ಟಿಜಿ ಜಲಾಶಯ ಬಳಿ ಇಂಧನ ಘಟಕಕ್ಕೆ ಹೈಕೋರ್ಟ್ ಅಸ್ತು
ಬೆಂಗಳೂರು, ಅ.30: ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೂಲಗಳಲ್ಲಿ ಒಂದೆನಿಸಿರುವ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಹೈಕೋರ್ಟ್ ಅನುಮತಿ ನೀಡಿದೆ.
ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವ ಗೊರೂರು ಗ್ರಾಮದಲ್ಲಿ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಸತರೆಮ್ ಎಂಟರ್ಪ್ರೈಸಸ್ ಕಂಪೆನಿಗೆ ಹೈಕೋರ್ಟ್ ಪೀಠ ಮಧ್ಯಂತರ ಅನುಮತಿ ನೀಡಿದೆ.
ವಿದ್ಯುತ್ ಘಟಕ ಸ್ಥಾಪನೆಗೆ ರಾಜ್ಯ ಸರಕಾರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅನುಮತಿ ನೀಡಿತ್ತು. ಈ ಅನುಮತಿಯನ್ನು ಪ್ರಶ್ನಿಸಿ ಗೊರೂರು ಗ್ರಾಮದ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.
ಅರ್ಜಿ
ವಿಚಾರಣೆ
ನಡೆಸಿದ
ಹಂಗಾಮಿ
ನ್ಯಾಯಮೂರ್ತಿ
ಎಸ್.ಕೆ.ಮುಖರ್ಜಿ
ಮತ್ತು
ಬಿ.ವಿ.ನಾಗರತ್ನ
ಅವರಿದ್ದ
ವಿಭಾಗೀಯ
ಪೀಠ
ವಕೀಲರ
ವಾದ
ಪ್ರತಿವಾದವನ್ನು
ಆಲಿಸಿ
ಸತರೆಮ್
ಎಂಟರ್ಪ್ರೈಸೆಸ್
ಕಂಪೆನಿಗೆ
ತ್ಯಾಜ್ಯ
ವಿದ್ಯುತ್
ಉತ್ಪಾದನಾ
ಘಟಕ
ಸ್ಥಾಪನೆಗೆ
ಮಧ್ಯಂತರ
ಅನುಮತಿ
ನೀಡಿದೆ.
ಈ
ವಿದ್ಯುತ್
ಘಟಕ
ಸ್ಥಾಪನೆಯಿಂದ
ಸಾವಿರಾರು
ಜನರಿಗೆ
ಅನುಕೂಲವಾಗಲಿದೆ
ಎಂದು
ಖಾಸಗಿ
ಕಂಪೆನಿ
ಪರ
ವಕೀಲರು
ಮಂಡಿಸಿದ
ವಾದ
ಪುರಸ್ಕರಿಸಿದ
ನ್ಯಾಯಾಧೀಶರು
ಘಟಕ
ಸ್ಥಾಪನೆಗೆ
ಅನುಮತಿ
ನೀಡಿದರು.
ಸತರೆಮ್ ಕಂಪೆನಿ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡಿಸಿ, ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ನಿಷೇಧ ಹೇರಿ 2003ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ಕೈಗಾರಿಕೆಗಳು ಸ್ಥಾಪನೆಗೊಂಡವು. 2014ರ ಜುಲೈ 24ರಂದು ಸರಕಾರ 2003ರಲ್ಲಿ ಹೊರಡಿಸಿದ್ದ ಅಧಿಸೂಚನೆ ಹಿಂಪಡೆದಿದೆ.
ಇದೀಗ ವಿದ್ಯುತ್ ಘಟಕ ಸ್ಥಾಪಿಸಲು ಯಾವುದೇ ಕಾನೂನು ಅಡ್ಡಿಯಿಲ್ಲ. ವಿದ್ಯುತ್ ಉತ್ಪಾದನಾ ಘಟಕವನ್ನು ವೈಜ್ಞಾನಿಕ ವಿಧಾನದ ಮೂಲಕ ಮಾಡಲಾಗುವುದು. ಇದರಿಂದ ತಿಪ್ಪಗೊಂಡನಹಳ್ಳಿಯ ಜಲಾಶಯ ಅಥವಾ ಸುತ್ತಲಿನ ಪ್ರದೇಶದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ಕೆಎಸ್ಪಿಸಿಬಿ ಪರ ವಕೀಲರಾದ ಗುರುರಾಜ್ ಜೋ ವಾದಿಸಿ, ವಿದ್ಯುತ್ ಘಟಕ ಸ್ಥಾಪನೆಗೆ ಸತರೆಮ್ ಕಂಪೆನಿಗೆ ನಿರಾಕ್ಷೇಪಣಾ ಪತ್ರ ನೀಡಲಾಗಿದೆ. ತ್ಯಾಜ್ಯದಿಂದ ವಿದ್ಯುತ್ನ್ನು ಉತ್ಪಾದನೆ ಮಾಡುವುದರಿಂದ ಗೊರೂರು ಗ್ರಾಮದ ಪರಿಸರ ಹಾಳಾಗುವುದು ಮತ್ತು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶಕ್ಕೆ ಧಕ್ಕೆಯಾಗಲಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.