Foot Over Bridge: ಕೊನೆಗೂ ಸಾರ್ವಜನಿಕರಿಗೆ ಮುಕ್ತವಾಯಿತು ಕೆ.ಆರ್ಪುರಂ ಬ್ರಿಡ್ಜ್, ಜನ ಬೇಸರ
ಬೆಂಗಳೂರು, ಆಗಸ್ಟ್ 26: ರಾಜಧಾನಿ ಬೆಂಗಳೂರಿನಲ್ಲಿನ ಕೆಆರ್ ಪುರಂ ರೈಲ್ವೆ ನಿಲ್ದಾಣ ಮತ್ತು ಕೆಆರ್ ಪುರಂ ಮೆಟ್ರೋ ನಿಲ್ದಾಣ ಸಂಪರ್ಕಿಸುವ ಪಾದಾಚಾರಿಗಳಿಗೆ ಅನುಕೂಲವಾಗುವ ಫುಟ್-ಓವರ್-ಬ್ರಿಡ್ಜ್ (FOB) ಹಲವು ಗಡುವುಗಳ ನಂತರ ಅಂತಿಮವಾಗಿ ಪೂರ್ಣಗೊಂಡಿದೆ. ಇತ್ತೀಚೆಗಷ್ಟೆ ಪಾದಾಚಾರಿಗಳಿಗೆ ಸಂಚಾರಕ್ಕೆ ಮುಕ್ತಗೊಂಡಿದೆ.
ಕೆ.ಆರ್.ಪುರಂ ಹೆಚ್ಚು ಜನದಟ್ಟಣೆಯ ಪ್ರದೇಶವಾಗಿದೆ. ಇಲ್ಲಿನ ಇಂಟರ್ಮೋಡಲ್ ಸಂಪರ್ಕ ಸುಧಾರಿಸುವ ಹಾಗೂ ಜನರಿಗೆ ಸಂಚರಿಸಲು ಅನುಕೂಲವಾಗುವಂತೆ ಈ ಫುಟ್ ಓವರ್ ಬ್ರಿಡ್ಜ್ ಮೂಲಸೌಕರ್ಯ ಸ್ಥಾಪಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ರೈಲ್ವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ಟ್ರಾಫಿಕ್ ಪೊಲೀಸ್ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗಿದೆ.

ಮೆಟ್ರೋ ನೀಲಿ ಹಾಗೂ ನೇರಳೆ ಮಾರ್ಗಕ್ಕೆ ಸಂಪರ್ಕ
ರೈಲು ನಿಲ್ದಾಣದಿಂದ ನಮ್ಮ ಮೆಟ್ರೋ ನೀಲಿ ಹಾಗೂ ಮೆಟ್ರೋ ನೇರಳೆ ಮಾರ್ಗಗಳನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ನೆರವಾಗುತ್ತದೆ. ಜನರು ಈ ರೈಲು ನಿಲ್ದಾಣಗಳ ಮಧ್ಯೆ ಓಡಾಡಬಹುದಾಗಿದೆ. ಇನ್ನು ಮುಂದೆ ರಸ್ತೆ ದಾಟುವ, ಧಾವಂತ, ಭಯ, ಕಿರಿ ಕಿರಿ ಜನರಿಗೆ ತಪ್ಪಲಿದೆ. ಪಾದಾಚಾರಿಗಳ ಸಂಚಾರ ಈ ಎಫ್ಓಬಿಯಿಂದ ಸರಳವಾಗಿದೆ.
ಕೆಲವು ವರ್ಷಗಳವರೆಗೆ ಸರಿಯಾದ ಪಾದಚಾರಿ ಮಾರ್ಗವಿಲ್ಲದೇ ಜನರು ಪದಾಡುತ್ತಿದ್ದರು. ಪ್ರಯಾಣಿಕರು ರೈಲು ನಿಲ್ದಾಣದಿಂದ ಮೆಟ್ರೋಗೆ ಬರಲು ತೊಂದರೆ ಆಗಿತ್ತು. ರಸ್ತೆ ದಾಟುವವರಿಗೂ ಸಮಸ್ಯೆ ಆಗಿತ್ತು. ಇದೀಗ ಆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಎಫ್ಓಬಿಯಲ್ಲಿ ಕೆಲಸ ಬಾಕಿ, ಜನ ಬೇಸರ
ವಿಪರ್ಯಾಸವೆಂದರೆ ಕೆಲವು ಗಡುವುಗಳ ಮೀರಿದ ನಂತರ ಈ ಬ್ರಿಡ್ಜ್ ಪೂರ್ಣಗೊಂಡಿದೆ. ಆದರೆ ಒಂದಷ್ಟು ಕೆಲಸಗಳು ಬಾಕಿ ಉಳಿದುಕೊಂಡಿವೆ. ವೃದ್ಧರು ಹಾಗೂ ಅಂಗವಿಕಲ ಪ್ರಯಾಣಿಕರಿಗೆ ಅಗತ್ಯವಾದ ಲಿಫ್ಟ್ಗಳು ಆರಂಭವಾಗಿಲ್ಲ. ಅಳವಡಿಕೆ ಕಾರ್ಯ ಬಾಕಿ ಉಳಿದಿದೆ. ಇನ್ನೂ ಬ್ರಿಡ್ಜ್ ಅನುಸರಿಸುವ ಬರುವವರಿಗೆ ಯಾವ ಮಾರ್ಗವಾಗಿ ಪ್ರಯಾಣಿಸಬೇಕು ಎಂಬ ಸೂಚನಾ ಫಲಕ ಸಹ ಹಾಕಿಲ್ಲ.

ಇದೆಲ್ಲ ಕಾರಣದಿಂದ ಎಫ್ಓಬಿ ಸಾರ್ವಜನಿಕರಿಗೆ ಮುಕ್ತಗೊಂಡರು ಸಹಿತ ಜನರಿಂದ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ರೈಲು ಪ್ರಯಾಣಿಕರಿಗೆ ಮೆಟ್ರೋ ನಿಲ್ದಾಣದಿಂದ ಬರುವವರಿಗೆ ಈ ಬ್ರಿಡ್ಜ್ ಹೆಚ್ಚು ಸಹಕಾರಿಯಾಗಿದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಪೀಕ್ ಹವರ್ ನಲ್ಲಿ ರಸ್ತೆ ದಾಟುವುದು ದುಃಸ್ವಪ್ನವಾಗಿತ್ತು. ಸದ್ಯ ಲಿಫ್ಟ್ ಇಲ್ಲದಿರುವುದು ನಿರಾಶಾದಾಯಕ ಆಗಿದೆ.
ಕೆ.ಆರ್.ಪುರಂ ರೈಲು ನಿಲ್ದಾಣ, ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕಿಸಲು ಈ ಎಫ್ಓಬಿ ಉತ್ತಮ ಯೋಝನೆಯಾಗಿದೆ. ಜನರಿಗೆ ಸುರಕ್ಷಿತ ರಸ್ತೆ ದಾಟುವಿಕೆಯನ್ನು ಖಚಿತಪಡಿಸುತ್ತದೆ. ಆದಷ್ಟು ಬೇಗ ಲಿಫ್ಟ್ಗಳ ಅಳವಡಿಕೆ ಕಾರ್ಯ ಪೂರ್ಣಗೊಳಿಸಬೇಕು, ಸೂಚನಾ ಫಲಕ ಅಳವಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications