Get Updates
Get notified of breaking news, exclusive insights, and must-see stories!

ಅರೆ, ಸಿ.ಟಿ.ರವಿ ಏಕೆ ಹೀಗಂದರು? ಬಹುಮತ ಸಾಬೀತು ಆಗಲ್ವಾ?

ಬೆಂಗಳೂರು, ಮೇ 18: ಬಿಜೆಪಿಯ ಯಾರೇ ಶಾಸಕರು, ಮುಖಂಡರನ್ನು ಮಾತನಾಡಿಸಿದರೂ ಹೇಳುತ್ತಿರುವುದು ಒಂದೇ ನಾವು ಬಹುಮತ ಸಾಬೀತು ಮಾಡಿಯೇ ತಿರುತ್ತೇವೆ ಎಂದು, ಆದರೆ ಸಿ.ಟಿ.ರವಿ ಮಾತ್ರ ಯಾಕೋ ಸ್ವಲ್ಪ ಭಿನ್ನವಾದ ಹೇಳಿಕೆ ನೀಡುತ್ತಿದ್ದಾರೆ ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಹೌದು, ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '1996ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಬಹುಮತ ಸಾಬೀತಾಗದಿದ್ದಾಗ ರಾಜಿನಾಮೆ ಕೊಟ್ಟು ಹೊರ ಹೊಗಿದ್ದರು, ಅದು ರಾಜಮಾರ್ಗ, ನಾವು ಆ ಮಾರ್ಗದಲ್ಲೇ ನಡೆಯುತ್ತೇವೆ' ಎಂದಿದ್ದಾರೆ.

ಯಡಿಯೂರಪ್ಪ, ಅನಂತ್‌ಕುಮಾರ್, ಶೋಭಾ ಕರಂದ್ಲಾಜೆ, ಈಶ್ವರಪ್ಪ ಎಲ್ಲರೂ ಖಂಡಿತ ಬಹುಮತ ಸಾಬೀತು ಮಾಡುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತಿರುವಾಗ ಸಿ.ಟಿ.ರವಿ ಅವರ ಈ ಹೇಳಿಕೆ ಅನುಮಾನ ಮೂಡಿಸಿದ್ದು, ನಾಳೆ ಬಹುಮತ ಸಾಬೀತಾಗದಿದ್ದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರೆಯೇ ಎಂಬ ಅನುಮಾನ ಮೂಡಿದೆ.

If we fail to prove majority we will resighn : CT Ravi

ಮುಂದುವರೆದು ಮಾತನಾಡಿರುವ ಸಿ.ಟಿ.ರವಿ ಅವರು, ಸಿದ್ದರಾಮಯ್ಯ ಅವರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಶಾಸಕರಿಂದ ಮತ ಹಾಕಿಸಿಕೊಂಡಿದ್ದರು ಆದರೆ ಈಗ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ' ಎಂದರು.

ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಎಂಬ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಹೇಳಿಕೆಗೆ ಸಿಟ್ಟಾದ ಸಿಟಿ ರವಿ, ಯಾವ ಶಾಸಕರಿಗೆ ಬೆದರಿಕೆ ಇದೆ ಎಂದು ಹೇಳಲಿ, ರಮ್ಯಾ ಅವರಿಗೆ ಬೆದರಿಕೆ ಇದ್ದರೂ ಹೇಳಲಿ ನಾನೇ ಭದ್ರತೆ ಕೊಡಿಸುತ್ತೇನೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+