ಕಳೆದ 6 ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಸಿಕ್ಕ ಹಣವೆಷ್ಟು ಗೊತ್ತಾ?

ಆರು ವರ್ಷಗಳಲ್ಲಿ ರಾಜ್ಯ ಸರ್ಕಾರವು ಬೆಂಗಳೂರಿಗೆ 28,356 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಅಂಕಿಅಂಶಗಳು ತಿಳಿಸಿವೆ.

ಬೆಂಗಳೂರು, ಫೆಬ್ರವರಿ 14: ಕಳೆದ ಆರು ವರ್ಷಗಳಿಂದ ರಾಜ್ಯ ಸರ್ಕಾರವು ಬೆಂಗಳೂರಿನ ಅಭಿವೃದ್ಧಿಗೆ ಅಥಾರ್ತ್‌ ಬಿಬಿಎಂಪಿಗೆ ಬೃಹತ್‌ ಪ್ರಮಾಣ ಹಣವನ್ನು ನೀಡಿದೆ. ಆದರೂ ಬೆಂಗಳೂರಿನಲ್ಲಿ ನಾಗರಿಕ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಆರು ವರ್ಷಗಳಲ್ಲಿ ರಾಜ್ಯ ಸರ್ಕಾರವು ಬೆಂಗಳೂರಿಗೆ 28,356 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಈ ಹಣದಲ್ಲಿ 60% ಕ್ಕಿಂತ ಹೆಚ್ಚು ಹಣವನ್ನು ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ಗಳ ನಿರ್ಮಾಣ ಸೇರಿದಂತೆ ರಸ್ತೆ ಕಾಮಗಾರಿಗೆ ಖರ್ಚು ಮಾಡಲಾಗಿದೆ. ಬಿಬಿಎಂಪಿ ಉದಾರವಾಗಿ ಖರ್ಚು ಮಾಡಿದ ಇತರ ಕ್ಷೇತ್ರಗಳೆಂದರೆ ಮಳೆನೀರು ಚರಂಡಿಗಳು ಮತ್ತು ಕಸ ವಿಲೇವಾರಿಯಾಗಿದೆ.

2016 ಮತ್ತು 2022ರ ನಡುವೆ ಬಿಬಿಎಂಪಿಗೆ ವೆಚ್ಚದ ಕ್ರೋಢೀಕೃತ ಅಂಕಿಅಂಶವನ್ನು ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಫೆಬ್ರವರಿ 17 ರಂದು ನಿಗದಿಪಡಿಸಿದ ರಾಜ್ಯ ಬಜೆಟ್‌ಗೆ ಮುಂಚಿತವಾಗಿ ಸಿದ್ಧಪಡಿಸಿದೆ. ಬೆಂಗಳೂರು ನಗರಕ್ಕೆ ಹೊಸ ಹಣವನ್ನು ಮಂಜೂರು ಮಾಡುವ ಮೊದಲು ಸರ್ಕಾರವು ಸಾಮಾನ್ಯವಾಗಿ ಹಿಂದಿನ ಹಂಚಿಕೆಗಳು ಮತ್ತು ಅವುಗಳ ಬಳಕೆಯನ್ನು ಪರಿಶೀಲಿಸುತ್ತದೆ. 28 ಕ್ಷೇತ್ರಗಳನ್ನು ಹೊಂದಿರುವ ನಗರಕ್ಕೆ ಎಷ್ಟು ಹಣ ಹರಿದುಬರಲಿದೆ ಎಂಬುದಕ್ಕೆ ಮುಂಬರುವ ವಿಧಾನಸಭೆ ಚುನಾವಣೆಯೂ ಪಾತ್ರವಾಗಲಿದೆ. ಈ ಪೈಕಿ ಬಹುತೇಕ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಉತ್ಸುಕವಾಗಿದೆ.

2016ರಿಂದ 2022 ರವರೆಗೆ ಬಿಡುಗಡೆಯಾದ ಅನುದಾನಗಳ ವಿಶ್ಲೇಷಣೆಯು ನಾಲ್ಕು ಬೇರೆ ಬೇರೆ ಮುಖ್ಯಮಂತ್ರಿಗಳ ಅಧಿಕಾರಾವಧಿಯಲ್ಲಿ ಬೆಂಗಳೂರು ದೊಡ್ಡ ಮೊತ್ತದ ಹಣವನ್ನು ಪಡೆದಿದೆ ಎಂದು ತಿಳಿಸಿದೆ. ಉದಾಹರಣೆಗೆ ಸಿದ್ದರಾಮಯ್ಯನವರ ಅವಧಿಯಲ್ಲಿ ಬೆಂಗಳೂರು ಒಟ್ಟು 9,791 ಕೋಟಿ ರೂ.ಗಳನ್ನು ಪಡೆದಿದ್ದು, ಅದರಲ್ಲಿ ಬಹುಪಾಲು 2018ರ ಚುನಾವಣೆಯ ವರ್ಷಕ್ಕೆ ಹತ್ತಿರವಾಗಿದೆ ಎಂದು ಡಿಎಚ್‌ ವರದಿ ಮಾಡಿದೆ.

ಎಚ್ ಡಿ ಕುಮಾರಸ್ವಾಮಿ ಅವರು 14 ತಿಂಗಳು ಸಿಎಂ ಆಗಿದ್ದಾಗ ನವ ನಗರೋತ್ಥಾನ ಯೋಜನೆಯಡಿ ಬೆಂಗಳೂರಿಗೆ 8,343 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಘೋಷಿಸಲಾದ ಕೆಲವು ಕಾರ್ಯಗಳನ್ನು ಸೆಪ್ಟೆಂಬರ್ 2019 ರಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಜೆಡಿ (ಎಸ್) ನಾಯಕನನ್ನು ಪದಚ್ಯುತಗೊಳಿಸಿದ ತಿಂಗಳುಗಳ ನಂತರ ಬದಲಾಯಿಸಲಾಯಿತು.

ಕಸ ವಿಲೇವಾರಿಗೆ ಪ್ರತ್ಯೇಕ 1,099 ಕೋಟಿ ಅನುದಾನ

ಕಸ ವಿಲೇವಾರಿಗೆ ಪ್ರತ್ಯೇಕ 1,099 ಕೋಟಿ ಅನುದಾನ

ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಡಿಯೂರಪ್ಪ ಅವರು ಶುದ್ಧ ಬೆಂಗಳೂರು ಯೋಜನೆಯಡಿ ಕಸ ವಿಲೇವಾರಿಗೆ ಪ್ರತ್ಯೇಕ 1,099 ಕೋಟಿ ರೂ. ಮತ್ತು ನಗರದ ಹೊರವಲಯದಲ್ಲಿ ನೀರು ಮತ್ತು ಒಳಚರಂಡಿ ಮಾರ್ಗಗಳನ್ನು ಹಾಕಲು ಅಗೆದ ರಸ್ತೆಗಳನ್ನು ಮರುಸ್ಥಾಪಿಸಲು ಮತ್ತೊಂದು ಬಾರಿ 1,000 ಕೋಟಿ ರೂ.ಗಳನ್ನು ನೀಡಿದ್ದರು.

ಬಿಬಿಎಂಪಿಗೆ 8,123 ಕೋಟಿ ಕೊಟ್ಟ ಬೊಮ್ಮಾಯಿ

ಬಿಬಿಎಂಪಿಗೆ 8,123 ಕೋಟಿ ಕೊಟ್ಟ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಅವರು ಆಡಳಿತ ಚುಕ್ಕಾಣಿ ಹಿಡಿದ ಸುಮಾರು ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ 8,123 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಅದರಲ್ಲಿ ಬಹುಪಾಲು (ರೂ. 6,000 ಕೋಟಿ) ರಸ್ತೆ ಕಾಮಗಾರಿಗೆ ವ್ಯಯಿಸುತ್ತಿದ್ದರೆ, ಮಳೆ ಪ್ರವಾಹದ ನಂತರ ಮಳೆನೀರು ಚರಂಡಿಗಳನ್ನು ಮರುರೂಪಿಸಲು ಸರ್ಕಾರವು 1,850 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿತು. ಹೆಚ್ಚಿನ ಸಾಂದ್ರತೆಯ ಕಾರಿಡಾರ್‌ಗಳನ್ನು ಸುಧಾರಿಸಲು ಸರ್ಕಾರವು 273 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ವೈಟ್ ಟಾಪಿಂಗ್‌ಗೆ 1,400 ಕೋಟಿ

ವೈಟ್ ಟಾಪಿಂಗ್‌ಗೆ 1,400 ಕೋಟಿ

ಹೊಸ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಇನ್ನೂ ರೂ 1,400 ಕೋಟಿ ಮತ್ತು ಮೇಲ್ಸೇತುವೆಗಳು ಮತ್ತು ರಸ್ತೆ-ಡಾಂಬರೀಕರಣ ಕಾಮಗಾರಿಗಳಿಗೆ ರೂ 3,000 ಕೋಟಿಗಳನ್ನು ಕೋರಿದೆ. ಆದರೆ ಬಿಬಿಎಂಪಿ ಇನ್ನೂ ಮಂಜೂರು ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಬಿಬಿಎಂಪಿ ಪ್ರಸ್ತುತ ಹಣವನ್ನು ಹಂಚಿಕೆ ಮಾಡುವ ವ್ಯವಸ್ಥೆಯನ್ನು ಅವೈಜ್ಞಾನಿಕ ವಿಧಾನ ಎಂದು ಕರೆದರು. ಇದು ಅಭಿವೃದ್ಧಿಯ ಮಾನದಂಡಗಳನ್ನು ಅನುಸರಿಸುವುದಿಲ್ಲ ಅಥವಾ ಹಿಂದಿನ ಹಂಚಿಕೆಗಳ ಫಲಿತಾಂಶವನ್ನು ಅಳೆಯುವುದಿಲ್ಲ ಎಂದರು.

ಹಣವನ್ನು ವಿನಿಯೋಗಿಸುವ ತಾತ್ಕಾಲಿಕ ಮಾರ್ಗ

ಹಣವನ್ನು ವಿನಿಯೋಗಿಸುವ ತಾತ್ಕಾಲಿಕ ಮಾರ್ಗ

ನಾಗರೋತ್ಥಾನ ಕಾರ್ಯಕ್ರಮವು ಹಣವನ್ನು ವಿನಿಯೋಗಿಸುವ ತಾತ್ಕಾಲಿಕ ಮಾರ್ಗವಾಗಿದೆ. ನಮಗೆ ಬೇಕಾಗಿರುವುದು ಕೇಂದ್ರ ಹಣಕಾಸು ಆಯೋಗದಂತೆಯೇ ಸುಸ್ಥಾಪಿತ ಮತ್ತು ಸ್ವತಂತ್ರ ರಾಜ್ಯ ಹಣಕಾಸು ಆಯೋಗದಿಂದ ಅನುದಾನ ವಿಕೇಂದ್ರೀಕರಣವಾಗಿದೆ. ಅನುದಾನವನ್ನು ನಿರ್ಧರಿಸುವ ಮೊದಲು ಸಾರ್ವಜನಿಕ ಸಾರಿಗೆ, ಶಾಲೆಗಳು ಮತ್ತು ಶೌಚಾಲಯಗಳಂತಹ ವಿವಿಧ ಅಭಿವೃದ್ಧಿ ಸೂಚ್ಯಂಕವನ್ನು ಅಳೆಯುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+