2025 ರ ವೇಳೆಗೆ ಕರ್ನಾಟಕ ಮಲೇರಿಯಾ ಮುಕ್ತ ರಾಜ್ಯವಾಗಬೇಕು: ಡಾ. ಸುಧಾಕರ್
ಬೆಂಗಳೂರು, ಜುಲೈ 16: ರಾಜ್ಯದಲ್ಲಿ ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಜನ ಸಮುದಾಯದಲ್ಲಿ ಅರಿವು ಮೂಡಿಸಬೇಕಾಗಿದೆ. ಮಲೇರಿಯಾ ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಿ, ಜನರೇ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ತಿಳುವಳಿಕೆ ಮೂಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ, 2025 ರ ವೇಳೆಗೆ ಕರ್ನಾಟಕವನ್ನು ಮಲೇರಿಯಾ ಮುಕ್ತ ಮಾಡುವ ವಿಷಯ ಕುರಿತ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕುಟುಂಬ ಯೋಜನೆ ಅಳವಡಿಕೆ ಜನಾಂದೋಲನ ಆಗಬೇಕು
ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, "ಮಲೇರಿಯಾಗೆ ಹಿಂದೆ ಸರಿಯಾದ ತಪಾಸಣಾ ವ್ಯವಸ್ಥೆಯೇ ಇರಲಿಲ್ಲ. ಇದರಿಂದಾಗಿ ಸಾವು ಸಂಭವಿಸುತ್ತಿತ್ತು. 1980, 90 ರ ದಶಕದಲ್ಲಿ ಯಾವುದೇ ಜ್ವರ ಬಂದರೂ ಮೊದಲು ಮಲೇರಿಯಾ ತಪಾಸಣೆ ಮಾಡಲು ಆರಂಭವಾಯಿತು. ಈ ರೀತಿ ಸರ್ಕಾರ ತಪಾಸಣೆ ಹಾಗೂ ಅರಿವು ಕಾರ್ಯಕ್ರಮಗಳ ಮೂಲಕ ರೋಗ ನಿಯಂತ್ರಣಕ್ಕೆ ಕ್ರಮ ವಹಿಸುತ್ತಿದೆ. ಯಾವುದೇ ರೋಗದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಹೆಚ್ಚು ಅಗತ್ಯ" ಎಂದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭಯ
ಮಲೇರಿಯಾ,
ಡೆಂಘೀಯಂತಹ
ಸಾಂಕ್ರಾಮಿಕ
ರೋಗಗಳು
ಮಳೆಗಾಲದಲ್ಲಿ
ಹೆಚ್ಚಾಗುತ್ತದೆ.
ರಾಜ್ಯದ
13
ಜಿಲ್ಲೆಗಳಲ್ಲಿ
ಧಾರಾಕಾರ
ಮಳೆ
ಸುರಿದಿದೆ.
ಹಲವು
ಪ್ರದೇಶಗಳಲ್ಲಿ
ಪ್ರವಾಹ
ಪರಿಸ್ಥಿತಿ
ಉಂಟಾಗಿದೆ.
ಮಳೆಗಾಲದಲ್ಲಿ
ಹಲವು
ಪ್ರದೇಶಗಳಲ್ಲಿ
ಸ್ವಾಭಾವಿಕವಾಗಿ
ಮಳೆ
ನೀರು
ಶೇಖರಣೆಯಾಗುತ್ತದೆ.
ಇದರಿಂದಾಗಿ
ಸೊಳ್ಳೆ
ಉತ್ಪತ್ತಿಯಾಗಿ
ಸಾಂಕ್ರಾಮಿಕ
ರೋಗಗಳ
ಹರಡುವಿಕೆ
ಹೆಚ್ಚಾಗುತ್ತದೆ
ಎಂದರು.
"ಭಾರತದಲ್ಲಿ
2020
ರಲ್ಲಿ
1,86,532
ಮಲೇರಿಯಾ
ಪ್ರಕರಣ
ಪತ್ತೆಯಾಗಿತ್ತು.
ಈ
ಪೈಕಿ
ಕರ್ನಾಟಕದಲ್ಲಿ
1,701
ಪ್ರಕರಣಗಳು
ವರದಿಯಾಗಿದ್ದವು.
ಅಂದರೆ
ರಾಜ್ಯದ
ಪಾಲು
ಶೇಕಡ
0.9
ಆಗಿತ್ತು.
ಇದೇ
ವರ್ಷ
ಜಗತ್ತಿನಲ್ಲಿ
21
ಕೋಟಿ
ಜನರು
ಮಲೇರಿಯಾ
ರೋಗಕ್ಕೊಳಗಾಗಿದ್ದು,
6.27
ಲಕ್ಷ
ರೋಗಿಗಳು
ಮೃತಪಟ್ಟಿದ್ದರು.
ರಾಜ್ಯದಲ್ಲಿ
ಮಲೇರಿಯಾ
ನಿಯಂತ್ರಣದಲ್ಲಿದ್ದು,
ಇದಕ್ಕಾಗಿ
ಅಧಿಕಾರಿ,
ಸಿಬ್ಬಂದಿಯನ್ನು
ಅಭಿನಂದಿಸುತ್ತೇನೆ"
ಎಂದು
ಸಚಿವ
ಡಾ.
ಕೆ.
ಸುಧಾಕರ್
ಹೇಳಿದರು.
ರಾಜಕೀಯ ಲಾಭಕ್ಕಾಗಿ ವೈದ್ಯಕೀಯ ಕಾಲೇಜು ನಿರ್ಮಿಸಿಲ್ಲ: ಸಚಿವ ಡಾ.ಕೆ.ಸುಧಾಕರ್
ಮಲೇರಿಯಾ ಬಗ್ಗೆ ಎಚ್ಚರಿಕೆ ವಹಿಸಬೇಕು
ಮಲೇರಿಯಾ ರೋಗವನ್ನು ಸಾಧಾರಣ ರೋಗ ಎಂದು ಪರಿಗಣಿಸುವಂತಿಲ್ಲ. ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 100 ಪ್ರಕರಣ ಮಾತ್ರ ವರದಿಯಾಗಿದೆ. ಈ ಮಳೆಗಾಲವು ಅತ್ಯಂತ ಸವಾಲಿನ ಅವಧಿಯಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಹೆಚ್ಚು ಅರಣ್ಯ ಪ್ರದೇಶ ಇರುವ ಕಡೆಗಳಲ್ಲಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದರು.
ಮಲೇರಿಯಾ ಸಂಪೂರ್ಣ ನಿರ್ಮೂಲನೆಗೆ ಕರೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ನವ
ಕರ್ನಾಟಕ
ನಿರ್ಮಾಣದ
ಕನಸು
ಕಂಡಿದ್ದಾರೆ.
ಆರೋಗ್ಯ
ಕರ್ನಾಟಕ
ನಿರ್ಮಿಸಿದಾಗ
ಮಾತ್ರ
ಇದು
ಸಾಧ್ಯ.
ಮಲೇರಿಯಾ
ಮಾತ್ರವಲ್ಲದೆ,
ಕ್ಷಯ
ರೋಗವನ್ನು
ಕೂಡ
ಸಂಪೂರ್ಣವಾಗಿ
ನಿರ್ಮೂಲನೆ
ಮಾಡಬೇಕಿದೆ.
2030
ರ
ವೇಳೆಗೆ
ಮಲೇರಿಯಾ
ನಿರ್ಮೂಲನೆ
ಮಾಡಲು
ಕೇಂದ್ರ
ಸರ್ಕಾರ
ಗುರಿ
ನೀಡಿದೆ.
ಆದರೆ
2025ರ
ವೇಳೆಗೆ
ಗುರಿ
ಮುಟ್ಟುವ
ಉದ್ದೇಶವನ್ನು
ಕರ್ನಾಟಕ
ಹೊಂದಿದೆ
ಎಂದು
ಹೇಳಿದರು.
ಸರ್ಕಾರದ
ಕೆಲಸ,
ಸಂಘ,
ಸಂಸ್ಥೆಗಳ
ನೆರವು
ಹಾಗೂ
ಜನರ
ಸಹಭಾಗಿತ್ವದಿಂದ
ಇದು
ಸಾಧ್ಯವಾಗುತ್ತದೆ.
ಪ್ರತಿ
ನಾಗರಿಕರು
ತಮ್ಮ
ಮನೆಯ
ಸುತ್ತಮುತ್ತಲಿನ
ಪ್ರದೇಶವನ್ನು
ಸ್ವಚ್ಛವಾಗಿರಿಸಿಕೊಳ್ಳಬೇಕು.
ಈ
ಬಗ್ಗೆ
ಹೆಚ್ಚು
ಅರಿವು
ಮೂಡಿಸಬೇಕು
ಎಂದರು.
ಹಲವು ಜಿಲ್ಲೆಗಳಲ್ಲಿ ಮಲೇರಿಯಾ ಪ್ರಕರಣ ಶೂನ್ಯ
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮಲೇರಿಯಾ ಹೆಚ್ಚಿರುವ ಕಡೆಗಳಿಗೆ ಹೋಗಿ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ರೋಗ ನಿರ್ಮೂಲನೆ ಮಾಡಿದರೆ ಮಾತ್ರ ಸಾಲುವುದಿಲ್ಲ. ಮಲೇರಿಯಾ ಮತ್ತೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಬೇಕು. ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಜಿಲ್ಲೆಗಳಲ್ಲಿ ಪ್ರಕರಣ ಕಂಡುಬಂದಿಲ್ಲ ಎಂದಾಕ್ಷಣ, ಅಲ್ಲಿ ರೋಗ ಇಲ್ಲ ಎಂದು ಭಾವಿಸಬಾರದು. ಸಾಮೂಹಿಕ ಪ್ರಯತ್ನ, ಸಂಘಟಿತ ಕಾರ್ಯದ ಮೂಲಕ ಮಲೇರಿಯಾ ನಿರ್ಮೂಲನೆ ಕಾರ್ಯ ನಡೆಯಬೇಕು ಎಂದು ಹೇಳಿದರು.
ಮಲೇರಿಯಾ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕೇಂದ್ರ ಆಯೋಜಿಸಿದ್ದ ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ ವಿಜೇತೆಯಾದ ವಿದ್ಯಾರ್ಥಿನಿ ಅವನಿ ಹೆಗಡೆ ಅವರಿಗೆ ಸಚಿವ ಡಾ. ಕೆ. ಸುಧಾಕರ್ ಅಭಿನಂದನೆ ಸಲ್ಲಿಸಿದರು.