ಅನಂತ್ಕುಮಾರ್ ಹೆಗಡೆ ಪೋಸ್ಟ್ಗೆ ರಾಮಲಿಂಗಾ ರೆಡ್ಡಿ ಕಮೆಂಟ್
ಬೆಂಗಳೂರು, ಡಿಸೆಂಬರ್ 15: ಕೇಂದ್ರ ಅನಂತ್ಕುಮಾರ್ ಹೆಗಡೆ ಅವರು ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಬರಹ ವಿವಾದ ಹುಟ್ಟುಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಕಾ-ಬೇಕಾ ತಪರಾಕಿ ಎಂಬ ವ್ಯಂಗ್ಯದ ಬಾಣದಿಂದಲೇ ಬರಹ ಪ್ರಾರಂಭಿಸಿರುವ ಅನಂತ್ಕುಮಾರ್ ಹೆಗಡೆ ತಮ್ಮ ಪೋಸ್ಟ್ನಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ನಾಲಾಯಕ್ ಎಂದು ಕರೆದಿದ್ದಾರೆ. ಅಷ್ಟೆ ಅಲ್ಲ ಮುಂದಿದೆ ಮಾರಿಹಬ್ಬ ಎಂದು ಬೆದರಿಕೆಯನ್ನೂ ಹಾಕಿದ್ದಾರೆ.
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಗೃಹಸಚಿವರು 'ಈಗ ಮಾಡಿರುವ ಗಲಭೆ, ಗಲಾಟೆಗಳು ಇಲ್ಲಿಗೆ ನಿಲ್ಲಲ್ಲ ಇನ್ನೂ ಮುಂದುವರೆಯುತ್ತವೆ ಎಂಬುದನ್ನು ಸೂಚ್ಯವಾಗಿ 'ಮುಂದಿದೆ ಮಾರೀಹಬ್ಬ' ಎಂದು ಅನಂತ್ ಕುಮಾರ್ ಅವರು ಹೇಳುತ್ತಿದ್ದಾರೆ. ಬಿಜೆಪಿ ಉದ್ದೇಶಪೂರ್ವಕವಾಗಿ ಗಲಭೆ ಮಾಡಿಸುತ್ತಿರುವುದನ್ನು ಅವರೇ ಒಪ್ಪಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ನಾನು ಫಿಟ್ ಆಗಿಯೇ ಇದ್ದೀನಿ
ಅನಂತ್ ಕುಮಾರ್ ಅವರು ತಮ್ಮ ಫೋಸ್ಟ್ನಲ್ಲಿ ಸಚಿವರನ್ನು ನಾಲಾಯಕ್ ಎಂದಿರುವ ಬಗ್ಗೆ ಕೋಪದಿಂದ ಪ್ರತಿಕ್ರಿಯಿಸಿದ ಅವರು, ನಾನು ಫಿಟ್ ಆಗಿಯೇ ಇದ್ದೇನೆ, ಅನಂತ್ಕುಮಾರ್ ಹೆಗಡೆ ನಾಲಾಯಕ್ ಆತ ಮೊದಲು ಆತನ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಲಿ ಎಂದರು.

ಬೆಂಕಿ ಹಚ್ಚುವ ಮಂತ್ರಿ ಸ್ಥಾನ ನೀಡಿ
ಅನಂತ್ಕುಮಾರ್ ಹೆಗಡೆಗೆ ನೀಡಿರುವ ಸಚಿವ ಸ್ಥಾನ ಸರಿಯಿಲ್ಲ ಅವರಿಗೆ 'ಬೆಂಕಿ ಸಚಿವ' 'ಜಗಳ ಸಚಿವ' 'ಸುಳ್ಳು ಸಚಿವ' ಸ್ಥಾನಗಳು ಅವರಿಗೆ ಸೂಕ್ತವಾಗಿ ಹೊಂದಿಕೆ ಆಗುತ್ತವೆ ಎಂದು ರಾಮಲಿಂಗಾರೆಡ್ಡಿ ಅವರು ಅನಂತ್ ಕುಮಾರ್ ಹೆಗಡೆ ಅವರ ಕಾಲೆಳೆದರು.

ಹೆಣದ ಸುತ್ತ ರಾಜಕೀಯ
ಗಲಭೆ ಮಾಡಿದವರನ್ನು ಹಿಂದೂ ಕಾರ್ಯಕರ್ತರು ಎನ್ನಬೇಡಿ, ಬಿಜೆಪಿ ಕಾರ್ಯಕರ್ತರು ಎನ್ನಿ, ಬಿಜೆಪಿ ತನ್ನ ಕಾರ್ಯಕರ್ತರನ್ನು ಬಳಸಿ ಬೇಕೆಂದೇ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ತಂತ್ರ ಮಾಡುತ್ತಿದೆ, ಚುನಾವಣೆಗೆ ಓಟು ಗಳಿಸಲು ಬಿಜೆಪಿಯ ಹೆಣೆದಿರುವ ತಂತ್ರ ಇದು, ಸತ್ತ ಹೆಣದ ಸುತ್ತ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಖಾರವಾಗಿ ನುಡಿದರು.

ಪೊಲೀಸರು ಕೈಕಟ್ಟಿ ಕೂತಿಲ್ಲ
ಹಿಂದೂ ಕಾರ್ಯಕರ್ತರ ಮೇಲೆ ಕೇಸು ಹಾಕಿ ಜೈಲಿಗೆ ಕಳಿಸಿದುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು 'ಕಲ್ಲು ತೂರಾಟ ಮಾಡಿ, ಬಸ್ಸುಗಳಿಗೆ, ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ ಪುಂಢರನ್ನು ಜೈಲಿಗೆ ಕಳಿಸದೆ ಹಾರ ಹಾಕಬೇಕಿತ್ತಾ, ಪೊಲೀಸರು ಕೈಕಟ್ಟಿ ಕೂತಿದ್ದಾರೆ ಎಂದು ಕೊಂಡಿದ್ದಾರಾ ಅವರು ಎಂದು ಪ್ರಶ್ನಿಸಿದರು.

ಕ್ರಿಯಾತ್ಮಕ ಚರ್ಚೆ ಮಾಡಿ
ಸಾಕ್ಷ್ಯ ನಾಶ ಮಾಡಿದ ನಂತರ ಪರೇಶ ಮೇಸ್ತ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ ಎಂಬ ಆರೋಪದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು ಸಾಕ್ಷ್ಯ ನಾಶ ಮಾಡಿದ್ದರೆ ಆ ಬಗ್ಗೆಯೂ ಸಿಬಿಐ ಅವರೇ ಪ್ರತ್ಯೇಕ ತನಿಖೆ ಮಾಡಿಬಿಡಲಿ ನಮ್ಮ ಅಭ್ಯಂತರವೇನೂ ಇಲ್ಲ ಎಂದರು. ಬಿಜೆಪಿಯವರು ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುವುದು ಬಿಟ್ಟು ಕ್ರಿಯಾತ್ಮಕ ಚರ್ಚೆ ಮಾಡಬೇಕು.

ರವಿ, ನಂದಿನಿ ಪ್ರಕರಣ ಏನಾಯಿತು?
ಪ್ರತಿ ಕೇಸನ್ನೂ ಸಿಬಿಐಗೆ ಒಪ್ಪಿಸುವಂತೆ ಕೇಳುವುದು ಬಿಜೆಪಿಯ ನಿತ್ಯದ ಕೆಲಸವಾಗಿದೆ, ಡಿಕೆ ರವಿ ಪ್ರಕರಣ, ಶಿವಮೊಗ್ಗದ ನಂದಿನಿ ಪ್ರಕರಣಗಳಲ್ಲಿ ಕೂಡಾ ಹೀಗೆ ಸುಳ್ಳು ಹೇಳಿ ಹಠ ಮಾಡಿ ಸಿಬಿಐಗೆ ಒಪ್ಪಿಸುವಂತೆ ಮಾಡಿದರು ಆದರೆ ಆದದ್ದೇನು ಸಿಬಿಐ ಅವುಗಳನ್ನು ಸಹಜ ಸಾವೆಂದು ವರದಿ ನೀಡಿತು, ಬಿಜೆಪಿ ನೂರು ಬಾರಿ ಸುಳ್ಳನ್ನು ಹೇಳಿ ಅದನ್ನೇ ಸತ್ಯ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.
-
ಕೇರಳದಲ್ಲಿ ಬದಲಾವಣೆಯ ಪರ್ವ ಆರಂಭ: ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ಕೈಹಿಡಿಯಲಿದ್ದಾರೆ-ಡಿ.ಕೆ.ಶಿವಕುಮಾರ್ ಭವಿಷ್ಯ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
'By Election: ಕಾಂಗ್ರೆಸ್ನಿಂದ ವೀರಶೈವ ಲಿಂಗಾಯತರನ್ನು ಒಡೆಯುವ ಪ್ರಯತ್ನ'' -
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
ದಾವಣಗೆರೆ ಉಪಚುನಾವಣೆ: ಅಲ್ಪಸಂಖ್ಯಾತರ ಬೆಂಬಲ ಕಾಂಗ್ರೆಸ್ ಕಡೆ – ಸಲೀಂ ಅಹಮದ್ -
Baglkot By Poll:9 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸಾಧನೆ ಶೂನ್ಯ: ಗ್ಯಾರಂಟಿ ಯೋಜನೆಗಳ ಲೆಕ್ಕ ಕೊಟ್ಟ ಸಿದ್ದರಾಮಯ್ಯ -
Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ: ಶಿವಕುಮಾರ್ ಮೆಣಸಿನಕಾಯಿ ಬರಹ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ












Click it and Unblock the Notifications