ದಿ. ಮಧುಕರಶೆಟ್ಟಿ ನೆನಪು ಉಳಿಸಲು ಧ್ವನಿಯೆತ್ತಿದ ಹಿರಿಯ ಪತ್ರಕರ್ತ
ಬೆಂಗಳೂರು, ಡಿಸೆಂಬರ್ 25: ರಾಜ್ಯ ಕಂಡ ಅತ್ಯಂತ ದಕ್ಷ ಅಧಿಕಾರಿ ದಿ. ಮಧುಕರಶೆಟ್ಟಿ ಅವರ ನೆನಪು ಶಾಶ್ವತವಾಗಿ ಉಳಿಸುವ ಪ್ರಯತ್ನಕ್ಕೆ ಹಿರಿಯ ಪತ್ರಕರ್ತ ರಾಘವೇಂದ್ರ ಭಟ್ ಧ್ವನಿ ಎತ್ತಿದ್ದಾರೆ. ವರ್ತೂರಿನ ಕೋಡಿ ಸಮೀಪದ ಸರ್ಕಲ್ ಗೆ ದಿ. ಮಧುಕರಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡುವ ಬಿಬಿಎಂಪಿ ಪ್ರಸ್ತಾವನೆಗೆ ಬಿಬಿಎಂಪಿ ಕೌನ್ಸಿಲ್ ಸಭೆ ತೀರ್ಮಾನಿಸಿತ್ತು. ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು . ಯಡಿಯೂರಪ್ಪ ನೇತೃತ್ವದ ಸರಕಾರ ಈ ಪ್ರಸ್ತಾಪವನ್ನು ಕಾರಣವಿಲ್ಲದೇ ನಿರಾಕರಿಸಿದೆ.
ಈ ಬಗ್ಗೆ ವಾಸ್ತವ ಅಂಶಗಳನ್ನು ಉಲ್ಲೇಖಿಸಿ ಪತ್ರಕರ್ತ ರಾಘವೇಂದ್ರ ಭಟ್ ಸಾಮಾಜಿಕ ಜಾಲ ತಾಣದಲ್ಲಿ ಪುಟ್ಟ ಆಂದೋಲನ ಆರಂಭಿಸಿದ್ದಾರೆ. ಅವರ ಆಂದೋಲನ ಪತ್ರದ ಸಾರಾಂಶ ಹೀಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರಕ್ಕೆ ಲೋಕಾಯುಕ್ತ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಮಧುಕರ ಶೆಟ್ಟಿ ಸಿಂಹ ಸ್ವಪ್ನರಾಗಿದ್ದರು. ಬಿಎಸ್ವೈ ಸರಕಾರದ ಅವಧಿಯಲ್ಲಿ ನಡೆದ ಕೆಐಎಡಿಬಿ ಭೂ ಹಗರಣವನ್ನು ಪತ್ತೆ ಹಚ್ಚಿ ಅಂದಿನ ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಜೈಲಿಗೆ ಅಟ್ಟಿದ್ದರು. ಲೋಕಾಯುಕ್ತ ಸಂತೋಷ್ ಹೆಗ್ಡೆ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆ ತನಿಖೆಯ ಮುಂಚೂಣಿಯಲ್ಲಿ ನಿಂತು ರಾಜ್ಯದ ಖನಿಜ ಸಂಪತ್ತು ನುಂಗಿದವರ ಗಂಟಲು ಒತ್ತಿದ್ದರು.

ಯಡಿಯೂರಪ್ಪನವರನ್ನು ಈಗಲೂ ಬೆಂಬಿಡದ ಭೂತದಂತೆ ಕಾಡುತ್ತಿರುವ ಅಕ್ರಮ ಡಿನೋಟಿಫಿಕೇಶನ್ ಪ್ರಕರಣ ಪತ್ತೆ ಹಚ್ಚಿ ಕೋಳ ಬೀಳುವಂತೆ ಮಾಡಿದ್ದೇ ಮಧುಕರ ಶೆಟ್ಟಿ. ಬಿಜೆಪಿ ಶಾಸಕ ಸಂಪಂಗಿಯನ್ನು ಲಂಚ ಸ್ವೀಕರಿಸುತ್ತಿರುವಾಗಲೇ ಶಾಸಕರ ಭವನದಲ್ಲೊ ಬಂಧಿಸಿ ಜೈಲಿಗೆ ದಬ್ಬಿದ್ದೇ ಮಧುಕರ ಶೆಟ್ಟಿ. ಅವರು ಕರ್ನಾಟಕದ ಆತ್ಮಸಾಕ್ಷಿಯಂತೆ ಇದ್ದವರು. ಪೊಲೀಸ್ ಅಧಿಕಾರಿಯಾದರೂ ಸಮಾಜದ ಬಗ್ಗೆ ಅವರಿಗೆ ಇದ್ದ ಕಾಳಜಿ ಅನುಕರಣೀಯ.

ಪೊಲೀಸ್ ಇಲಾಖೆಯಲ್ಲಿ ಇನ್ನಷ್ಟು ಮೇರು ಸ್ಥಾನಗಳನ್ನು ಏರಿ ರಾಜ್ಯದ ಜನರ ಸೇವೆ ಮಾಡಬೇಕಿದ್ದ ಮಧುಕರ್ ಶೆಟ್ಟರನ್ನು ವಿಧಿ ಬಹುಬೇಗ ತನ್ನೆಡೆಗೆ ಕರೆಸಿಕೊಂಡಿತು. ಅಂಥ ಧೀಮಂತ ಪೊಲೀಸ್ ಅಧಿಕಾರಿಯ ಸ್ಮರಣೆಗಾಗಿ ಬೆಂಗಳೂರಿನ ವೃತ್ತವೊಂದಕ್ಕೆ ಅವರ ಹೆಸರು ಇಡಲು ಹೊರಟರೆ, ಯಡಿಯೂರಪ್ಪನವರು ತಮ್ಮ ಪೂರ್ವದ್ವೇಷವನ್ನು ಈಗ ಕಕ್ಕಿಕೊಂಡಿದ್ದಾರೆ.
Recommended Video

ಕಾಂಜಿಪೀಂಜಿಗಳ ಹೆಸರನ್ನು ಊರ ತುಂಬಾ ಇಡುವುದಕ್ಕೆ ಉದಾರತೆ ತೋರುವ ನಿಮಗೆ ಸತ್ತ ವ್ಯಕ್ತಿಯ ಮೇಲೆ ಇಷ್ಟೊಂದು ದ್ವೇಷವೇ ? ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮಿಂದ ಇಂಥ ನಡೆ ನಿರೀಕ್ಷಿಸಿರಲಿಲ್ಲ. ಮಧುಕರ ಶೆಟ್ಟಿ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ವೃತ್ತಕ್ಕೆ ಹೆಸರಿಟ್ಟು ಜ್ಞಾಪಿಸುವ ಅಗತ್ಯವಿರಲಿಲ್ಲ. ಆದರೆ ಸರಕಾರದ ದ್ವೇಷಪೂರಿತ ನಡೆ ಖಂಡಿಸಲೇಬೇಕು. ನಗರಾಭಿವೃದ್ಧಿ ಇಲಾಖೆ ನಿರಾಕರಿಸಿರುವ ವೃತ್ತಕ್ಕೆ ಮಧುಕರ ಶೆಟ್ಟಿ ಹೆಸರಿಡಲೇಬೇಕು. ಇದಕ್ಕಾಗಿ ಬಲವಾಗಿ ಆಗ್ರಹಿಸೋಣ ಎಂದು ಕೋರಿದ್ದಾರೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications