ವಸಂತಪುರದ 'ಕಲ್ಯಾಣಿ' ಚೆಂದ ಮಾಡಿ, ಸರ್ಕಾರಕ್ಕೆ ಕೊಟ್ಟ ಇನ್ಫೋಸಿಸ್
ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರು ದಕ್ಷಿಣದ ಉತ್ತರಹಳ್ಳಿ ಹೋಬಳಿಯ ವಸಂತಪುರದ ವಸಂತ ವಲ್ಲಭರಾಯ ಸ್ವಾಮಿ ದೇಗುಲದ ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸಲಾಗಿದೆ.
ಈ ಕಲ್ಯಾಣಿಯನ್ನು ಚೆಂದ ಕಾಣಿಸಿದ ಇನ್ಫೋಸಿಸ್ ಫೌಂಡೇಶನ್, ಇಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಯಿತು.
ಉತ್ತರಹಳ್ಳಿ ಮುಖ್ಯರಸ್ತೆ ಸರ್ವೇ 21ರಲ್ಲಿರುವ ವಸಂತ ವಲ್ಲಭರಾಯ ಸ್ವಾಮಿ ದೇವಸ್ಥಾನದ ಶಿಥಿಲಾವಸ್ಥೆಯಲ್ಲಿತ್ತು. ಚೋಳರ ಕಾಲದ ಈ ಐತಿಹಾಸಿಕ ಕಲ್ಯಾಣಿಗೆ ಹೊಸರೂಪ ನೀಡುವಲ್ಲಿ ಇನ್ಫೋಸಿಸ್ ಫೌಂಡೇಶನ್ ಕೊಡುಗೆ ಅಪಾರ. ಆದರೆ, ಈಗ ಮುಜರಾಯಿ ಇಲಾಖೆಯು ಇನ್ಮುಂದೆ ಈ ಕಲ್ಯಾಣಿಯನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕಿದೆ.
1980ರ ತನಕ ಕಲ್ಯಾಣಿಯ ನೀರು ಅಕ್ಕಪಕ್ಕದ ಗ್ರಾಮಸ್ಥರಿಗೆ, ದನ ಕರು, ಜಾನುವಾರುಗಳಿಗೆ ಆಸರೆಯಾಗಿತ್ತು. ಇದೆ ಕಲ್ಯಾಣಿಯ ನೀರನ್ನು ಬಳಸಿ ವಸಂತ ವಲ್ಲಭ ಸ್ವಾಮಿ, ಪಕ್ಕದಲ್ಲಿರುವ ಶಿವ, ಆಜಂನೇಯ ದೇಗುಲದ ಅಭಿಷೇಕ, ಇತರೆ ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಆದರೆ, ನಗರ ಬೆಳೆದಂತೆ ಈ ಭಾಗದಲ್ಲಿ ವಸತಿ ಸಮುಚ್ಚಯ, ಕೈಗಾರಿಕಾ ಘಟಕಗಳು ಹೆಚ್ಚಾಗಿ, ಕಲ್ಯಾಣಿಯ ನೀರು ಹಾಳಾಗಿತ್ತು.

ವಸಂತಪುರ ಸ್ಥಳ ಪುರಾಣ ಹಿನ್ನಲೆ
ಮಾರ್ಕಂಡೇಯ ಋಷಿಗಳು ಇಲ್ಲಿನ ದೇಗುಲ ಹಾಗೂ ಕಲ್ಯಾಣಿಯನ್ನು ಕಟ್ಟಿಸಿದರು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.
ವಿಷ್ಣುವಿನ ಅವತಾರವಾದ ವಲ್ಲಭರಾಯ ಸ್ವಾಮಿ ಲಕ್ಷ್ಮೀ ದೇವಿಯನ್ನು ವಿವಾಹವಾಗುವ ಮುನ್ನ ಇಲ್ಲಿನ ಎರಡು ತೀರ್ಥಗಳಲ್ಲಿ ಸ್ನಾನ ಮಾಡಿದ್ದರಿಂದ ಈ ತೀರ್ಥಗಳನ್ನು ಪವಿತ್ರ ತೀರ್ಥಗಳು ಎಂದು ನಂಬಲಾಗಿದೆ. ಸದ್ಯಕ್ಕೆ ಒಂದೇ ಒಂದು ಕಲ್ಯಾಣಿ ಇದ್ದು, ಈಗ ಸುಸ್ಥಿತಿಗೆ ಬಂದಿದೆ.

ಐತಿಹಾಸಿಕವಾಗಿ ವಸಂತಪುರದ ಕಲ್ಯಾಣಿ
ಚೋಳರ ಕಾಲದಲ್ಲಿ (1004-11116 ಕ್ರಿ.ಶ) ದಲ್ಲಿ ಕಟ್ಟಿರುವ ಈ ದೇವಸ್ಥಾನ ಹಾಗೂ ಕಲ್ಯಾಣಿ ಈ ಭಾಗದಲ್ಲಿ ನಿತ್ಯ ಬಳಕೆಗೆ ಯೋಗ್ಯವಾಗಿತ್ತು. ಇಲ್ಲಿ ಶಿವಾಜಿ ಅವರ ತಂದೆ ಶಾಜೀ ಬೋಂಸ್ಲೆ ಕೂಡಾ ತಂಗಿದ್ದ, ಕ್ರಿ.ಶ 1600ರ ನಂತರ ಬೆಂಗಳೂರಿನ ಮೇಲೆ ಅಧಿಪತ್ಯ ಸ್ಥಾಪಿಸಿದ ಮರಾಠರೇ ಈ ಕಲ್ಯಾಣಿಯನ್ನು ನಿರ್ಮಿಸಿದ್ದು ಎಂಬ ಇನ್ನೊಂದು ವಾದವಿದೆ.

ಕಲ್ಯಾಣಿಯ ವಿಸ್ತೀರ್ಣ, ಖರ್ಚು ವೆಚ್ಚ
7,075 ಚದರ ಮೀಟರ್ X 3,181 ಚದರ ಮೀ ಅಗಲ, 6 ಮೀ ಆಳದ ಈ ಕಲ್ಯಾಣಿ ಎಲ್ಲಾ ದಿಕ್ಕುಗಳಲ್ಲೂ ಮೆಟ್ಟಿಲುಗಳನ್ನು ಹೊಂದಿದ್ದು, ಅಕರ್ಷಕವಾಗಿದೆ. ಈ ಕಲ್ಯಾಣಿಯನ್ನು ಈಗಿನ ಸ್ಥಿತಿಗೆ ತರಲು ಸುಮಾರು 8 ಕೋಟಿ ರು ಖರ್ಚಾಗಿದೆ. ಉದ್ದೇಶಿತ ಬಜೆಟ್ ಗಿಂತ ಶೇ 60ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಣ ವ್ಯಯಿಸಲಾಗಿದೆ. ಮುಜರಾಯಿ ಇಲಾಖೆಯ ಗೊಂದಲವೇ ಇದಕ್ಕೆ ಕಾರಣ ಎಂದು ಇನ್ಫೋಸಿಸ್ ಫೌಂಡೇಶನ್ ಮೂಲಗಳು ಹೇಳಿವೆ.

ವಾಕಿಂಗ್ ಪಾಥ್ ಬೇಕು ಎಂದಿದ್ದು ಗೊಂದಲ ಮೂಡಿಸಿತ್ತು
ಸುಮಾರು 1 ಎಕರೆ 33 ಗುಂಟೆ ವಿಸ್ತೀರ್ಣದ ಕಲ್ಯಾಣಿಯ ಸುತ್ತಲೂ ವಾಕಿಂಗ್ ಪಾಥ್ ನಿರ್ಮಾಣಕ್ಕೆ ಇಲಾಖೆಯಿಂದ ಬೇಡಿಕೆ ಬಂದಿತ್ತು. ಆದರೆ, ಪುರಾತತ್ತ್ವ ಇಲಾಖೆ, ಸ್ಥಳೀಯರ ಪ್ರತಿರೋಧದಿಂದಾಗಿ ಹಳೆ ಯೋಜನೆಯಂತೆ ನಿರ್ಮಿಸಲಾಗಿದೆ. ಕಲ್ಯಾಣಿಯ ಜಾಗ ಒತ್ತುವರಿಯಾಗಿಲ್ಲ ಹಾಗೂ ಮೂಲ ಸ್ವರೂಪಕ್ಕೆ ಧಕ್ಕೆ ಉಂಟಾಗಿಲ್ಲ. ಕಲ್ಯಾಣಿ ಅಭಿವೃದ್ಧಿಯಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸ್ಪಷ್ಟಪಡಿಸಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications