Bengaluru Traffic: ಹೋಳಿ ಹಬ್ಬ ಜಾಲಿ ಜಾಲಿ...ಪ್ರಮುಖ ರಸ್ತೆಗಳು ಖಾಲಿ..ಖಾಲಿ..
ಬೆಂಗಳೂರು, ಮಾರ್ಚ್ 14: ಭಾರೀ ಸಂಚಾರ ದಟ್ಟಣೆಯ ಕುಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿ, ಮಹಾನಗರ ಬೆಂಗಳೂರಲ್ಲಿ ಶುಕ್ರವಾರ ಮಹತ್ವದ ಸಂಗತಿಗೆ ಸಾಕ್ಷಿಯಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳು, ಅದರಲ್ಲೂ ಹೊರ ವರ್ತುಲ ರಸ್ತೆ ಖಾಲಿ ಖಾಲಿಯಾಗಿದ್ದು ಕಂಡು ಬಂತು. ಬೆಂಗಳೂರಿನಲ್ಲಿ ಇಂತಹ ಅಸಮಾನ್ಯ ದೃಶ್ಯ ಕಾಣುವುದು ತೀರಾ ವಿರಳ. ರಸ್ತೆ ಖಾಲಿ ಇರುವುದನ್ನು
ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಹೋಳಿ ಹಬ್ಬದಂದು ಅಸಾಮಾನ್ಯ ದೃಶ್ಯಕ್ಕೆ ಸಾಕ್ಷಿಯಾಗಿದೆ. ಈ ಕುರಿತು ನಮ್ಮ ಬೆಂಗಳೂರು ಎಕ್ಸ್ ಖಾತೆಯಲ್ಲಿ ORR ರಸ್ತೆಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದಲ್ಲೆ ನಕ್ಷೆ ಮ್ಯಾಪ್ನಲ್ಲಿ ಎಲ್ಲೂ ಸಂಚಾರ ದಟ್ಟಣೆಯ ಕೆಂಪು ಗುರುತು ಇಲ್ಲದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಹೋಳಿ ಹಬ್ಬದಂದು ಸುಗಮ ಸಂಚಾರ ಹರಿವು ಕಂಡು ಬಂದಿದೆ.

ಬಣ್ಣದೋಕುಳಿಯಲ್ಲಿ ಮಿಂದು ಜನ ಜಾಲಿ, ರಸ್ತೆಗಳು ಖಾಲಿ..
ಹೋಳಿ ಹಬ್ಬದಂದು ಶುಕ್ರವಾರ ಅನೇಕ ಕಂಪನಿಗಳಿಗೆ ರಜೆ ನೀಡಲಾಗಿದೆ. ಕೆಲವೆಡೆ ಅಂಗಡಿ ಮುಂಗಟ್ಟುಗಳು, ಶಾಲೆ ಮತ್ತು ಕಾಲೇಜುಗಳು, ಬ್ಯಾಂಕ್ಗಳಿಗೆ ರಜೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜನರು ರಜೆಯ ಮೋಜು ಮಸ್ತಿಯಲ್ಲಿ ಜಾಲಿ ಮಾಡುತ್ತಿದ್ದಾರೆ. ಕೆಲವರಂತು ಸ್ನೇಹಿತರ ಜೊತೆಗೂಡು ಬಣ್ಣದೋಕುಳಿ ಆಡಿ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಐಟಿ ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಮುಖ್ಯವಾಗಿ ಹೊರ ವರ್ತುಲ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು. ಎಂದಿನಂತೆ ದಟ್ಟಣೆ, ವಾಹನಗಳ ಸಂಚಾರ ಇರಲಿಲ್ಲಿಲ್ಲ.
ನಿತ್ಯ ಜನಜಂಗುಳಿ, ಸಿಗ್ನಲ್, ಟ್ರಾಫಿಕ್, ವಾಹನಗಳು ಹೆಚ್ಚಿರುವ ORR ರಸ್ತೆ ಇಂದು ಶುಕ್ರವಾರ ಪೀಕ್ ಸಮಯದಲ್ಲೇ ಖಾಲಿ ಖಾಲಿ ಇದ್ದದ್ದು ಕಂಡು ಬಂತು. ಒಂದೇ ದಿನದಲ್ಲಿ ಇಷ್ಟೊಂದು ವ್ಯತ್ಯಾಸ, ಸುಗಮ ಸಂಚಾರಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. 'ಹೋಳಿ ಪ್ರಯುಕ್ತ ಬೆಂಗಳೂರು ಓಆರ್ಆರ್ ರಸ್ತೆ ನೋಡಿ' ಎಂದು ಪೋಸ್ಟ್ನೊಂದಿಗೆ ಬರೆಯಲಾಗಿದೆ.
364 ದಿನವು ಹೋಳಿ ಆಚರಿಸಬೇಕು!
ಈ ಪೋಸ್ಟ್ಗೆ ಕಾಮೆಂಟ್ ಮಾಡಿದ ಕೆಲವರಲ್ಲಿ ಒಬ್ಬರು 364 ದಿನವು ನಾವು ಹೋಳಿ ಆಚರಿಸಬಹುದೆ ಎಂದು ಕೇಳಿದ್ದಾರೆ. ಬೆಂಗಳೂರಿನ ದಟ್ಟಣೆಗೆ ಬೇಸತ್ತು, ಆರಾಮದಾಯಕ ಸಂಚಾರ ಎದುರು ನೋಡುತ್ತಾ ಈ ರೀತಿ ಹೇಳಿದ್ದಾರೆ. ಸುಗಮ ಸಂಚಾರ ಸಿಗಬೇಕಾದರೆ ವರ್ಷವಿಡೀ ಹೋಳಿ ಮಾಡಬೇಕು ಎಂಬ ಅರ್ಥದಲ್ಲಿ ತಿಳಿಸಿದ್ದಾರೆ.
Today’s Holi, Namma Bengaluru ORR Traffic has taken a Holi-Day 😍 pic.twitter.com/tNnbsY9cWH
— ನಮ್ಮ ಬೆಂಗಳೂರು Namma Bengaluru (@NammaBengaluroo) March 14, 2025
20 ಕಿಮೀ ಕ್ರಮಿಸಲು 35 ನಿಮಿಷ
ಇಂದು 20 ಕಿಮೀ ಕ್ರಮಿಸಲು ಬರೀ 35 ನಿಮಿಷಗಳನ್ನು ತೆಗೆದುಕೊಂಡಿದ್ದೇವೆ. ಇದೇ ಸಾಮಾನ್ಯ ದಿನಗಳಲ್ಲಿ ಆದರೆ 1 ಕಿಮೀ 35 ನಿಮಿಷಗಳನ್ನು ತೆಗೆದುಕೊಳ್ಳುತ್ತಿತ್ತು. ಇದಕ್ಕೆಲ್ಲ ಹೆಚ್ಚು ಸಮಯ, ಇಂಧನ ವ್ಯರ್ಥ ಆಗುತ್ತಿದೆ ಎಂದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ಟೀಕಿಸಿದರು.

ಬೆಂಗಳೂರಿನ ಹೊರ ವರ್ತುಲ ರಸ್ತೆಯಾದ ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳವರೆಗೆ ನಮ್ಮ ಮೆಟ್ರೋದ ನೀಲಿ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಇದು ವಾಣಿಜ್ಯ ಕಾರ್ಯಾಚರಣೆಗೆ ತೆರೆದರೆ ಉತ್ತಮ, ಸುಗಮ ಸಂಚಾರ ಸಾಧ್ಯವಾಗುತ್ತದೆ. ಸರ್ಕಾರ ರಸ್ತೆಗುಂಡಿ ದುರಸ್ಥಿ, ರಸ್ತೆಗಳ ಸುಧಾರಣೆ, ಅಗತ್ಯ ಮೂಲ ಸೌಕರ್ಯ ಕಲ್ಪಿಸಿದರೆ ಉತ್ತಮ ಸಂಚಾರ ಸಂಚಾರಕ್ಕೆ ಅವಕಾಶ ಸಿಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಆದ್ಯತೆ ನೀಡಬೇಕು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications