ಬೆಂಗಳೂರಿನಲ್ಲಿ 63 ನೇ ಹೃದ್ರೋಗ ತಜ್ಞರ ಸಮ್ಮೇಳನಕ್ಕೆ ಚಾಲನೆ
ದೊಡ್ಡ ಕಾರ್ಡಿವಾಸ್ಕುಲರ್ ಮತ್ತು ಥೊರೋಟಿ ಸರ್ಜನ್ ಗಳ ಮಹಾಸಮ್ಮೇಳನ ಫೆಬ್ರವರಿ 23 ರಿಂದ 26 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ
ಬೆಂಗಳೂರು, ಫೆಬ್ರವರಿ 23, 2017: ಇಂಡಿಯನ್ ಅಸೋಸಿಯೇಶನ್ ಆಫ್ ಕಾರ್ಡಿವಾಸ್ಕುಲರ್ ಅಂಡ್ ಥೊರೋಟಿಕ್ ಸರ್ಜನ್ಸ್(ಐಎಸಿಟಿಎಸ್ ) ಒಂದು ದೊಡ್ಡ ಕಾರ್ಡಿವಾಸ್ಕುಲರ್ ಮತ್ತು ಥೊರೋಟಿ ಸರ್ಜನ್ ಗಳ ಮಹಾಸಮ್ಮೇಳನವಾಗಿದೆ. ಇದರಲ್ಲಿ ಪ್ರತಿವರ್ಷ ವಿಶ್ವದಾದ್ಯಂತದ ಉಪನ್ಯಾಸಕರು ಮತ್ತು ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ.
ಇದರ 63 ನೇ ಸಮ್ಮೇಳನ ಇಂದು (ಫೆಬ್ರವರಿ 23 ರಿಂದ 26 ರವರೆಗೆ) ಆರಂಭವಾಗಿದೆ. ಈ ಸಮ್ಮೇಳನವನ್ನು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಆರ್ ಪಾಟೀಲ್ ಅವರು ಉದ್ಘಾಟಿಸಿದರು.
'ಹೊಸ ಗಡಿಯನ್ನು ತಲುಪುವ, ನಮ್ಮ ಇಚ್ಛೆ, ನಿಮ್ಮ ಕೌಶಲ್ಯ' ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ವಾಣಿಜ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಸಮ್ಮೇಳನದಲ್ಲಿ ಉಪನ್ಯಾಸಗಳು, ಅತಿಥಿ ಉಪನ್ಯಾಸಗಳು, ಚರ್ಚೆಗಳು, ಸಂವಾದಗಳು ಮತ್ತು ಇತ್ತೀಚಿನ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಹತ್ತು ಹಲವಾರು ಚರ್ಚೆಗಳು ನಡೆಯುತ್ತಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಐಎಸಿಟಿಎಸ್ ಸಿಒಎನ್ ನ ಅಧ್ಯಕ್ಷ ಡಾ.ವಿವೇಕ್ ಜವಳಿ ಅವರು, 'ದೇಶದ ವಿವಿಧ ಭಾಗಗಳ 2000 ಕ್ಕೂ ಅಧಿಕ ಹೃದ್ರೋಗ ತಜ್ಞರು ಮತ್ತು ಎದೆರೋಗ ಶಸ್ತ್ರಚಿಕಿತ್ಸಕರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
ವೈದ್ಯಕೀಯ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಉಪನ್ಯಾಸಗಳು, ವೈದ್ಯಕೀಯ ಶಿಕ್ಷಣದ ಚರ್ಚೆಗಳು, ಸಂವಾದಗಳು ಮತ್ತು ಹೃದ್ರೋಗ ಚಿಕಿತ್ಸಾ ಪದ್ಧತಿಯ ಮಾರ್ಗಸೂಚಿಗಳ ಬಗ್ಗೆ ಈ ಸಮ್ಮೇಳನ ಬೆಳಕು ಚೆಲ್ಲಲಿದೆ. ಇದಲ್ಲದೇ, ಹೃದ್ರೋಗ ಶಸ್ತ್ರ ಚಿಕಿತ್ಸೆಗಳ ಬಗ್ಗೆಯೂ ಪ್ರಮುಖವಾಗಿ ಚರ್ಚೆಗಳು ನಡೆಯಲಿವೆ' ಎಂದು ತಿಳಿಸಿದರು.
ಐಎಸಿಟಿಎಸ್ ಸಿಒಎನ್ ನ ಸಂಘಟನಾ ಕಾರ್ಯದರ್ಶಿ ಡಾ.ಗಿರಿಧರ್ ಕಮಲಾಪೂರ್ಕರ್ ಅವರು ಮಾತನಾಡಿ, 'ಈ ವರ್ಷ ನಾವು 150 ಸಂಶೋಧನಾ ವರದಿಗಳು, 100 ಪೋಸ್ಟರ್ ಗಳನ್ನು ಸ್ವೀಕರಿಸಿದ್ದೇವೆ.
ಭಾರತೀಯ ಮೂಲದ ಹಿರಿಯ ಹೃದ್ರೋಗ ತಜ್ಞರನ್ನು ಒಂದೆಡೆ ಕರೆತರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಈ ಮೂಲಕ ಭಾರತದಲ್ಲಿ ಹೃದ್ರೋಗ ತಜ್ಞರ ಸಂಪರ್ಕ ಜಾಲವನ್ನು ಗಟ್ಟಿಗೊಳಿಸುವ ಗುರಿಯಿಟ್ಟುಕೊಂಡಿದ್ದೇವೆ.
ಇದು ಭಾರತಕ್ಕೆ ಒಂದು ಉತ್ತಮ ಲಾಭವಾಗಲಿದೆ. ಈ ಸಂದರ್ಭದಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಾದ ಮುಂಬೈನ ಡಾ. ರತ್ನ ಮಗೋತ್ರ ಮತ್ತು ಕೋಲ್ಕತ್ತಾದ ಡಾ.ಸುಶೀಲ ಶ್ರೀಪಾದ್ ಅವರನ್ನು ಸನ್ಮಾನಿಸಲಾಗುವುದು'' ಎಂದು ತಿಳಿಸಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ










Click it and Unblock the Notifications