ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆ, ತಾಲ್ಲೂಕುಗಳಿಗೆ ಅನುದಾನ ಬಿಡುಗಡೆ
ಬೆಂಗಳೂರು, ಜನವರಿ 19: ಕರ್ನಾಟಕದಲ್ಲಿ ಗಣರಾಜ್ಯೋತ್ಸವ ದಿನದ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ರಾಜಧಾನಿ ಬೆಂಗಳೂರು ನಗರಕ್ಕೆ 25 ಲಕ್ಷ ರೂ, ಉಳಿದಂತೆ ಪ್ರತಿ ಜಿಲ್ಲೆಗೆ ತಲಾ 1 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ತಾಲ್ಲೂಕು ಮಟ್ಟದ ಕಾರ್ಯಕ್ರಮಗಳಿಗೆ ತಲಾ 20 ಸಾವಿರ ರೂ. ಬಿಡುಗಡೆ ಮಾಡಲು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಗಣರಾಜ್ಯೋತ್ಸವ
ಟ್ಯಾಬ್ಲೋ;
ಇಳಕಲ್
ಸೀರೆ,
ಗುಳೇದಗುಡ್ಡದ
ಖಣ
ಆಯ್ಕೆ
ಕರ್ನಾಟಕದ
ಬಾಗಲಕೋಟೆ
ಜಿಲ್ಲೆಯ
ಇಳಕಲ್
ಸೀರೆಯಂತೆಯೇ,
ಗುಳೇದಗುಡ್ಡ
ಖಣ
ಅಥವಾ
ಕುಪ್ಪಸ
ಸಹ
ಹೆಚ್ಚು
ಪ್ರಸಿದ್ಧಿ
ಪಡೆದಿದೆ.
ಇದೀಗ
ಈ
ಜೋಡಿಯ
ಗೌರವ
ಹೆಚ್ಚಾಗಿದ್ದು,
ಇಳಕಲ್
ಸೀರೆ
ಹಾಗೂ
ಗುಳೇದಗುಡ್ಡ
ಖಣ
ಈ
ಬಾರಿಯ
ನವದೆಹಲಿಯಲ್ಲಿ
ನಡೆಯುವ
ಗಣರಾಜ್ಯೋತ್ಸವ
ಸ್ತಬ್ಧಚಿತ್ರ
ಪ್ರದರ್ಶನಕ್ಕೆ
ಆಯ್ಕೆಯಾಗಿದೆ.
ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ ಎರಡು ಆಯ್ಕೆಯಾಗಿದ್ದು, ಸ್ತಬ್ಧಚಿತ್ರಗಳ ವಸ್ತು ಪ್ರದರ್ಶನದಲ್ಲಿ ಮಿಂಚಲಿವೆ.
ಶಾಲಾ-
ಕಾಲೇಜುಗಳಲ್ಲಿ
ಸುಭಾಷ್
ಚಂದ್ರ
ಬೋಸ್
ಜಯಂತಿ
ಆಚರಣೆ
ಅಪ್ರತಿಮ
ದೇಶ
ಭಕ್ತ,
ಭಾರತದ
ಸ್ವಾತಂತ್ರ್ಯಕ್ಕಾಗಿ
ಪ್ರಾಣವನ್ನೇ
ತ್ಯಾಗ
ಮಾಡಿದ
ನೇತಾಜಿ
ಸುಭಾಷ್
ಚಂದ್ರ
ಬೋಸ್
ಅವರ
ಜೀವನ
ಸಾಧನೆ
ಸ್ಮರಣೀಯ
ಹಾಗೂ
ಯುವ
ಜನರಿಗೆ
ಪ್ರೇರಣೆಯಾಗಿದೆ.
ಹೀಗಾಗಿ
ಸುಭಾಷ
ಚಂದ್ರ
ಬೋಸ್ರವರ
125ನೇ
ಜಯಂತಿಯನ್ನು
ಅರ್ಥಪೂರ್ಣವಾಗಿ
ಆಚರಿಸಲು
ನಿರ್ಧರಿಸಲಾಗಿದೆ
ಎಂದು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ತಿಳಿಸಿದರು.
ಮಂಗಳವಾರ ಬೆಂಗಳೂರಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ (ಜನವರಿ 23) ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಮೂಲಕ ನಡೆಸಿದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಬೆಂಗಳೂರಿನ ಜಕ್ಕೂರಿನ ವೈಮಾನಿಕ ತರಬೇತಿ ಶಾಲೆಯ ಆವರಣದಲ್ಲಿ ಸುಭಾಷ್ ಚಂದ್ರ ಬೋಸ್ರವರ 125ನೇ ಜನ್ಮ ದಿನಾಚರಣೆಯನ್ನು ಮಾಡಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನೂರು ಜನ ಎನ್ಸಿಸಿ ಕೆಡಿಟ್ ಮತ್ತು ಕಮಾಂಡರ್ಗಳು ಭಾಗಿಯಾಗಲಿದ್ದಾರೆ ಎಂದರು.
Recommended Video
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಇದು ಸುಭಾಷ್ ಚಂದ್ರ ಬೋಸ್ರವರ 125ನೇ ಜನ್ಮ ದಿನ. ಹೀಗಾಗಿ ರಾಜ್ಯದ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ವರ್ಷವಿಡೀ ಸುಭಾಷ್ ಚಂದ್ರ ಬೋಸ್ ಅವರ ಕುರಿತಾದ ಕಾರ್ಯಕ್ರಮಗಳನ್ನು ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ವಿಶೇಷವಾದ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.