೇಡ್ ಮಾಡಿದೆ. ಆದರೆ, ಎಂ ಆಡಳಿತದ ಪರಿಣಾಮ ಅನೇಕರು ಮೊಬೈಲ್ ಮೂಲಕ ಕೆಎಸ್ಆರ್ಟಿಸಿ ವೆಬ್ಸೈಟ್ಗೆ ಭೇಟಿ ನೀಡಿದ್ದಾರೆ. ಇದು ಸರ್ವರ್ ನಿಧಾನಗೊಳ್ಳಲು ಮುಖ್ಯ ಕಾರಣ" ಎಂದು ತಿಳಿಸಿದ್ದಾರೆ. [ಸೇವೆ ಕನ್ನಡದಲ್ಲಿದ್ರೆ ಎಂ ಆಡಳಿತ ಸ್ವಾಗತಾರ್ಹ]
ದಿನಕ್ಕೆ 50 ಸಾವಿರ ಭೇಟಿ ಸಾಧ್ಯ : "ಈ ಮೊದಲು ಕೆಎಸ್ಆರ್ಟಿಸಿ ಸರ್ವರ್ ಸಾಮರ್ಥ್ಯ ಒಂದು ದಿನಕ್ಕೆ ಮೂರು ಸಾವಿರ ಜನರ ಭೇಟಿಗೆ ಮಾತ್ರ ಅವಕಾಶ ನೀಡುತ್ತಿತ್ತು. ಈಗ ಸರ್ವರ್ ಅಪ್ಗ್ರೇಡ್ ಆಗಿದ್ದು, 50 ಸಾವಿರ ಜನ ಒಮ್ಮೆಲೇ ವೆಬ್ಸೈಟ್ಗೆ ಭೇಟಿ ನೀಡಬಹುದು. ಈಗ ಪ್ರತಿದಿನ ಸುಮಾರು 2 ಕೋಟಿ ರೂ. ಆದಾಯ ಬರುತ್ತಿದೆ. ಇನ್ನು ಮುಂದೆ ಸರ್ವರ್ ಸಮಸ್ಯೆ ಕಾಡುವುದಿಲ್ಲ" ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ












Click it and Unblock the Notifications