ಜೆಎನ್ವಿ ಹಳೆ ವಿದ್ಯಾರ್ಥಿಗಳ ಸಭೆ, ಅರ್ಥಪೂರ್ಣ ಆಚರಣೆಗೆ ಬನ್ನಿ
ಬೆಂಗಳೂರು, ಮೇ 17: ರಾಜ್ಯದ ಎಲ್ಲೆಡೆ ಇರುವ ಜವಾಹರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಈ ಬಾರಿ ಬೆಂಗಳೂರಿನಲ್ಲಿ ಮೇ 22ರಂದು ಆಚರಿಸಲಾಗುತ್ತಿದೆ. ಈ ಸಮ್ಮಿಲನವನ್ನು ಜೆಎನ್ವಿ ಅಲುಮ್ನಿ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ.
ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಭಾರತ ಸರಕಾರವು ಜವಾಹರ ನವೋದಯ ವಿದ್ಯಾಲಯವನ್ನು ದೇಶದ ಪ್ರತಿ ಜಿಲ್ಲೆಯಲ್ಲೂ ಪ್ರಾರಂಭಿಸಿತು.
ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಅರ್ಹ ವಿದ್ಯಾರ್ಥಿಗಳಿಗೆ, 6ನೇ ತರಗತಿಯಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ಮತ್ತು ವಸತಿ ನೀಡಲಾಗುತ್ತದೆ. ಈ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಈಗ ಸಮಾಜದ ಉನ್ನತ ಸ್ಥಾನಕ್ಕೇರಿರುವರಲ್ಲದೆ, ಅವರ ಸಾಮಾಜಿಕ ಕಳಕಳಿ, ಪ್ರಾಮಾಣಿಕತೆ ಮತ್ತು ಸಮರ್ಪಣೆಗೆ ಹೆಸರು ಮಾಡಿದ್ದಾರೆ. ತಾವಿದ್ದ ಮೂಲ ಮತ್ತು ನಡೆದು ಬಂದ ದಾರಿಯನ್ನು ಮರೆಯದೆ, ನೈತಿಕತೆಯಿಂದ ಮುಂದೆ ಸಾಗುತ್ತಾರೆ.[ಅವಿರತ ಟ್ರಸ್ಟ್ ನಿಂದ ರಕ್ತದಾನಕ್ಕಾಗಿ ಆಂಡ್ರಾಯ್ಡ್ ಅಪ್ಲಿಕೇಷನ್]

ಬೆಂಗಳೂರಿನಲ್ಲಿ ವಾಸಿಸಿರುವ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನವನ್ನು ಮೇ 22 ರಂದು ಭಾನುವಾರ ಎಚ್ ಎ ಎಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ. ಸಮಾಜಕ್ಕೆ ತಾವು ಏನನ್ನಾದರೂ ವಾಪಸ್ಸು ಕೊಡಬೇಕುನ್ನುವ ಸಂಕಲ್ಪದಿಂದ, ಅಂಗದಾನ ಮತ್ತು ರಕ್ತದಾನ ಶಿಬಿರವನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತಿದೆ.
ಈ ರೀತಿಯಾಗಿ ಸಮಾಜದಲ್ಲಿ ಇದರ ಬಗ್ಗೆ ಜಾಗ್ರತಿ ಮೂಡಿಸಿ ಸಮಾಜ ಬದಲಾವಣೆಗೆ ನಾಂದಿಯಾಗಬೇಕೆನ್ನುವದು ಇವರಾಸೆ. ಭಾರತದಲ್ಲಿ ಪ್ರತಿ ದಿನ 6,000 ಜನರು ಅಂಗಗಳ ಕಸಿಗೆ ಕಾಯುತ್ತಲೇ ಸಾವನ್ನಪ್ಪುತ್ತಾರೆ.
ಪ್ರತಿ 13 ನಿಮಿಷಕ್ಕೆ ಒಬ್ಬ ಅಂಗಾಂಗಗಳ ಕಸಿಯ ಕಾಯುವ ಲಿಸ್ಟ್ ಗೆ ಸೇರುತ್ತಾನೆ. ಅಂಗಾಂಗಗಳ ಬೇಡಿಕೆ ತುಂಬಾ ಇದೆ. ಅಂಗಾಂಗಗಳನ್ನು ಸ್ವರ್ಗಕ್ಕೆ ಕೊಂಡೊಯ್ಯೋ ಬದಲು, ಸ್ವರ್ಗವನ್ನು ಇಲ್ಲಿಯೇ ಸೃಷ್ಟಿಸಿ. ಅದೇ ತರಹ ಪ್ರತಿ ವರ್ಷ ನಮ್ಮ ದೇಶದಲ್ಲಿ 4 ಕೋಟಿ ರಕ್ತ ಪ್ಯಾಕೆಟ್ ಬೇಕಾಗಿದ್ದರೆ, 40 ಲಕ್ಷ ಪ್ಯಾಕೆಟ್ ಮಾತ್ರ ಲಭ್ಯವಿದೆ. ರಕ್ತದಾನ ಜೀವದಾನ. ರಕ್ತಕ್ಕೆ ಯಾವುದೇ ಬದಲಿ ಪದಾರ್ಥವಿಲ್ಲ. ರಕ್ತ ಯಾವುದೇ ಕಾರ್ಖಾನೆಯಲ್ಲಿ ಉತ್ಪಾದನೆ ಯಾಗುವದಿಲ್ಲ. ಇದು ದಾನಿಗಳಿಂದ ಮಾತ್ರ ಬರಲು ಸಾಧ್ಯ.
ಪ್ರತಿ 2 ನಿಮಿಷಕ್ಕೆ ಯಾರಿಗೋ ರಕ್ತ ಬೇಕು. ದಿನ 38,000ಕ್ಕಿಂತಲೂ ಮೇಲ್ಪಟ್ಟು ದಾನಿಗಳ ಅವಶ್ಯಕತೆ ಇದೆ.ನಾವು ಸಾವಿರಾರು ಬೆಂಗಳೂರಲ್ಲಿ ಎಲ್ಲ ಕಡೆ ಹರಡಿದ್ದೇವೆ. ಒಂದು ಸಾರಿ ಎಲ್ಲ ನವೊದಯನ್ಸ್ ಕನೆಕ್ಟ್ ಆದ್ರೆ, ಬೆಂಗಳೂರಿನ ಅಭಿವೃದ್ಧಿಗೆ ನಮ್ಮದೇ ಟಾಸ್ಕ್ ಫೋರ್ಸ್ ಮಾಡುವ ಯೋಚನೆ ಇದೆ.
ನಮ್ಮ ಮುಂದಿನ ಆದ್ಯತೆಗಳು - ಕೆರೆ ಉಳಿಸುವಿಕೆ, ಪರಿಸರ ಸಂರಕ್ಷಣೆ, ಟ್ರಾಫಿಕ್ ನಿಯಂತ್ರಣ, ಕಸ ವಿಲೇವಾರಿ ಮತ್ತು ಮಳೆ ನೀರ ಸಂರಕ್ಷಣೆ ಇದನ್ನೆಲ್ಲಾ ದೊಡ್ಡ ಪ್ರಮಾಣದಲ್ಲಿ ಮಾಡಿದ್ರೆ, ಸಮಾಜದ ಬದಲಾವಣೆ ಮಾಡಲು ಅನುಕೂಲ ಆಗುವದು. ನಮ್ಮ ಕನಸ್ಸನ್ನು ನನಸಾಗಿಸಲು ನೀವೆಲ್ಲ ದಯಮಾಡಿ ಕೈಜೋಡಿಸಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಸತೀಶ್ ಕೆ.ಟಿ : 98800 86300,ಡಾ. ರಾಜಶೇಖರ್ 98863 49019.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?












Click it and Unblock the Notifications