ಗಾಯಕ ಯೇಸುದಾಸ್ ಬಿಚ್ಚಿಟ್ಟ ದೇವರ ಅನುಗ್ರಹ ಪಡೆಯುವ ರಹಸ್ಯ
ಏಪ್ರಿಲ್ 9ರಂದು ರಾಮಸೇವಾ ಮಂಡಳಿಯ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಗಾಯಕ ಯೇಸುದಾಸ್ ಅವರು ದೇವರ ಅನುಗ್ರಹ ಪಡೆಯುವ ರಹಸ್ಯವನ್ನು ಬಿಚ್ಚಿಟ್ಟರು. ಅವರು ಏನು ಹೇಳಿದರು ಅನ್ನೋದು ತಿಳಿಯುವುದಕ್ಕೆ ಈ ವರದಿ ಓದಿ
ಬೆಂಗಳೂರು, ಏಪ್ರಿಲ್ 11: ಎಪ್ಪತ್ತರ ಹರೆಯದ ಯೇಸುದಾಸ್ ಹತ್ತಿ ಬಿಳುಪಿನ ತಲೆಕೂದಲು, ಗಡ್ಡದಲ್ಲಿ ಋಷಿಗಳಂತೆ ಕಾಣುತ್ತಿದ್ದರು. ತಮ್ಮ ಸಂಗೀತವನ್ನು ಆ ದೇವರು ನೀಡಿದ ವರ ಎಂದರು. ದೇವರ ಬಗ್ಗೆ ಫಿಫ್ಟಿ-ಫಿಫ್ಟಿ ಇರಲೇಬಾರದು. ಶರಣಾಗತಿಯಾದವರಿಗೆ ಅವನ ಅನುಗ್ರಹ ಆಗುತ್ತದೆ. ಅದು ಶೇ 100ರಷ್ಟು ದೇವರಲ್ಲಿ ಭಕ್ತಿ ಇದ್ದಾಗ ಮಾತ್ರ ಎಂಬ ಅವರ ಮಾತಿಗೆ ಭಾರೀ ಚಪ್ಪಾಳೆ ಕೇಳಿಬಂತು.
ಭಾನುವಾರ ರಾಮಸೇವಾ ಮಂಡಳಿಯ ಸಂಗೀತ ಕಾರ್ಯಕ್ರಮದಲ್ಲಿ ಯೇಸುದಾಸ್ ಅವರ ಸಂಗೀತದಷ್ಟೇ ಮಾತು ಸಹ ಮೋಡಿ ಮಾಡಿತು. ತಮ್ಮ ತಂದೆಯ ಮಾತನ್ನು ಇದೇ ವೇಳೆ ಸ್ಮರಿಸಿದ ಅವರು, "ನೀನು ಓದದಿದ್ದರೂ ಪರವಾಗಿಲ್ಲ. ಒಳ್ಳೆ ಸಂಗೀತಗಾರನಾಗು ಅಂತ ನನ್ನ ತಂದೆಯವರು ಹೇಳದಿದ್ದರೆ ಇಂದು ಇಂಥ ಸಂಗೀತ ಅನುಗ್ರಹ ನನಗೆ ಆಗ್ತಿತ್ತಾ? ಯಾವ ತಂದೆ ಹೀಗೆ ಹೇಳ್ತಾರೆ? ಅಂಥ ತಂದೆಯೇ ನನಗೆ ಸಿಗಲಿ ಎಂಬುದು ಕೂಡ ಆ ಭಗವಂತನ ಅನುಗ್ರಹವೇ" ಎಂದರು ಯೇಸುದಾಸ್.[ಶ್ರೀರಾಮ ಸೇವಾ ಮಂಡಳಿ ಸಂಗೀತೋತ್ಸವ ಏಪ್ರಿಲ್ 5ರಿಂದ]

ರಾಗಗಳ ವೈಶಿಷ್ಟ್ಯದ ಬಗ್ಗೆ ಕೂಡ ತುಂಬ ಸೊಗಸಾದ ವಿವರಣೆ ನೀಡಿದರು ಯೇಸುದಾಸ್. ಇನ್ನು ಅವರ ಸಂಗೀತದ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯ ಖಂಡಿತಾ ಇಲ್ಲ. ಆದರೂ ಒಂದು ಮಾತು. ಸಾವಿರಾರು ಜನರಿದ್ದ ಆ ಸ್ಥಳದಲ್ಲಿ ಶಿಸ್ತು ಸಾಧ್ಯವೆ ಅನ್ನೋ ಪ್ರಶ್ನೆ ಮೂಡುವಂಥ ವಾತಾವರಣ ಮೊದಲಿಗೆ ಇತ್ತು. ಆದರೆ ಸಂಗೀತ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಮಾತು-ಮೊಬೈಲ್-ಹರಟೆ ಎಲ್ಲ ಬಂದ್.
-ಅದು ಸಂಗೀತ ಹಾಗೂ ಯೇಸುದಾಸ್ ಮಿಳಿತವಾದರೆ ಅಗಬಹುದಾದ ಜಾದೂ ಇರಬೇಕು. ಮೊನ್ನೆಯ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಹಾಗೂ ಅವರ ಪತ್ನಿ ಪ್ರೇಮಾ ಅವರು ಕೂಡ ಹಾಜರಿದ್ದರು. ಸಾವಿರಾರು ಜನರು ಕೂರಲು ಅವಕಾಶವಿದ್ದ ಸ್ಥಳದಲ್ಲೂ ಅದೆಷ್ಟೂ ಮಂದಿ ನಿಂತೇ ಸಂಗೀತ ಕೇಳಿದರು.[ರಾಮನವಮಿ ಕಛೇರಿ ಪಾನಕ ಕೋಸಂಬರಿಗಿಂತ ಸೂಪರ್!]

ತಮ್ಮ ಬದುಕಿನ ಪಾಠಗಳನ್ನೂ ಇಷ್ಟಿಷ್ಟಾಗಿ ಹಂಚಿಕೊಂಡ ಯೇಸುದಾಸ್, ಸರಸಿಜನಾಭ ಎಂಬ ಹಾಡಿನೊಂದಿಗೆ ಕಛೇರಿ ಆರಂಭಿಸಿದರು. ಮೊದಲಿಗೆ ಮೈಕ್ ಕಿರಿ-ಕಿರಿ ಮಾಡಿದಾಗ, ನಾವು ತಲುಪುವುದೇ ಮೈಕ್ ಮೂಲಕ. ಅದೇ ಹೀಗೆ ಕೈ ಕೊಟ್ಟರೆ ಹೇಗೆ ಅಂತ ತಮಾಷೆಯ ಧಾಟಿಯಲ್ಲಿ ಕೇಳುಗರ ಕಡೆ ನೋಡಿ ನಗೆ ಚೆಲ್ಲಿದರು.[ಯೇಸುದಾಸ್ ರಿಂದ ಕೊಲ್ಲೂರಿನಲ್ಲಿ ಚಂಡಿಕಾ ಹೋಮ, ಜನ್ಮ ದಿನಾಚರಣೆ]

ಅಂದಹಾಗೆ, ಪ್ರತಿ ವರ್ಷ ನಡೆಯುವ ಬೆಂಗಳೂರಿನ ರಾಮ ಸೇವಾ ಮಂಡಳಿಯ ಸಂಗೀತ ಕೈಂಕರ್ಯಕ್ಕೆ ದೇಶದಾದ್ಯಂತ ಹೆಸರಿದೆ. ಸಂಗೀತ ಕ್ಷೇತ್ರದ ಅತಿರಥ-ಮಹಾರಥರು ಇಲ್ಲಿ ತಮ್ಮ ಸೇವೆ ಸಲ್ಲಿಸುತ್ತಾರೆ. ಜತೆಗೆ ಹೊಸ ಸಂಗೀತಗಾರರಿಗೆ ವೇದಿಕೆ ಕೂಡ ಒದಗಿಸಲಾಗುತ್ತಿದೆ.

ಈ ವರ್ಷದ ರಾಮನವಮಿ ಉತ್ಸವ ಏಪ್ರಿಲ್ 5ರಿಂದಲೇ ಶುರುವಾಗಿದೆ. ಮೊದಲ ದಿನ ಬಾಂಬೆ ಜಯಶ್ರೀ ಅವರ ಸಂಗೀತ ಸುಧೆಯಿತ್ತು. ಆದರೆ ಪ್ರತಿ ವರ್ಷದಂತೆ ಯೇಸುದಾಸ್ ಅವರ ಸಂಗೀತ ಕಾರ್ಯಕ್ರಮ ಭಾನುವಾರ ಏಪ್ರಿಲ್ 9ರಂದು ಇತ್ತು. ಟಾಕು-ಠೀಕಾಗಿ 6.45ಕ್ಕೆ ಕಾರ್ಯಕ್ರಮ ಶುರುವಾಯಿತು.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications