ಸಿಲಿಕಾನ್ ಸಿಟಿ ಜನತೆಯನ್ನು ಕಂಗೆಡಿಸಿದ ಧಾರಾಕಾರ ಮಳೆ
ಬೆಂಗಳೂರು, ಸೆಪ್ಟೆಂಬರ್ 8: ಸಂಜೆಯಾಗುತ್ತಿದ್ದಂತೆ ಮತ್ತೆ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆ ಸುರಿಯಲು ಆರಂಭಿಸಿದೆ. ಹೆಚ್ಚಿನ ಎಲ್ಲಾ ಪ್ರದೇಶಗಳಲ್ಲಿ ಮಲೆನಾಡಿನಂತೆ ಭಾರೀ ಮಳೆ ಸುರಿದಿದ್ದು ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟವರು ರಸ್ತೆಗಳಲ್ಲಿ ಬಾಕಿಯಾಗಿದ್ದಾರೆ.
ನಗರದ ಎಂಎಂ ಟೆಂಪಲ್, ಉದಯ ಟಿವಿ, ಬೆಳಕಲ್ ಹಳ್ಳಿ, ಸೋನಿವರ್ಲ್ಡ್, ಕಲ್ಯಾಣ ನಗರ, ಜಯನಗರ, ಹನುಮಂತನಗರ, ಬಸವನಗುಡಿ, ವಿಲ್ಸನ್ ಗಾರ್ಡನ್, ಆಡುಗೋಡಿ, ಕೋರಮಂಗಲ, ಪಿಜಿ ಹಳ್ಳಿ, ಕ್ವೀನ್ಸ್ ಸರ್ಕಲ್, ಕಸ್ತೂರಿ ನಗರ, ಎಂಜಿ ರಸ್ತೆ, ಬಾಳೇಕುಂದ್ರಿ, ಟ್ರಿನಿಟಿ ಸರ್ಕಲ್, ಇಂದಿರಾ ನಗರ, ಮಡಿವಾಳ, ಮಾರುತಿ ವೃತ್ತ, ವರ್ತೂರು ಕೆರೆ, ಟೌನ್ ಹಾಲ್ ಸುತ್ತ ಮುತ್ತ ಭಾರೀ ಮಳೆ ಸುರಿದಿದೆ. ಕೆಲವೆಡೆ ಇನ್ನೂ ಮಳೆ ಸುರಿಯುತ್ತಲೇ ಇದೆ.

ಕಲ್ಯಾಣ ನಗರ, ಕಸ್ತೂರಿ ನಗರ, ಎಂಜಿ ರಸ್ತೆ, 80 ಅಡಿ ರಸ್ತೆ, ಫ್ರೇಜರ್ ಟೌನ್, ಲೋಕಾಯುಕ್ತ ಕಚೇರಿ ಮುಂಭಾಗ, ಕ್ವೀನ್ಸ್ ಜಂಕ್ಷನ್, ವಿಠಲ್ ಮಲ್ಯ ರಸ್ತೆ, ಹಳೆ ವಿಮಾನನಿಲ್ದಾಣ ರಸ್ತೆ, ಸಿಬಿ ರಸ್ತೆ ಜಂಕ್ಷನ್, ಅಲಿ ಅಸ್ಗರ್ ರಸ್ತೆ, ಡೆಲ್ ಬಸ್ ನಿಲ್ದಾಣ, 100 ಅಡಿ ರಸ್ತೆ, ಎಚ್.ಎಸ್.ಬಿ.ಸಿ ಜಂಕ್ಷನ್, ಬಿ.ಜಿ ರಸ್ತೆ ಸೇರಿ ಹಲವು ಕಡೆಗಳಲ್ಲಿ ರಸ್ತೆ ಮೇಲೆ ಭಾರೀ ನೀರು ನಿಂತಿದ್ದು ಪ್ರಯಾಣಿಕರು ನೀರಿನ ಮಧ್ಯೆಯೇ ಕಷ್ಟಪಟ್ಟು ವಾಹನ ಚಲಾಯಿಸಿಕೊಂಡು ಮನೆ ತಲುಪುತ್ತಿದ್ದಾರೆ.
ಹನುಮಂತನಗರ ಸುತ್ತ ವಾಹನ ದಟ್ಟಣೆ ಹೆಚ್ಚಾಗಿದ್ದು ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
Water Logging at many places including MG Road, Anil Kumble Jn, CTO, etc pic.twitter.com/oDejqkQP1D
— DCP Traffic East (@DCPTrEastBCP) September 8, 2017
ಮಳೆಯಿಂದ ಬಾಳೆಕುಂದ್ರಿ ವೃತ್ತ, ಜಯನಗರದ ಮಾಧವನ್ ಪಾರ್ಕ್ ಪಕ್ಕ ಮರ ಉರುಳಿ ಬಿದ್ದಿದೆ. ಇನ್ನು ಜಯನಗರ ಅಶೋಕ ಪಿಲ್ಲರ್ ಸಮೀಪ ಭಾರೀ ಗಾತ್ರದ ಮರ ಉರುಳಿ ಬಿದ್ದಿದೆ. ಹನುಮಂತನಗರದಲ್ಲಿ ಮಳೆಯಿಂದಾಗಿ ಕರೆಂಟ್ ಕಂಬವೊಂದು ಧರೆಗುರುಳಿದೆ. ಕೆಲವು ಕಡೆಗಳಲ್ಲಿ ಮರಗಳು ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ.
@AddlCPTraffic @DCPTrEastBCP @ACP_TrafficEast Regulating traffic at water logging spot,kasthurinagar down ramp in raining heavly at 8-30 pm pic.twitter.com/Jeg8o5C9Tu
— K R PURAM TRAFFIC (@krpuramtraffic1) September 8, 2017
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ











Click it and Unblock the Notifications