Get Updates
Get notified of breaking news, exclusive insights, and must-see stories!

'ನಿಯಮ ಉಲ್ಲಂಘಿಸಿ ಕೋಗಿಲು ನಿವಾಸಿಗಳಿಗೆ ಮನೆ: ಮೊದಲು ರಾಜ್ಯದ 65,000 ಅರ್ಜಿದಾರರಿಗೆ ಮನೆ ಕೊಡಿ'

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಕೋಗಿಲು ಬಡಾವಣೆಗಳ ಅರ್ಹ ನಿವಾಸಿಗಳಿಗೆ ಸೂರು ಕಲ್ಪಿಸುವುದಾಗಿ ಘೋಷಿಸೆ. ಈ ಮೂಲಕ ವಸತಿ ಯೋಜನೆಗಳಿಗೆ ಅರ್ಜಿ ಹಾಕಿ, ಪರಿಶೀಲಿಸಿ, ಅನುಮೋದಿಸುವ ನಿಯಮಗಳನ್ನು ಸರ್ಕಾರವೇ ಉಲ್ಲಂಘಿಸುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ರಾಜೀವ್‌ ಗಾಂಧಿ ವಸತಿ ನಿಗಮದ ವಸತಿ ಯೋಜನೆಗಳಡಿ ಸಾವಿರಾರು ಮಂದಿ ಅರ್ಜಿ ಹಾಕಿದರೂ ಸಹಿತ ಈವರೆಗೆ ಮನೆ ನೀಡದಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ.

ರಾಜೀವ್‌ ಗಾಂಧಿ ವಸತಿ ನಿಗಮದ ವಸತಿ ಯೋಜನೆಗಳಿಗೆ 65,000 ಜನರು ಅರ್ಜಿ ಹಾಕಿದ್ದಾರೆ. ಕೋಗಿಲು ಬಡಾವಣೆಯಲ್ಲಿನ ಬಾಂಗ್ಲಾ ಜನರಿಗೆ ಮನೆ ನೀಡುವುದಾರೆ, ಮೊದಲು ಕನ್ನಡಿಗರಿಗೆ ಆದ್ಯತೆ ಮೇರೆಗೆ ಮನೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು. ವಸತಿ ನಿಗಮಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಅವರು ಸುದ್ದಿಗಾರರಿಗೆ ಒಂದಷ್ಟು ಮಾಹಿತಿ ನೀಡಿದರು.

Karnataka Govt Violating Housing Norms Demands Priority for 65 000 Applicants R Ashoka

ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ರಾಜ್ಯದ ಸುಮಾರು 65 ಸಾವಿರ ಜನರು ಮನೆಗಾಗಿ ಅರ್ಜಿ ಹಾಕಿದ್ದಾರೆ. ನಿಗಮದಲ್ಲಿ ವಿವಿಧ ಯೋಜನೆಗಳಲ್ಲಿ ಸುಮಾರು 7,000 ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ 10,000 ಮನೆಗಳು ನಿರ್ಮಾಣ ಹಂತದಲ್ಲಿದೆ. 80 ವರ್ಷದ ಮಹಿಳೆ ಪೂರ್ತಿ ಮೊತ್ತವನ್ನು ಪಾವತಿಸಿದ್ದಾರೆ. ಅವರಿಗೆ ಇನ್ನೂ ಮನೆ ನೀಡಿಲ್ಲ. ಕಳೆದ ನಾಲ್ಕು ತಿಂಗಳಿಂದ ಅವರನ್ನು ಅಲೆದಾಡಿಸುತ್ತಿದ್ದು, ಆ ಮನೆಗೆ ಇನ್ನೂ ಕುಡಿಯುವ ನೀರು ಹಾಗೂ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ. ಇವರು ಬಾಡಿಗೆ ಮನೆಯಲ್ಲಿದ್ದು, ಆ ಮನೆಯಿಂದಲೂ ಹೊರಬರುವ ಆತಂಕದಲ್ಲಿದ್ದಾರೆ. ಇದೇ ರೀತಿ ಸಾವಿರಾರು ಕನ್ನಡಿಗರು ಅರ್ಜಿ ಹಾಕಿ ಮನೆಗಾಗಿ ಕಾಯುತ್ತಿದ್ದಾರೆ. ಅವರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂದು ದೂರಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ಕೋಗಿಲು ಬಡಾವಣೆಯಲ್ಲಿರುವ ಬಾಂಗ್ಲಾ ನಿವಾಸಿಗಳಿಗೆ ಕೋಗಿಲು ಕ್ರಾಸ್‌ನಲ್ಲಿ ಮನೆ ನೀಡುತ್ತಿದೆ. ಅವರಿಗೆ ಏಕಾಏಕಿ ಮನೆ ನೀಡಲು ಸಾಧ್ಯವೇ ಇಲ್ಲ. ಜನರು ಅರ್ಜಿ ಸಲ್ಲಿಸಿ, ಶಾಸಕರ ಸಮಿತಿಯಿಂದ ಪರಿಶೀಲನೆಯಾಗಿ ಆಯ್ಕೆ ಆಗಬೇಕು. ಚಿಕ್ಕಬಾಣಾವರದಲ್ಲಿ ಒಂದು ಯೋಜನೆ ಇನ್ನೂ ಐದಾರು ವರ್ಷಗಳಿಂದ ಪ್ರಗತಿಯಲ್ಲಿದೆ. ಆದರೆ ಸರ್ಕಾರ ಕೋಗಿಲು ಕ್ರಾಸ್‌ನಲ್ಲಿ ಮಾತ್ರ ನಿಯಮಗಳನ್ನು ಪಾಲಿಸದೇ ಗಾಳಿಗೆ ತೂರಿ ಮನೆ ನೀಡಲು ಮುಂದಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.

ಕೋಗಿಲು ಬಡಾವಣೆಯಲ್ಲಿರುವವರ ಇದೇ ದೇಶದವರೇ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. ಅವರ ಮೂಲಕ ಯಾವುದು, ಅವರ ಅಪ್ಪ ಅಮ್ಮ ಎಲ್ಲಿದ್ದಾರೆ ಎಂಬುದಕ್ಕೆ ಮಾಹಿತಿ ಇಲ್ಲ. ಇದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಹಾಗೂ ಕೆ.ಸಿ.ವೇಣುಗೋಪಾಲ್‌ ನಡುವೆ ನಡೆಯುತ್ತಿರುವ ಸಂಘರ್ಷ. ಇದರಿಂದ ಕನ್ನಡಿಗರು ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ 13,000 ಜನರು ಪ್ರವಾಹದಿಂದ ಮನೆ ಕಳೆದುಕೊಂಡಿದ್ದರೂ ಅವರಿಗೆ ಮನೆ ನೀಡಿಲ್ಲ. ಉತ್ತರ ಕರ್ನಾಟಕದ ಭಾಗದ ಶಾಸಕರು ಇಲ್ಲಿಗೆ ಬಂದು ಪ್ರವಾಹ ಸಂತ್ರಸ್ತರ ಪರ ಮನೆ ಕೇಳುತ್ತಿದ್ದಾರೆ. ಅಧಿಕಾರಿಗಳು ನಿಯಮ ಮೀರಿದರೆ ಅವರೇ ಬಲಿಪಶುವಾಗುತ್ತಾರೆ. ಆದ್ದರಿಂದ ಮನೆ ನೀಡುವಾಗ ವಂಶವೃಕ್ಷವನ್ನು ಕಡ್ಡಾಯ ಮಾಡಬೇಕಿದೆ ಎಂದು ಹೇಳಿದರು.

ಕೋಗಿಲು ಕ್ರಾಸ್‌ಗೆ ಬಿಜೆಪಿ ನಿಯೋಗ ಬರಲಿದೆ ಎಂದಾಕ್ಷಣ ಕನ್ನಡಿಗರನ್ನು ಕರೆತಂದು ಇರಿಸಿದ್ದಾರೆ. 16,000 ರೂ. ಗೆ ಆಧಾರ್‌ ಕಾರ್ಡ್‌ ಮಾಡಿಸಿಕೊಡುವ ಗ್ಯಾಂಗ್ ಇದೆ. ಮತಕ್ಕಾಗಿ ಇಂತಹವರನ್ನು ಇಲ್ಲಿ ನೆಲೆಸುವಂತೆ ಮಾಡಿದ್ದಾರೆ. ಬಾಂಗ್ಲಾದೇಶದ 16 ಕೋಟಿ ಜನರಲ್ಲಿ 3 ಕೋಟಿ ಜನರು ಕಾಣೆಯಾಗಿದ್ದಾರೆ. 20-25 ಲಕ್ಷ ಜನರು ಕರ್ನಾಟಕಕ್ಕೆ ಬಂದಿದ್ದಾರೆ. ಸರ್ಕಾರ 6-8 ಲಕ್ಷ ಬಾಂಗ್ಲಾದವರನ್ನು ಗುರುತಿಸಿದೆ. ಅವರಿಗೆ ಮನೆ ಕೊಡಲೇಬೇಕೆಂಬ ಹಠ ಯಾಕೆ? ಮನೆ ಕೊಡುವುದಾದರೆ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಕೋಗಿಲು ಕ್ರಾಸ್‌ನಲ್ಲಿ ಪಶ್ಚಿಮ ಬಂಗಾಳದ ಕಾರು ಇರುವುದು ಕಂಡುಬಂದಿದೆ ಎಂದು ತಿಳಿಸಿದರು.

Karnataka Govt Violating Housing Norms Demands Priority for 65 000 Applicants R Ashoka

ಮನೆ ಹಂಚಿಕೆ ವಿರೋಧಿ ಜ. 5ರಂದು ಬಿಜೆಪಿ ಹೋರಾಟ

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಬಾಂಗ್ಲಾ ನುಸುಳುಕೋರರನ್ನು ಬಿಡುತ್ತಿದ್ದಾರೆ. ಅದನ್ನು ತಡೆಯಲು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ ಅದನ್ನು ಕಾಂಗ್ರೆಸ್‌ ವಿರೋಧಿಸುತ್ತಿದೆ ಎಂದು ಕಿಡಿ ಕಾರಿದರು. ಈ ಕೋಗಿಲು ನಿವಾಸಿಗಳಿಗೆ ಮನೆ ಹಂಚಿಕೆ ವಿರೋಧಿಸಿ ಜನವರಿ 5 ರಂದು ಬಿಜೆಪಿ ಪ್ರತಿಭಟನೆ ಮಾಡಲಿದೆ. ಇದರೊಂದಿಗೆ ಕಾನೂನು ಹೋರಾಟ ಮಾಡುತ್ತೇವೆ. ಮುಂದಿನ ಸದನದಲ್ಲೂ ಈ ಬಗ್ಗೆ ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು.

ಬಳ್ಳಾರಿ ಪ್ರಕರಣ ಬಿಚ್ಚಿಟ್ಟ ಆರ್.ಅಶೋಕ

ರಾಜ್ಯದಲ್ಲಿ ಕೊಲೆಗಡುಕ ಸರ್ಕಾರವಿದೆ ಎಂದು ದೂರಿದ ಅವರು, ಕಾಂಗ್ರೆಸ್‌ನಿಂದ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್‌ ಅಧಿಕಾರಿಗಳಿಗೆ ಮಾನಸಿಕ ಒತ್ತಡ ಹೆಚ್ಚಿದೆ. ಪೊಲೀಸ್‌ ಅಧಿಕಾರಿಗಳು ಹಣ ಕೊಟ್ಟರೆ ಮಾತ್ರ ಪೋಸ್ಟಿಂಗ್‌ ಕೊಡುತ್ತಾರೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಮೇಲೆ ಗುಂಡಿನ ದಾಳಿಯ ಪ್ರಯತ್ನ ನಡೆದಿದೆ. ಅದಕ್ಕೆ ಬಲಿಪಶುವಾಗಿ ಎಸ್‌ಪಿ ಯನ್ನು ಅಮಾನತು ಮಾಡಲಾಗಿದೆ. ಶಾಸಕ ಭರತ್‌ ರೆಡ್ಡಿ ಗನ್‌ ಮ್ಯಾನ್‌ ಗುಂಡು ಹಾರಿಸಿದ್ದು ಎಂದಿದ್ದಕ್ಕೆ ಎಸ್‌ಪಿ ಮೇಲೆ ಕ್ರಮ ವಹಿಸಿದ್ದಾರೆ. ಈಗ ಆ ಎಸ್‌ಪಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ ಎಂದರು.

ಒತ್ತಡದಿಂದ ಅಧಿಕಾರಿಗಳು ಆತ್ಮಹತ್ಯೆ!

ಪ್ರಕರಣದಲ್ಲಿ ಗನ್ ಮಾತ್ರ ವಶಕ್ಕೆ ಪಡೆದು ಆರೋಪಿಗಳಿಗೆ ರಾಜ್ಯ ಬಿಟ್ಟು ಓಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಓಡಿ ಹೋದ ನಂತರ ಎಫ್‌ಐಆರ್‌ ದಾಖಲಿಸಿದ್ದಾರೆ. ಸರ್ಕಾರದ ಒತ್ತಡದಿಂದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ಪೊಲೀಸ್‌ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಗಂಟೆಯಲ್ಲಿ ಎಸ್‌ಪಿಯನ್ನು ಅಮಾನತು ಮಾಡಿದ್ದಾರೆ ಎಂದರೆ, ಎರಡೂವರೆ ವರ್ಷದಿಂದ ಸಚಿವರಾಗಿರುವ ಗೃಹ ಸಚಿವ ಡಾ.ಜಿ.ಪಮರೇಶ್ವರ, ಸಚಿವ ಜಮೀರ್‌ ಅಹ್ಮದ್‌ ಖಾನ್ ಅವರನ್ನು ಅಮಾನತು ಮಾಡಬೇಕಿತ್ತು, ಇದು ನೇಣಿನ ಭಾಗ್ಯದ ಸರ್ಕಾರ ಎಂದು ಟೀಕಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+