ಕಡಲೆಕಾಯಿ ಪರಿಷೆ: 10 ವರ್ಷದ ಬಳಿಕ 'ಬಸವಣ್ಣನ ತೆಪ್ಪೋತ್ಸವ'ದ ಮೆರಗು
ಬೆಂಗಳೂರು, ನವೆಂಬರ್ 22: ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಇದೀಗ ಮತ್ತೊಂದು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಪರಿಷೆ ಹಿನ್ನೆಲೆಯಲ್ಲಿ ಬಸವನಗುಡಿಗೆ ಹೊಂದಿಕೊಂಡಿರುವ ಕೆರೆಯಲ್ಲಿ ಹತ್ತು ವರ್ಷದ ಬಳಿಕ ಬಸವಣ್ಣನ ತೆಪ್ಪೋತ್ಸವ ನಡೆಯಿತು.
ಬಸವನಗುಡಿಗೆ ಹೊಂದಿಕೊಂಡಂತಿರುವ ಚಾಮರಾಜಪೇಟೆ ವ್ಯಾಪ್ತಿಯ ಕೆಂಪಾಂಬುದಿ ಕೆರೆಯಲ್ಲಿ ಬಸವಣ್ಣ ಮೂರ್ತಿಯ ತೆಪ್ಪೋತ್ಸವವು ಸೋಮವಾರ ನಡೆಯಿತು. ಇದಕ್ಕು ಮೊದಲು ಅರ್ಚಕರು ಬಸವಣ್ಣನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಂಸದ ತೇಜಸ್ವಿಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ಅವರು ತೆಪ್ಪೋತ್ಸವ ಉದ್ಘಾಟಿಸಿದರು.
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಕರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಂತು ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಹೂಗಳಿಂದ ವಿಶೇಷ ಪೂಜೆ ನೆರವೇರಿದ ಬಳಿಕ ತೆಪ್ಪೋತ್ಸವದಲ್ಲಿ ನಂದಿ ವಿಗ್ರಹ ರಾರಾಜಿಸಿತು. ನೆರೆದಿದ್ದ ಸಹಸ್ರಾರು ಜನರು ಪ್ರಾರ್ಥನೆ ಸಲ್ಲಿಸಿದರು.

ತೆಪ್ಪದಲ್ಲಿ ಉತ್ಸವ ಮೂರ್ತಿ ನಂದಿ, ತೇರಿನ ರೀತಿಯಲ್ಲಿ ಮಾಡಲಾಗಿದ್ದ ದೇವರ ಮಂಟಪವನ್ನು ತರಹೇವಾರಿ ಹೂಗಳಿಂದ ಸಿದ್ದಗೊಳಿಸಲಾಗಿತ್ತು. ಅದರ ಮುಂದೆ ನಂದಿ ವಿಗ್ರಹನಿಟ್ಟು ಉತ್ಸವ ನಡೆಸಲಾಯಿತು. ದಶಕದ ಹಿಂದೆ ಇದೇ ರೀತಿ ತೆಪ್ಪೋತ್ಸವ ಜರುಗುತ್ತಿತ್ತು. ಆದರೆ ಮಳೆ ಇಲ್ಲದೇ ಕೆರೆ ತುಂಬಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿದ್ದು, ಕೆರೆ ತುಂಬಿಕೊಂಡಿದೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿ ತೆಪ್ಪೋತ್ಸವಕ್ಕೆ ನಿರ್ಧರಿಸಿತು.
ಬುಧವಾರದವರೆಗೆ ಕಡಲೆಕಾಯಿ ಪರಿಷೆ
ಭಾನುವಾರ ಆರಂಭವಾದ ಪರಿಷೆಯಲ್ಲಿ ಈವರೆಗೂ ಜನಸಾಗರವೇ ಕಂಡು ಬರುತ್ತಿದೆ. ಸೋಮವಾರ ಸಂಜೆ ನಂತರ ನಡೆದ ತೆಪ್ಪೋತ್ಸವಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಜನರು ತಂಡೋಪತಂಡವಾಗಿ ಕೆರೆಯತ್ತ ಆಗಮಿಸಿದರು. ಇದಕ್ಕು ಮೊದಲು ದೊಡ್ಡಗಣೇಶ ಗುಡಿ ಸುತ್ತಮುತ್ತ ಕಡಲೆಕಾಯಿ ಪರಿಷೆಯಲ್ಲಿ ದಿನ ವಿಡಿ ಸುತ್ತಾಡಿದರು. ಹುರಿದ ಹಾಗೂ ಹಸಿ ಕಡಲೆಕಾಯಿ ಸವಿದರು. ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್, ಎನ್.ಆರ್ ಕಾಲೋನಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರ ದಂಡೆ ಕಂಡು ಬಂತು.

ಕೊರೋನಾ ಕಾಟದಿಂದ ಕಳೆಗುಂದಿದ್ದ ಕಡಲೆಕಾಯಿ ಪರಿಷೆಗೆ ಈ ವರ್ಷ ಮೆರೆಗು ತಂದಿದೆ. ಲಕ್ಷಾಂತರ ಜನ ಪರಿಷೆಗೆ ಆಗಮಿಸಿದ್ದಾರೆ. ಹತ್ತಾರು ಜಿಲ್ಲೆಗಳು, ನೆರೆ ರಾಜ್ಯಗಳಿಂದ ಕಡಿಲೆಕಾಯಿ ಮೂಟೆಗಳು ಬಸವನಗುಡಿಗೆ ಬಂದಿವೆ. ಜನ ಮುಗಿಬಿದ್ದು ಖರೀದಿಸಿದ್ದಾರೆ. ನವೆಂಬರ್ 21ರಂದು ಆರಂಭವಾದ ಈ ಪರಿಷೆ ಬುಧವಾರ ನವೆಂಬರ್ 23ರ ವರೆಗೆ ನಡೆಯಲಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications