Get Updates
Get notified of breaking news, exclusive insights, and must-see stories!

ಕೆಆರ್‌ ಪುರಂ ವೈಟ್‌ಫೀಲ್ಡ್‌ ಮೆಟ್ರೋ: ಸಾವಿರಾರು ಜನರಿಂದ ಪ್ರಯಾಣ

ಬೆಂಗಳೂರು, ಮಾರ್ಚ್‌ 27: ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ ಒಂದು ದಿನದ ನಂತರ ವೈಟ್‌ಫೀಲ್ಡ್ ಕೆಆರ್ ಪುರ ಮೆಟ್ರೋ ಮಾರ್ಗದಲ್ಲಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಸಾವಿರಾರು ಸಂಚಾರ ಆರಂಭಿಸಿದರು.

ಐಟಿ ಕಾರಿಡಾರ್ ಅನ್ನು ಆಸೆಗಣ್ಣಿನಿಂದ ವೀಕ್ಷಿಸಲು ನಾಗರಿಕರು ಬಹುತೇಕ ಮಕ್ಕಳಂತಹ ಉತ್ಸಾಹದಿಂದ ನಿಲ್ದಾಣಗಳಲ್ಲಿ ನೆರೆದಿದ್ದರು. ಎತ್ತರದ ಕಟ್ಟಡಗಳು ಮತ್ತು ಕಚೇರಿಗಳ ನಡುವೆ ಸುಂದರವಾದ ಟಬೆಬುಯಾ ಗುಲಾಬಿ ಹೂವುಗಳನ್ನು ರೈಲಿನಲ್ಲಿ ಸಂಚರಿಸುವಾಗ ಪ್ರಯಾಣಿಕರು ಉತ್ಸಾಹದಿಂದ ಚಿತ್ರಗಳು ಮತ್ತು ವೀಡಿಯೊಗಳನ್ನು ಮಾಡಿದರು. ನಾಮಫಲಕಗಳನ್ನು ಅಲಂಕರಿಸುವಂತೆ ಹೂವಿನ ಗಿಡ ಮರಗಳು ಅಲಂಕಾರಗಳೊಂದಿಗೆ ನಿಲ್ದಾಣಗಳು ಸ್ವಚ್ಛಂದವಾಗಿ ಕಂಡವು ಎಂದು ಡಿಎಚ್‌ ವರದಿ ಮಾಡಿದೆ.

KR Puram Whitefield Metro: thousands of people Traveled first day

ಹೂಡಿ ನಿವಾಸಿ ಬಿ ಕೆ ಮಿಶ್ರಾ ಅವರು ತಮ್ಮ ಮೊಮ್ಮಗನೊಂದಿಗೆ ಮೆಟ್ರೊ ರೈಲು ಹತ್ತಿ ಕಚೇರಿಗಳು ಮತ್ತು ಅನೇಕ ಹೂವಿನ ಮರಗಳನ್ನು ಮೆಟ್ರೋ ರೈಲಿನಿಂದ ವೀಕ್ಷಿಸಿದರು. ಈ ಮೆಟ್ರೋ ಮಾರ್ಗವು ಈ ಪ್ರದೇಶಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ನಮಗೆಲ್ಲರಿಗೂ ವರದಾನವಾಗಿದೆ. ಏಕೆಂದರೆ ಇದು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ಇಬ್ಬರು ಅಣ್ಣತಮ್ಮಂದಿರು ಮೆಟ್ರೋ ರೈಲಿನಲ್ಲಿ ಸಂಚರಿಸಿ ಸಂತೋಷಪಟ್ಟರು. ವೈಟ್‌ಫೀಲ್ಡ್‌ ಮೆಟ್ರೋ ನಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತದೆ ಎಂದು ಒಬ್ಬರು ಹೇಳಿದರೆ, ಮೆಟ್ರೋದಿಂದ ಮೈಸೂರು ರಸ್ತೆಗೆ ನನ್ನ ದೈನಂದಿನ ಪ್ರಯಾಣವನ್ನು ಸ್ವಲ್ಪ ಸುಲಭಗೊಳಿಸುತ್ತದೆ ಎಂದು ಮತ್ತೊಬ್ಬರು ಹೇಳಿದರು. ಐಟಿಪಿಎಲ್‌ನ ಖಾಸಗಿ ಸಂಸ್ಥೆಯ ಉದ್ಯೋಗಿ ಆಯುಷ್ ಮಾತನಾಡಿ, ಬಹಳ ಸಮಯದ ನಂತರ ಮೆಟ್ರೋ ಮಾರ್ಗ ತೆರೆದಿದ್ದು, ಈ ದಿನ ಪ್ರಯಾಣಿಸಲು ತುಂಬಾ ಉತ್ಸುಕನಾಗಿದ್ದೇನೆ. ನನ್ನ ಕೆಲಸದ ಸ್ಥಳವು ಪಟ್ಟಂದೂರು ಅಗ್ರಹಾರದ ಸಮೀಪದಲ್ಲಿದೆ. ಈ ಮೆಟ್ರೋ ಮಾರ್ಗ 2017 ರಿಂದ ನಿರ್ಮಾಣವಾಗುತ್ತಿತ್ತು. ಈಗ ಅಂತಿಮವಾಗಿ ಈ ಮೆಟ್ರೋ ರೈಲಿನಲ್ಲಿ ಸವಾರಿ ಮಾಡಲು ಸಾಧ್ಯವಾಗುತ್ತಿರುವುದಕ್ಕೆ ರೋಮಾಂಚನಕಾರಿಯಾಗಿದೆ ಎಂದು ಅವರು ಹೇಳಿದರು.

ಆಯುಷ್ ಒಆರ್‌ಆರ್‌ನಿಂದ ಏರ್‌ಪೋರ್ಟ್ ಮಾರ್ಗ (ಬ್ಲೂ ಲೈನ್) ತೆರೆಯುವಿಕೆಯನ್ನು ಎದುರು ನೋಡುತ್ತಿದ್ದೇನೆ. ಒಮ್ಮೆ ಆ ಮಾರ್ಗ ತೆರೆದರೆ ಜನರು ನಗರದ ಈ ಭಾಗಗಳಿಗೆ ಮತ್ತು ಅಲ್ಲಿಂದ ಹೇಗೆ ಪ್ರಯಾಣಿಸುವ ವಿಧಾನವನ್ನೇ ಇದು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಇದರಿಂದ ಖಾಸಗಿ ವಾಹನಗಳ ಮೇಲಿನ ಅವಲಂಬನೆ ಮತ್ತಷ್ಟು ಕಡಿಮೆಯಾಗಲಿದೆ ಎಂದರು.

KR Puram Whitefield Metro: thousands of people Traveled first day

ಉದ್ಯಮಿ ವಿನಯ್ ಶಿಂಧೆ ಅವರು ಐಟಿ ಪಾರ್ಕ್‌ಗಳನ್ನು ಸಂಪರ್ಕಿಸುವ ವಿಧಾನವು ಕನಿಷ್ಠ 30-40% ಚಲನಶೀಲತೆಯ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುತ್ತದೆ. ಕೆಆರ್ ಪುರ- ಬೈಯಪ್ಪನಹಳ್ಳಿ ಸಂಪರ್ಕ ಆರಂಭವಾದ ನಂತರ ಜನರ ಸಂಚಾರ ಇಲ್ಲಿ ಹೆಚ್ಚಾಗುತ್ತದೆ ಮತ್ತು ಪ್ರಯಾಣಿಸಲು ಹೆಚ್ಚು ಸುಲಭವಾಗುತ್ತದೆ ಎಂದು ಅವರು ಹೇಳಿದರು.

ಈ ಮಾರ್ಗವು ಕೆಆರ್ ಪುರಂ, ವೈಟ್‌ಫೀಲ್ಡ್ ಮತ್ತು ಹತ್ತಿರದ ಪ್ರದೇಶಗಳ ನಿವಾಸಿಗಳಿಗೆ ನಗರಕ್ಕೆ ಹೋಗಲು ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ. ಹೊಸದಾಗಿ ಮರುನಾಮಕರಣಗೊಂಡ ನಿಲ್ದಾಣಗಳು ಜನರಲ್ಲಿ ಸ್ಥಳೀಯ ಸಂಪರ್ಕದ ಪ್ರಜ್ಞೆಯನ್ನು ಉಂಟುಮಾಡುವ ಕಾರಣ ಸಂತೋಷವಾಗಿದೆ ಎಂದು ನಾಗರಿಕರ ಗುಂಪಿನ ಮಹದೇವಪುರ ಟಾಸ್ಕ್ ಫೋರ್ಸ್-ಮೊಬಿಲಿಟಿ ಕಾರ್ಯದರ್ಶಿ ಕ್ಲೆಮೆಂಟ್ ಜಯಕುಮಾರ್ ಹೇಳಿದರು.

ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕಾಗಿ ಅನುಕೂಲವಾಗಲು ಫೀಡರ್ ಬಸ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಮೆಟ್ರೋ ಫೀಡರ್ ಬಸ್ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿಗೆ ಕಾರ್ಯನಿರ್ವಹಿಸಲಿದ್ದು, ಬೆಳಗ್ಗೆ 7 ರಿಂದ ರಾತ್ರಿ 11 ರವರೆಗೆ ಅಂದರೆ ಮೆಟ್ರೋ ನಿಲ್ದಾಣಗಳಲ್ಲಿ ಕೊನೆಯ ಮೆಟ್ರೋ ಹೊರಡುವವರೆಗೂ ಬಸ್‌ಗಳು ಕಾರ್ಯ ನಿರ್ವಹಿಸಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+