ಬೇಗೂರಿನಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷ, ಜನತೆಗೆ ಆತಂಕ
ಬೆಂಗಳೂರು,ಜನವರಿ 27: ಬೇಗೂರಿನಲ್ಲಿ ಮತ್ತೊಂದು ಚಿರತೆ ಇದೆಯೇ ಎಂಬ ಆತಂಕ ಶುರುವಾಗಿದೆ.ಎನ್.ಬೇಗೂರು ದಕ್ಷಿಣ ವ್ಯಾಪ್ತಿಯ ಪ್ರೆಸ್ಟೀಜ್ ಸಂಗ್ ಪ್ರದೇಶದಲ್ಲಿ ಮತ್ತೊಂದು ಚಿರತೆ ಇದೆೇ ಎಂಬ ಅನುಮಾನ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮೂಡಿದೆ.
Recommended Video
ಬೇಗೂರಿನಲ್ಲಿ ಪತ್ತೆಯಾದ ಚಿರತೆಯೋ ಅಥವಾ ಮತ್ತೊಂದು ಚಿರತೆಯೋ ಎಂಬ ಗೊಂದಲ ಅರಣ್ಯ ಇಲಾಖೆ ಗೆ ಮೂಡಿದೆ.
ಈ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತು ಕಾಣಿಸಿದೆ, ಹುಳಿಮಾವು ಕೆರೆಯ ಸುಮಾರು 500 ಮೀಟರ್ ದೂರದಲ್ಲಿರುವ ಹಿರನಂದನಿ ಅಪಾರ್ಟ್ ಮೆಂಟ್ ಬಳಿ, ಹೆಜ್ಡೆ ಗುರುತು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.

ಚಿರತೆ ಈ ಪ್ರದೇಶವನ್ನು ದಾಟಿರುವುದನ್ನು ನೋಡಿದ ಸಾಕ್ಷಿಗಳಿಲ್ಲದ ಕಾರಣ ಎರಡು ಚಿರತೆಗಳು ಇರುವ ಸಾಧ್ಯತೆಗಳ ಬಗ್ಗೆ ಅನುಮಾನಗಳು ಕೇಳಿಬರುತ್ತಿವೆ ಮತ್ತು ನಮಗೆ ಇನ್ನೂ ಯಾವುದೇ ಟ್ರ್ಯಾಕ್ ಗುರುತು ಕಂಡುಬಂದಿಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಪಾರ್ಟ್ ಮೆಂಟ್ ಬಳಿ ಇರುವ ಸಿಸಿಟಿವಿಯಲ್ಲಿ ಚಿರತೆ ದೃಶ್ಯ ಸೆರೆಯಾಗದ ಕಾರಣ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಚಿರತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳಿರುವ ಬಗ್ಗೆ ಅವರಿಗೆ ಯಾವುದೇ ದಾಖಲೆಯಿಲ್ಲ,
ಪ್ರಾಣಿಗಳನ್ನು ಪತ್ತೆಹಚ್ಚಲು ನಿಯೋಜಿಸಲಾದ ಡ್ರೋನ್ಗಳಿಂದ ಯಾವುದೇ ಪ್ರಯೋಜನವಾಗಲಿಲ್ಲ, ಹೆಜ್ಜೆ ಗುರುತುಗಳು ಹೊಂದಿಕೆಯಾಗುತ್ತಿವೆ.
ಚಿರತೆ ಪ್ರೆಸ್ಟೀಜ್ ಅಪಾರ್ಟ್ಮೆಂಟ್ಗಳ ಬಳಿ ಖಾಲಿ ಇರುವ ಸ್ಥಳಗಳನ್ನು ದಾಟಿ, ಹಿರಾನಂದಾನಿ ಅಪಾರ್ಟ್ಮೆಂಟ್ಗಳನ್ನು ದಾಟಿ ಬಿಎನ್ಪಿ ಕಡೆಗೆ ಹೋಗಿರಬಹುದೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications