ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಕಟೌಟಿನ ತಲೆ ಕಡಿದ ದುಷ್ಕರ್ಮಿಗಳು: ಇದು ಬಿಜೆಪಿ ಶಾಸಕರದ್ದೇ ಕುಕೃತ್ಯ ಎಂದ ಜೆಡಿಎಸ್
ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಕಟೌಟಿನ ತಲೆಯನ್ನು ಕಡಿಯಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುವುದು ಬಿಜೆಪಿಗೆ ಖಚಿತವಾಗಿದೆ ಎಂದು ಜೆಡಿಎಸ್ ಹೇಳಿದೆ.
ಬೆಂಗಳೂರು, ಮಾರ್ಚ್ 15: ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಕಟೌಟಿನ ತಲೆಯನ್ನು ಕಡಿಯಲಾಗಿದೆ.ಈ ಬಾರಿಯ ಚುನಾವಣೆಯಲ್ಲಿ ತಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುವುದು ಬಿಜೆಪಿಗೆ ಖಚಿತವಾಗಿದೆ. ಹಾಗಾಗಿಯೇ ಸೋಲಿನ ಹತಾಶೆಯಿಂದ ಗೂಂಡಾ ರಾಜಕಾರಣ ಮಾಡಲು ಪ್ರಾರಂಭಿಸಿದೆ ಎಂದು ಜೆಡಿಎಸ್ ಆರೋಪಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿದೆ.
ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಕಟೌಟ್ನ ತಲೆಯನ್ನು ಕಡಿಯಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುವುದು @BJP4Karnataka ಗೆ ಖಚಿತವಾಗಿದೆ. ಹಾಗಾಗಿಯೇ ಸೋಲಿನ ಹತಾಶೆಯಿಂದ ಗೂಂಡಾ ರಾಜಕಾರಣ ಮಾಡಲು ಪ್ರಾರಂಭಿಸಿದೆ. 1/3#BJPGoons pic.twitter.com/vhbKUsXwz3
— Janata Dal Secular (@JanataDal_S) March 15, 2023
'ಸೋಲುವ ಭೀತಿಯಿಂದ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಎಸಗಿರುವ ಕುಕೃತ್ಯವಿದು ಎಂಬುವುದಕ್ಕೆ ಯಾವುದೇ ಅನುಮಾನವಿಲ್ಲ. ಪೊಲೀಸರು ಸುಮ್ಮನಿದ್ದರೂ ನಾಡಿನ ಜನತೆ ಇವೆಲ್ಲವನ್ನೂ ಗಮನಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನಿಮಗೆ ಜನತೆ ಪಾಠ ಕಲಿಸಲಿದ್ದಾರೆ' ಎಂದೂ ಜೆಡಿಎಸ್ ತಿಳಿಸಿದ್ದಾರೆ.

'ಎಸ್ಆರ್ ವಿಶ್ವನಾಥ್ ಅವರೇ, ಆಂಧ್ರ ಮಾಡಲ್ ಗೂಂಡಾ ರಾಜಕಾರಣಕ್ಕೆ ಕರ್ನಾಟಕದಲ್ಲಿ ಯಾವುದೇ ನೆಲೆಯಿಲ್ಲ.ನೈತಿಕತೆಯ ಮೇಲೆ ರಾಜಕಾರಣ ಮಾಡಿ ,ಅಖಾಡಕ್ಕಿಳಿದು ಸ್ಪರ್ಧೆ ಮಾಡಿ. ಗೂಂಡಾ ರಾಜಕಾರಣದಿಂದ ಈ ಬಾರಿಯೂ ನಿಮಗೆ ಗೆಲುವಾಗಲಿದೆ ಎಂಬ ಕನಸು ಬಿಟ್ಟುಬಿಡಿ' ಎಂದು ಜೆಡಿಎಸ್ ಹೇಳಿದೆ.
ರಾಜಧಾನಿಯಲ್ಲಿ ಮಹಿಳೆಗೆ ಸುರಕ್ಷತೆ ಇಲ್ಲ
'ರಾಜಧಾನಿಯಲ್ಲಿ ಮಹಿಳಾ ಸುರಕ್ಷತೆ ದಿನೇ ದಿನೇ ಕುಸಿಯುತ್ತಿದ್ದು, ಬೈಯ್ಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬಳಿ ಡ್ರಮ್ ಒಂದರಲ್ಲಿ ಹೆಣ್ಣುಮಗಳೊಬ್ಬಳ ಶವ ಸಿಕ್ಕಿದೆ. ಕಳೆದ ನಾಲ್ಕು ತಿಂಗಳಲ್ಲಿ ಮೂರನೇ ಬಾರಿ ಇಂತಹ ದುರ್ಘಟನೆ ನಡೆದಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೆ, ನಿಮ್ಮ ಇಲಾಖೆ ಏನು ಮಾಡುತ್ತಿದೆ' ಎಂದು ಜೆಡಿಎಸ್ ಪ್ರಶ್ನಿಸಿದೆ.
'ಜಗತ್ತಿನ ಪ್ರಮುಖ ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ನಿಗಾ ಇಡಬೇಕಿರುವ ಪೊಲೀಸ್ ಇಲಾಖೆ ತನ್ನ ಕರ್ತವ್ಯ ಮರೆಯುತ್ತಿದೆಯೇ? ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಧೋಗತಿಗೆ ಇಳಿದಿರುವುದಕ್ಕೆ ಸಾಕ್ಷಿ ಈ ಆಘಾತಕಾರಿ ಘಟನೆಗಳು. ಕಳಪೆ ಆಡಳಿತ ನಡೆಸಿ, ಇಡೀ ಇಲಾಖೆಯನ್ನು ಸಾಯಿಸಲಾಗಿದೆ' ಎಂದೂ ಜೆಡಿಎಸ್ ಆರೋಪಿಸಿದೆ.

VIP ಅತಿಥಿಗಳ ಆತಿಥ್ಯಕ್ಕಾಗಿ 260 ಕೋಟಿ ರೂ. ಖರ್ಚು
'ಬಿಜೆಪಿ ಸರ್ಕಾರ 3 ವರ್ಷಗಳ ಅವಧಿಯಲ್ಲಿ VIP ಅತಿಥಿಗಳ ಆತಿಥ್ಯಕ್ಕಾಗಿ 260 ಕೋಟಿ ರೂ. ಖರ್ಚು ಮಾಡಿದೆ. ಹೀಗೆ ಖರ್ಚು ಮಾಡಲಾಗಿರುವ ಈ ದುಡ್ಡು ನಾಡಿನ ಜನರು ಬೆವರು ಸುರಿಸಿ ಕಟ್ಟಿದ ತೆರಿಗೆಯ ಹಣ. ಈ VIP ಅತಿಥಿಗಳಿಂದ ನಾಡಿಗೆ 1 ರುಪಾಯಿಯ ಲಾಭವೂ ಆಗಿಲ್ಲ' ಎಂದು ಜೆಡಿಎಸ್ ಟೀಕಿಸಿದೆ.
'ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಕಬಳಿಸಲು ಅಥವಾ ನಾಡನ್ನು ಒಡೆಯಲು ಇವರ VIP ಗಳು ರಾಜ್ಯಕ್ಕೆ ಬರುತ್ತಾರೆ. 'ಉಂಡೂ ಹೋದ ಕೊಂಡೂ ಹೋದ' ಎಂಬ ಪರಿಸ್ಥಿತಿ ನಮ್ಮ ನಾಡಿನದ್ದು. ಚುನಾವಣೆ ವೇಳೆ ಪ್ರತ್ಯಕ್ಷರಾಗುವ ಇಂತಹ VIPಗಳಿಗೆ ಈ ದುಂದುವೆಚ್ಚ ಯಾಕೆ?' ಎಂದು ಪ್ರಶ್ನಿಸಿದೆ.
'ಯೋಜನೆಗಳಿಗೆ ನೀಡಲು ಬಿಜೆಪಿ ಸರ್ಕಾರದ ಬಳಿ ಹಣವಿಲ್ಲ. ಪಡಿತರ ಯೋಜನೆಯಲ್ಲಿ ನೀಡುತ್ತಿದ್ದ ಅಕ್ಕಿಯನ್ನೂ ಸರ್ಕಾರ ಕಡಿತ ಮಾಡಿದೆ. ಜನರಿಗೆ ತಿನ್ನಲು ಅನ್ನ ನೀಡದ ಸರ್ಕಾರ VIPಗಳ ಮುಡಿಗೆ ಮಲ್ಲಿಗೆ ಹೂವು ಮುಡಿಸಿದೆ' ಎಂದು ಜೆಡಿಎಸ್ ಟೀಕಿಸಿದೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications