ಕಡಲೆಕಾಯಿ ಪರಿಷೆ: 10 ವರ್ಷದ ಬಳಿಕ 'ಬಸವಣ್ಣನ ತೆಪ್ಪೋತ್ಸವ'ದ ಮೆರಗು
ಬೆಂಗಳೂರು, ನವೆಂಬರ್ 22: ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಇದೀಗ ಮತ್ತೊಂದು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಪರಿಷೆ ಹಿನ್ನೆಲೆಯಲ್ಲಿ ಬಸವನಗುಡಿಗೆ ಹೊಂದಿಕೊಂಡಿರುವ ಕೆರೆಯಲ್ಲಿ ಹತ್ತು ವರ್ಷದ ಬಳಿಕ ಬಸವಣ್ಣನ ತೆಪ್ಪೋತ್ಸವ ನಡೆಯಿತು.
ಬಸವನಗುಡಿಗೆ ಹೊಂದಿಕೊಂಡಂತಿರುವ ಚಾಮರಾಜಪೇಟೆ ವ್ಯಾಪ್ತಿಯ ಕೆಂಪಾಂಬುದಿ ಕೆರೆಯಲ್ಲಿ ಬಸವಣ್ಣ ಮೂರ್ತಿಯ ತೆಪ್ಪೋತ್ಸವವು ಸೋಮವಾರ ನಡೆಯಿತು. ಇದಕ್ಕು ಮೊದಲು ಅರ್ಚಕರು ಬಸವಣ್ಣನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಂಸದ ತೇಜಸ್ವಿಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ಅವರು ತೆಪ್ಪೋತ್ಸವ ಉದ್ಘಾಟಿಸಿದರು.
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಕರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಂತು ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಹೂಗಳಿಂದ ವಿಶೇಷ ಪೂಜೆ ನೆರವೇರಿದ ಬಳಿಕ ತೆಪ್ಪೋತ್ಸವದಲ್ಲಿ ನಂದಿ ವಿಗ್ರಹ ರಾರಾಜಿಸಿತು. ನೆರೆದಿದ್ದ ಸಹಸ್ರಾರು ಜನರು ಪ್ರಾರ್ಥನೆ ಸಲ್ಲಿಸಿದರು.

ತೆಪ್ಪದಲ್ಲಿ ಉತ್ಸವ ಮೂರ್ತಿ ನಂದಿ, ತೇರಿನ ರೀತಿಯಲ್ಲಿ ಮಾಡಲಾಗಿದ್ದ ದೇವರ ಮಂಟಪವನ್ನು ತರಹೇವಾರಿ ಹೂಗಳಿಂದ ಸಿದ್ದಗೊಳಿಸಲಾಗಿತ್ತು. ಅದರ ಮುಂದೆ ನಂದಿ ವಿಗ್ರಹನಿಟ್ಟು ಉತ್ಸವ ನಡೆಸಲಾಯಿತು. ದಶಕದ ಹಿಂದೆ ಇದೇ ರೀತಿ ತೆಪ್ಪೋತ್ಸವ ಜರುಗುತ್ತಿತ್ತು. ಆದರೆ ಮಳೆ ಇಲ್ಲದೇ ಕೆರೆ ತುಂಬಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿದ್ದು, ಕೆರೆ ತುಂಬಿಕೊಂಡಿದೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿ ತೆಪ್ಪೋತ್ಸವಕ್ಕೆ ನಿರ್ಧರಿಸಿತು.
ಬುಧವಾರದವರೆಗೆ ಕಡಲೆಕಾಯಿ ಪರಿಷೆ
ಭಾನುವಾರ ಆರಂಭವಾದ ಪರಿಷೆಯಲ್ಲಿ ಈವರೆಗೂ ಜನಸಾಗರವೇ ಕಂಡು ಬರುತ್ತಿದೆ. ಸೋಮವಾರ ಸಂಜೆ ನಂತರ ನಡೆದ ತೆಪ್ಪೋತ್ಸವಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಜನರು ತಂಡೋಪತಂಡವಾಗಿ ಕೆರೆಯತ್ತ ಆಗಮಿಸಿದರು. ಇದಕ್ಕು ಮೊದಲು ದೊಡ್ಡಗಣೇಶ ಗುಡಿ ಸುತ್ತಮುತ್ತ ಕಡಲೆಕಾಯಿ ಪರಿಷೆಯಲ್ಲಿ ದಿನ ವಿಡಿ ಸುತ್ತಾಡಿದರು. ಹುರಿದ ಹಾಗೂ ಹಸಿ ಕಡಲೆಕಾಯಿ ಸವಿದರು. ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್, ಎನ್.ಆರ್ ಕಾಲೋನಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರ ದಂಡೆ ಕಂಡು ಬಂತು.

ಕೊರೋನಾ ಕಾಟದಿಂದ ಕಳೆಗುಂದಿದ್ದ ಕಡಲೆಕಾಯಿ ಪರಿಷೆಗೆ ಈ ವರ್ಷ ಮೆರೆಗು ತಂದಿದೆ. ಲಕ್ಷಾಂತರ ಜನ ಪರಿಷೆಗೆ ಆಗಮಿಸಿದ್ದಾರೆ. ಹತ್ತಾರು ಜಿಲ್ಲೆಗಳು, ನೆರೆ ರಾಜ್ಯಗಳಿಂದ ಕಡಿಲೆಕಾಯಿ ಮೂಟೆಗಳು ಬಸವನಗುಡಿಗೆ ಬಂದಿವೆ. ಜನ ಮುಗಿಬಿದ್ದು ಖರೀದಿಸಿದ್ದಾರೆ. ನವೆಂಬರ್ 21ರಂದು ಆರಂಭವಾದ ಈ ಪರಿಷೆ ಬುಧವಾರ ನವೆಂಬರ್ 23ರ ವರೆಗೆ ನಡೆಯಲಿದೆ.
-
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ











Click it and Unblock the Notifications